ಅಥಣಿ : ಮದ್ಯದಂಗಡಿ ತೆರೆಯುವಂತೆ ಒತ್ತಾಯಿಸಿ ಮದ್ಯಪ್ರಿಯರು ಪ್ರತಿಭಟಿಸಿದ ಘಟನೆ ತಾಲೂಕಿನ ಸಂಬರಗಿ ಗ್ರಾಮದಲ್ಲಿ ನಡೆದಿದೆ. ಒಂದು ವೇಳೆ ಬಾರ್ ತೆರೆಯದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಮದ್ಯಪಾನಿಗಳು ಎಚ್ಚರಿಕೆಯನ್ನು ಸಹ ನೀಡಿದ್ದಾರೆ.
ಸಂಬರಗಿ ಗ್ರಾಮದಲ್ಲಿ ಕುಡುಕರ ಸಂಖ್ಯೆ ಹೆಚ್ಚಾದ ಕಾರಣ ಕನ್ನಡ ಪರ ಹೋರಾಟಗಾರರು, ಗ್ರಾಮದ ಮಹಿಳೆಯರು ಹಾಗೂ ಮುಖಂಡರು ಸೇರಿ ಸಹಿ ಸಂಗ್ರಹಿಸಿ ಮದ್ಯದಂಗಡಿ ಮುಚ್ಚುವಂತೆ ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.
ಆದ್ರೆ, ಇದನ್ನ ಮದ್ಯಪ್ರಿಯರು ವಿರೋಧಿಸಿದ್ದು, ಬಾರ್ ಸ್ಥಳಾಂತರ ಮಾಡಿದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದ್ದಾರೆ. ಒಟ್ಟಾರೆ ದಾರಿ ತಪ್ಪುತ್ತಿರುವ ಯುವ ಜನತೆಗೆ ಸರಿಪಡಿಸಲು ಒಂದು ಬಣ ಮದ್ಯದ ಅಂಗಡಿ ಮುಚ್ಚಿಸಿದ್ರೆ, ಇನ್ನೊಂದು ಬಣ ತೆರೆಯುವಂತೆ ಪ್ರತಿಭಟಿಸುತ್ತಿರುವುದು ನಗೆಪಾಟಿಲಿಗೆ ಕಾರಣವಾಗಿದೆ.