ಬೆಂಗಳೂರು: ಖಾಸಗಿ ಕಾರ್ಯಕ್ರಮ ನಿಮಿತ್ತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ.ನಡ್ಡಾ ಆಗಮಿಸಿದರು.
ಬೆಂಗಳೂರಿಗೆ ಬಂದ ಜೆ ಪಿ ನಡ್ಡಾರನ್ನು ಸ್ವಾಗತಿಸಲು ಬಿಜೆಪಿಯ ಸಚಿವರ ದಂಡು ಆಗಮಿಸಿತ್ತು. ಡಿಸಿಎಂ ಅಶ್ವಥ್ ನಾರಾಯಣ್ , ಆರ್. ಅಶೋಕ್, ಸದಾನಂದಗೌಡ, ಭೈರತಿ ಬಸವರಾಜ್, ಸಿ.ಟಿ. ರವಿ, ಅರವಿಂದ್ ಲಿಂಬಾವಳಿ ಸೇರಿ ಹಲವರು ಭಾಗಿಯಾಗಿದ್ದರು.