ETV Bharat / city

ತಂದೆಯ ಕಣ್ತಪ್ಪಿಸಿ ಬಂದ ಯುವತಿ... ಬಸ್​​ ನಿಲ್ದಾಣದ ಕಟ್ಟಡದಿಂದ ಜಿಗಿದು ಆತ್ಮಹತ್ಯೆ! -

ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಳೆನ್ನಲಾದ ಯುವತಿವೋರ್ವಳು ಇಂದು ಸಾವಿನ ಮನೆಯ ಕದ ತಟ್ಟಿದ್ದಾಳೆ. ಬಸ್​ ನಿಲ್ದಾಣದ ಕಟ್ಟಡವೇರಿದ್ದ ಈಕೆ ಮೇಲಿಂದ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.

ಆತ್ಮಹತ್ಯೆ
author img

By

Published : May 20, 2019, 10:25 PM IST

ಬಳ್ಳಾರಿ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಯುವತಿವೋರ್ವಳು ಸರ್ಕಾರಿ ಬಸ್​ ನಿಲ್ದಾಣದ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಅಶ್ವಿನಿ (23) ಮೃತ ಯುವತಿ. ಈಕೆಗೆ ಮಾನಸಿಕ ತೊಂದರೆಯಿರುವ ಕಾರಣ ಪೋಷಕರು ಮನಃಶಾಸ್ತ್ರಜ್ಞರ ಬಳಿ ಚಿಕಿತ್ಸೆ ಕೊಡಿಸುತ್ತಿದ್ದರು ಎಂದು ತಿಳಿದುಬಂದಿದೆ.

ಇಂದು ಬೆಳಗ್ಗೆ ಕನಕಗಿರಿಯಿಂದ ತಂದೆ-ಮಗಳು ಹುಬ್ಬಳ್ಳಿಗೆ ಹೋಗಬೇಕಿತ್ತು. ಅಲ್ಲಿನ ಬಸ್​ ನಿಲ್ದಾಣದ ಹೋಟಲ್​ವೊಂದರಲ್ಲಿ ಇಬ್ಬರು ಉಪಹಾರ ಸೇವಿಸುತ್ತಿರುವಾಗ ಅಶ್ವಿನಿ ಹೊರ ಬಂದಿದ್ದಳು. ಶೌಚಾಲಯಕ್ಕೆ ಹೋಗಿರಬಹುದೆಂದು ತಂದೆ ಸುಮ್ಮನಾಗಿದ್ದರು, ಆದರೆ ಅಶ್ವಿನಿ ಬಸ್​ ಏರಿ ಹೊಸಪೇಟೆಗೆ ಬಂದಿದ್ದಳು.

ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿ ಬಸ್​ ನಿಲ್ದಾಣದ ಕಟ್ಟಡದಿಂದ ಹಾರಿ ಆತ್ಮಹತ್ಯೆ

ಬಳಿಕ ಹೊಸಪೇಟೆಯ ಬಸ್​​ ನಿಲ್ದಾಣದ ಲಾಡ್ಜ್​​ವೊಂದರಲ್ಲಿ ತನ್ನ ತಂದೆ-ತಾಯಿ ಊರಿನಿಂದ ಬರುತ್ತಿದ್ದಾರೆ. ಅಂಕಪಟ್ಟಿ ಮೆರತು ಬಂದಿದ್ದು, ಅವರು ತರುತ್ತಿದ್ದಾರೆ ಎಂದು ಹೇಳಿ ರೂಂ ಬುಕ್​ ಮಾಡಿದ್ದಳಂತೆ. ಆದ್ರೆ ಬಸ್​ ನಿಲ್ದಾಣದ ಮೇಲೇರಿ ಅಲ್ಲಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಳ್ಳಾರಿ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಯುವತಿವೋರ್ವಳು ಸರ್ಕಾರಿ ಬಸ್​ ನಿಲ್ದಾಣದ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಅಶ್ವಿನಿ (23) ಮೃತ ಯುವತಿ. ಈಕೆಗೆ ಮಾನಸಿಕ ತೊಂದರೆಯಿರುವ ಕಾರಣ ಪೋಷಕರು ಮನಃಶಾಸ್ತ್ರಜ್ಞರ ಬಳಿ ಚಿಕಿತ್ಸೆ ಕೊಡಿಸುತ್ತಿದ್ದರು ಎಂದು ತಿಳಿದುಬಂದಿದೆ.

ಇಂದು ಬೆಳಗ್ಗೆ ಕನಕಗಿರಿಯಿಂದ ತಂದೆ-ಮಗಳು ಹುಬ್ಬಳ್ಳಿಗೆ ಹೋಗಬೇಕಿತ್ತು. ಅಲ್ಲಿನ ಬಸ್​ ನಿಲ್ದಾಣದ ಹೋಟಲ್​ವೊಂದರಲ್ಲಿ ಇಬ್ಬರು ಉಪಹಾರ ಸೇವಿಸುತ್ತಿರುವಾಗ ಅಶ್ವಿನಿ ಹೊರ ಬಂದಿದ್ದಳು. ಶೌಚಾಲಯಕ್ಕೆ ಹೋಗಿರಬಹುದೆಂದು ತಂದೆ ಸುಮ್ಮನಾಗಿದ್ದರು, ಆದರೆ ಅಶ್ವಿನಿ ಬಸ್​ ಏರಿ ಹೊಸಪೇಟೆಗೆ ಬಂದಿದ್ದಳು.

ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿ ಬಸ್​ ನಿಲ್ದಾಣದ ಕಟ್ಟಡದಿಂದ ಹಾರಿ ಆತ್ಮಹತ್ಯೆ

ಬಳಿಕ ಹೊಸಪೇಟೆಯ ಬಸ್​​ ನಿಲ್ದಾಣದ ಲಾಡ್ಜ್​​ವೊಂದರಲ್ಲಿ ತನ್ನ ತಂದೆ-ತಾಯಿ ಊರಿನಿಂದ ಬರುತ್ತಿದ್ದಾರೆ. ಅಂಕಪಟ್ಟಿ ಮೆರತು ಬಂದಿದ್ದು, ಅವರು ತರುತ್ತಿದ್ದಾರೆ ಎಂದು ಹೇಳಿ ರೂಂ ಬುಕ್​ ಮಾಡಿದ್ದಳಂತೆ. ಆದ್ರೆ ಬಸ್​ ನಿಲ್ದಾಣದ ಮೇಲೇರಿ ಅಲ್ಲಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Intro: ಬಸ್ಸ್ ನಿಲ್ದಾಣದ ಒಂದನೇ ಮಹಡಿದಿಂದ ಹಾರಿ ಯುವತಿ ಸಾವು.

ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಹೊಸ ಬಸ್ಸ್ ನಿಲ್ದಾಣದ ಮೇಲೆ ಭಾಗದ ಕಟ್ಟಣದಿಂದ ಹಾರಿ‌ಬಿದ್ದು ಸಾವನ್ನಪಿದ ಯುವತಿ

Body:ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಅಶ್ವಿನಿ ( 23 ವರ್ಷ ) ಮೃತ ಪಟ್ಟವರು. ಬಿ.ಎ ಮತ್ತು ಡಿ.ಎಡ್ ವಿದ್ಯಾರ್ಥಿ, ಮಾನಸಿಕವಾಗಿ ಸರಿಇಲ್ಲದ ಕಾರಣ ಮನಃಶಾಸ್ತ್ರ ವೈದ್ಯರ ಬಳಿ ಚಿಕಿತ್ಸೆಯನ್ನು ಪೋಷಕರು ನೀಡಿಸುತ್ತಿದ್ದರು.

ಇಂದು ಬೆಳಿಗ್ಗೆ ಕನಕಗಿರಿಯಿಂದ ತಂದೆ ಮಗಳು ಹುಬ್ಬಳ್ಳಿ ಹೋಗಬೇಕಾಗಿತ್ತು. ಬಸ್ಸ್ ನಿಲ್ದಾಣದ ಹೋಟಲ್ ನಲ್ಲಿ ತಂದೆ ಮತ್ತು ಮಗಳು
ಟಿಫನ್ ಮಾಡುವಾಗ, ನಂತರ ಮಗಳು ಶೌಚಾಲಯ ಹೋಗಿರ ಬಹುದು ಎಂದು ತಿಳಿದ ತಂದೆ ಆದ್ರೇ ಮಗಳು ಅಶ್ವಿನಿ ಹೊಸಪೇಟೆ ಬಸ್ಸ್ ಬಂದಿದೆ ಅದಕ್ಕೆ ಏರಿ ಹೊಸಪೇಟೆಗೆ ಬಂದಿದ್ದಾಳೆ.

ನಂತರ ಹೊಸಪೇಟೆ ಬಸ್ ನಿಲ್ದಾಣದ ಲಾಡ್ಜ್ ನಲ್ಲಿ ನನ್ನ ತಂದೆ ತಾಯಿ ಊರಿನಿಂದ ಬರ್ತಾ ಇದ್ದಾರೆ ಬಸ್ಸ್ ನಲ್ಲಿ ಬರುವಾಗ ನನ್ನ ಅಂಕಪಟ್ಟಿ ಕಳೆದಿದೆ ಅದನ್ನು ತೆಗೆದುಕೊಂಡು ಬರುತ್ತಿದ್ದಾರೆ ಎಂದು ಲಾಡ್ಜ್ ನವರಿಗೆ ಹೇಳಿ ರೂಮ್ ಬುಕ್ ಮಾಡಿ ನಂತರ ಬೆಳಿಗ್ಗೆ ಬಸ್ಸ್ ನಿಲ್ದಾಣ ಮೇಲಿಂದ ಹಾರಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ದೊರೆತಿದೆ.Conclusion:ಹೊಸಪೇಟೆಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.