ETV Bharat / business

6 ದಿನದಲ್ಲಿ 1.47 ಲಕ್ಷ ರೂ. ಬಾಕಿ ಕೊಡುವಂತೆ ಟೆಲಿಕಾಂ ಕಂಪನಿಗಳಿಗೆ ಸುಪ್ರೀಂ ತಾಕೀತು

ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ ಮೊತ್ತ ಪ್ರಕರಣದಲ್ಲಿ ಅಕ್ಟೋಬರ್ 24ರಂದು ಕೇಂದ್ರದ ಪರ ತೀರ್ಪು ನೀಡಿದ್ದ ಸುಪ್ರೀಂ, 92.642 ಕೋಟಿ ರೂ. ಟೆಲಿಕಾಂ ಕಂಪನಿಗಳಿಂದ ವಸೂಲು ಮಾಡಲು ಅನುಮತಿ ನೀಡಿತ್ತು. 3 ತಿಂಗಳ ಒಳಗಡೆ ಈ ಹಣ ಪಾವತಿಸುವಂತೆ ಗಡುವು ಸಹ ಕೊಟ್ಟಿತ್ತು. ಈ ತೀರ್ಪನ್ನು ಪರಾಮರ್ಶಿಸುವಂತೆ ಅರ್ಜಿ ಸಲ್ಲಿಸಿದ್ದವು.

author img

By

Published : Jan 16, 2020, 10:09 PM IST

SC
ಸುಪ್ರೀಂ

ನವದೆಹಲಿ: ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಎಜಿಆರ್) ಮೊತ್ತದಲ್ಲಿ ಬಡ್ಡಿ ಮತ್ತು ದಂಡ ಪಾವತಿಗೆ ಸಂಬಂಧಿಸಿದಂತೆ ಈ ಹಿಂದೆ ನೀಡಿದ್ದ ತೀರ್ಪು ಅನ್ನು ಪರಾಮರ್ಶಿಸುವಂತೆ ಭಾರ್ತಿ ಏರ್​ಟೆಲ್ ಮತ್ತು ವೊಡಾಫೋನ್- ಐಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ವಜಾಗೊಳಿಸಿದೆ.

ಎಜಿಆರ್ ಪ್ರಕರಣದಲ್ಲಿ ಅಕ್ಟೋಬರ್ 24ರಂದು ಕೇಂದ್ರದ ಪರ ತೀರ್ಪು ನೀಡಿದ್ದ ಸುಪ್ರೀಂ, 92.642 ಕೋಟಿ ರೂ. ಟೆಲಿಕಾಂ ಕಂಪನಿಗಳಿಂದ ವಸೂಲು ಮಾಡಲು ಅನುಮತಿ ನೀಡಿತ್ತು. 3 ತಿಂಗಳ ಒಳಗಡೆ ಈ ಹಣ ಪಾವತಿಸುವಂತೆ ಗಡುವು ಸಹ ಕೊಟ್ಟಿತ್ತು. ಈ ತೀರ್ಪನ್ನು ಪರಾಮರ್ಶಿಸುವಂತೆ ಅರ್ಜಿ ಸಲ್ಲಿಸಿದ್ದವು.

ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಎಸ್​.ಎ ನಝೀರ್​ ಮತ್ತು ಎಂ. ಆರ್​ ಶಾ ಅವರಿದ್ದ ನ್ಯಾಯಪೀಠ ಭಾರತಿ ಏರ್​ಟೆಲ್ ಹಾಗೂ ವೋಡಾಫೋನ್- ಐಡಿಯಾ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದೆ. ಜನವರಿ 23ರೊಳಗೆ ಬಾಕಿ ಉಳಿಸಿಕೊಂಡಿರುವ 1.47 ಲಕ್ಷ ಕೋಟಿ ರೂ. ಪಾವತಿಸುವಂತೆ ತಾಕೀತು ಮಾಡಿದೆ.

ನವದೆಹಲಿ: ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಎಜಿಆರ್) ಮೊತ್ತದಲ್ಲಿ ಬಡ್ಡಿ ಮತ್ತು ದಂಡ ಪಾವತಿಗೆ ಸಂಬಂಧಿಸಿದಂತೆ ಈ ಹಿಂದೆ ನೀಡಿದ್ದ ತೀರ್ಪು ಅನ್ನು ಪರಾಮರ್ಶಿಸುವಂತೆ ಭಾರ್ತಿ ಏರ್​ಟೆಲ್ ಮತ್ತು ವೊಡಾಫೋನ್- ಐಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ವಜಾಗೊಳಿಸಿದೆ.

ಎಜಿಆರ್ ಪ್ರಕರಣದಲ್ಲಿ ಅಕ್ಟೋಬರ್ 24ರಂದು ಕೇಂದ್ರದ ಪರ ತೀರ್ಪು ನೀಡಿದ್ದ ಸುಪ್ರೀಂ, 92.642 ಕೋಟಿ ರೂ. ಟೆಲಿಕಾಂ ಕಂಪನಿಗಳಿಂದ ವಸೂಲು ಮಾಡಲು ಅನುಮತಿ ನೀಡಿತ್ತು. 3 ತಿಂಗಳ ಒಳಗಡೆ ಈ ಹಣ ಪಾವತಿಸುವಂತೆ ಗಡುವು ಸಹ ಕೊಟ್ಟಿತ್ತು. ಈ ತೀರ್ಪನ್ನು ಪರಾಮರ್ಶಿಸುವಂತೆ ಅರ್ಜಿ ಸಲ್ಲಿಸಿದ್ದವು.

ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಎಸ್​.ಎ ನಝೀರ್​ ಮತ್ತು ಎಂ. ಆರ್​ ಶಾ ಅವರಿದ್ದ ನ್ಯಾಯಪೀಠ ಭಾರತಿ ಏರ್​ಟೆಲ್ ಹಾಗೂ ವೋಡಾಫೋನ್- ಐಡಿಯಾ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದೆ. ಜನವರಿ 23ರೊಳಗೆ ಬಾಕಿ ಉಳಿಸಿಕೊಂಡಿರುವ 1.47 ಲಕ್ಷ ಕೋಟಿ ರೂ. ಪಾವತಿಸುವಂತೆ ತಾಕೀತು ಮಾಡಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.