ನವದೆಹಲಿ: ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ನಾಗರಿಕ ಸೇವೆಗಳ ಸಾಮರ್ಥ್ಯ ವೃದ್ಧಿಯ ರಾಷ್ಟ್ರೀಯ ಕಾರ್ಯಕ್ರಮಕ್ಕೆ (ಎನ್ಪಿಸಿಎಸ್ಸಿಬಿ) ನಾಗರಿಕೆ ಸೇವಾ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ ಸುಗಮಗೊಳಿಸಲು ಮಿಷನ್ ಕರ್ಮಯೋಗಿ ಯೋಜನೆ ಆರಂಭಿಸಲು ಅನುಮೋದನೆ ನೀಡಿದೆ.
ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ಆಯ್ದ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ಪ್ರಸಿದ್ಧ ಸಾರ್ವಜನಿಕ ಮಾನವ ಸಂಪನ್ಮೂಲ ತಜ್ಞರು, ಚಿಂತಕರು, ಜಾಗತಿಕ ಚಿಂತಕರು ಮತ್ತು ಸಾರ್ವಜನಿಕ ಸೇವಾ ಕಾರ್ಯಕರ್ತರನ್ನು ಒಳಗೊಂಡ ಸಾರ್ವಜನಿಕ ಮಾನವ ಸಂಪನ್ಮೂಲ ಮಂಡಳಿಯು ನಾಗರಿಕ ಸೇವೆಗಳ ಸುಧಾರಣೆ ಮತ್ತು ಸಾಮರ್ಥ್ಯ ವೃದ್ಧಿಗೆ ಕಾರ್ಯತಂತ್ರದ ನಿರ್ದೇಶನವನ್ನು ನೀಡುವ ಉನ್ನತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
ನಾಗರಿಕ ಸೇವೆ ಅಧಿಖಾರಿಗಳ ಸಾಮರ್ಥ್ಯವು ವಿವಿಧ ರೀತಿಯ ಸೇವೆಗಳನ್ನು ಒದಗಿಸಲು, ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಮತ್ತು ಪ್ರಮುಖ ಆಡಳಿತ ಕಾರ್ಯಗಳನ್ನು ನಿರ್ವಹಿಸಲು ಪ್ರಮುಖ ಪಾತ್ರ ವಹಿಸುತ್ತದೆ. ನಾಗರಿಕ ಸೇವಾ ಸಾಮರ್ಥ್ಯದಲ್ಲಿನ ಪರಿವರ್ತಕ ಬದಲಾವಣೆಯು ಕೆಲಸದ ಸಂಸ್ಕೃತಿಯಲ್ಲಿ ರೂಪಾಂತರ, ಸಾರ್ವಜನಿಕ ಸಂಸ್ಥೆಗಳನ್ನು ಬಲಪಡಿಸುವುದು ಮತ್ತು ನಾಗರಿಕರಿಗೆ ಸೇವೆಗಳನ್ನು ಸಮರ್ಥವಾಗಿ ತಲುಪಿಸುವುದನ್ನು ಖಾತರಿಪಡಿಸುವ ಒಟ್ಟಾರೆ ಗುರಿ ಹೊಂದಿದೆ. ನಾಗರಿಕ ಸೇವಾ ಸಾಮರ್ಥ್ಯವನ್ನು ವೃದ್ಧಿಸಲು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ಪ್ರಸ್ತಾಪಿಸಲಾಗಿದೆ.
ಮಿಷನ್ ಕರ್ಮಯೋಗಿಯು ಭಾರತೀಯ ನಾಗರಿಕ ಸೇವೆಯ ಅಧಿಕಾರಿಗಳನ್ನು ಹೆಚ್ಚು ಸೃಜನಶೀಲ, ರಚನಾತ್ಮಕ, ಕಾಲ್ಪನಿಕ, ಸಕ್ರಿಯ, ವೃತ್ತಿಪರ, ಪ್ರಗತಿಪರ, ಶಕ್ತಿಯುತ, ಪಾರದರ್ಶಕ ಮತ್ತು ತಂತ್ರಜ್ಞಾನ-ಶಕ್ತಗೊಳಿಸುವ ಮೂಲಕ ಅವರನ್ನು ಭವಿಷ್ಯಕ್ಕಾಗಿ ಸಿದ್ಧಪಡಿಸುವ ಗುರಿ ಹೊಂದಿದೆ. ನಿರ್ದಿಷ್ಟ ಪಾತ್ರ-ಸಾಮರ್ಥ್ಯಗಳೊಂದಿಗೆ ಶಕ್ತರಾದ ನಾಗರಿಕ ಸೇವೆಯ ಅಧಿಕಾರಿಗಳು ಗುಣಮಟ್ಟದ ಸಮರ್ಥ ಸೇವೆ ಒದಗಿಸುವುದು ಇದರಿಂದ ಸಾಧ್ಯವಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ಮಯೋಗಿ ಒದಗಿಸಿದ ದತ್ತಾಂಶ ವಿಶ್ಲೇಷಣೆ, ಸಾಮರ್ಥ್ಯ ವೃದ್ಧಿ, ವಿಷಯ ರಚನೆ, ಬಳಕೆದಾರರ ಪ್ರತಿಕ್ರಿಯೆ ಮತ್ತು ಸಾಮರ್ಥ್ಯಗಳ ಮ್ಯಾಪಿಂಗ್ ಮತ್ತು ನೀತಿ ಸುಧಾರಣೆಗಳ ಕ್ಷೇತ್ರಗಳನ್ನು ಗುರುತಿಸಲಿದೆ. ಸಹಕಾರಿ ಮತ್ತು ಸಹಭಾಗಿತ್ವ ಹಂಚಿಕೆ ಆಧಾರದ ಮೇಲೆ ಸಾಮರ್ಥ್ಯ ವೃದ್ಧಿ ವಾತಾವರಣ ವ್ಯವಸ್ಥೆಯ ನಿರ್ವಹಣೆ ಮತ್ತು ಏಕರೂಪದ ಸಾಮರ್ಥ್ಯ ವೃದ್ಧಿ ಆಯೋಗ ಸ್ಥಾಪಿಸಲು ಉದ್ದೇಶಿಸಲಾಗಿದೆ.
ವಾರ್ಷಿಕ ಸಾಮರ್ಥ್ಯ ವೃದ್ಧಿ ಯೋಜನೆಗಳನ್ನು ಅನುಮೋದನೆಗೆ ಪ್ರಧಾನಿ ಸಾರ್ವಜನಿಕ ಮಾನವ ಸಂಪನ್ಮೂಲ ಮಂಡಳಿಗೆ ನೆರವಾಗಲಿದೆ. ನಾಗರಿಕ ಸೇವೆಗಳ ಸಾಮರ್ಥ್ಯ ವೃದ್ಧಿಸಲು ಎಲ್ಲಾ ಕೇಂದ್ರೀಯ ತರಬೇತಿ ಸಂಸ್ಥೆಗಳ ಮೇಲ್ವಿಚಾರಣೆ ಮಾಡಲಿದೆ. ಆಂತರಿಕ ಮತ್ತು ಬಾಹ್ಯ ಬೋಧಕ ವರ್ಗ ಮತ್ತು ಸಂಪನ್ಮೂಲ ಕೇಂದ್ರಗಳನ್ನು ಒಳಗೊಂಡಂತೆ ಹಂಚಿಕೆಯ ಕಲಿಕಾ ಸಂಪನ್ಮೂಲಗಳನ್ನು ಸೃಷ್ಟಿಸಲಿದೆ. ಪಾಲುದಾರ ಇಲಾಖೆಗಳೊಂದಿಗೆ ಸಾಮರ್ಥ್ಯ ವೃದ್ಧಿ ಯೋಜನೆಗಳ ಅನುಷ್ಠಾನ ಮತ್ತು ಮೇಲ್ವಿಚಾರಣೆ ನಡೆಸುತ್ತದೆ. ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ, ಬೋಧನೆ ಮತ್ತು ವಿಧಾನದ ಗುಣಮಟ್ಟದ ಬಗ್ಗೆ ಶಿಫಾರಸು ಮಾಡುವುದು. ಎಲ್ಲಾ ನಾಗರಿಕ ಸೇವೆಗಳಲ್ಲಿ ಸಾಮಾನ್ಯ ವೃತ್ತಿಜೀವನದ ತರಬೇತಿ ಕಾರ್ಯಕ್ರಮಗಳಿಗೆ ನಿಯಮ ನಿಗದಿಪಡಿಸುವುದು. ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಸಾಮರ್ಥ್ಯ ವೃದ್ಧಿ ಕ್ಷೇತ್ರಗಳಲ್ಲಿ ಅಗತ್ಯವಾದ ನೀತಿ ನಿರೂಪಣೆಗಳಿಗೆ ಸರ್ಕಾರಕ್ಕೆ ಸೂಚಿಸುವುದು.
ಮಿಷನ್ ಕರ್ಮಯೋಗಿ ವೇದಿಕೆಯು ಭಾರತದಲ್ಲಿನ ಎರಡು ಕೋಟಿ ಅಧಿಕಾರಿಗಳ ಸಾಮರ್ಥ್ಯ ವೃದ್ಧಿಗೆ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಹೊಂದಲಿದೆ. ವಿಶ್ವ ದರ್ಜೆಯ ಮಾರುಕಟ್ಟೆ ಸ್ಥಳವಾಗಿ ವಿಕಸನಗೊಳ್ಳುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಸಾಮರ್ಥ್ಯ ವೃದ್ಧಿಯ ಜೊತೆಗೆ ಪ್ರೊಬೇಷನರಿ ಅವಧಿಯ ನಂತರ ದೃಢೀಕರಣ, ನಿಯೋಜನೆ, ಕೆಲಸದ ಹಂಚಿಕೆ ಮತ್ತು ಖಾಲಿ ಹುದ್ದೆಗಳ ಅಧಿಸೂಚನೆ ಮುಂತಾದ ಸೇವಾ ವಿಷಯಗಳು ಪ್ರಸ್ತಾವಿತ ಸಾಮರ್ಥ್ಯದ ಚೌಕಟ್ಟಿನೊಂದಿಗೆ ಸಂಯೋಜಿಸಲಾಗುತ್ತದೆ
ಸುಮಾರು 46 ಲಕ್ಷ ಕೇಂದ್ರ ಸರ್ಕಾರಿ ನೌಕರರನ್ನು ಒಳಗೊಳ್ಳಲು 2020-21ರಿಂದ 2024-25ರವರೆಗಿನ 5 ವರ್ಷಗಳ ಅವಧಿಯಲ್ಲಿ 510.86 ಕೋಟಿ ರೂ. ವೆಚ್ಚ ಮಾಡಲಾಗುವುದು. ಕಂಪನಿ ಕಾಯ್ದೆ, 2013ರ ಸೆಕ್ಷನ್ 8ರ ಅಡಿಯಲ್ಲಿ ಎನ್ಪಿಸಿಎಸ್ಸಿಬಿಗೆ ಸಂಪೂರ್ಣ ಸ್ವಾಮ್ಯದ ವಿಶೇಷ ಉದ್ದೇಶದ ವಾಹಕವನ್ನು (ಎಸ್ಪಿವಿ) ಸ್ಥಾಪಿಸಲಾಗುವುದು. ಎಸ್ಪಿವಿಯು "ಲಾಭರಹಿತ" ಕಂಪನಿ ಆಗಿರುತ್ತದೆ. ಗೋಟ್-ಕರ್ಮಯೋಗಿ (iGOT-Karmayogi) ಈ ವೇದಿಕೆ ಹೊಂದಿದ್ದು, ಅದರ ನಿರ್ವಹಣೆ ಸಹ ಮಾಡುತ್ತದೆ. ಎಸ್ಪಿವಿ ವಿಷಯ ಮೌಲ್ಯಮಾಪನ, ಸ್ವತಂತ್ರ ಮೌಲ್ಯಮಾಪನಗಳು ಮತ್ತು ಟೆಲಿಮೆಟ್ರಿ ಡೇಟಾ ಲಭ್ಯತೆಗೆ ಸಂಬಂಧಿಸಿದ ಐಗೋಟ್-ಕರ್ಮಯೋಗಿ ಪ್ಲಾಟ್ಫಾರ್ಮ್ನ ಪ್ರಮುಖ ವ್ಯಾಪಾರ ಸೇವೆಗಳನ್ನು ಸೃಷ್ಟಿಸುತ್ತದೆ ಮತ್ತು ನಿರ್ವಹಿಸುತ್ತದೆ. ಎಸ್ಪಿವಿಯು ಕೇಂದ್ರ ಸರ್ಕಾರದ ಪರವಾಗಿ ಎಲ್ಲಾ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಹೊಂದಲಿದೆ. ಪ್ರಮುಖ ಕಾರ್ಯಕ್ಷಮತೆ ಸೂಚಕಗಳ ಡ್ಯಾಶ್ಬೋರ್ಡ್ ವೀಕ್ಷಣೆ ಸೃಷ್ಟಿಸಲು ಐಜಿಒಟಿ-ಕರ್ಮಯೋಗಿ ಪ್ಲಾಟ್ಫಾರ್ಮ್ನ ಎಲ್ಲಾ ಬಳಕೆದಾರರ ಕಾರ್ಯಕ್ಷಮತೆ ಮೌಲ್ಯಮಾಪನಕ್ಕಾಗಿ ಸೂಕ್ತವಾದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಚೌಕಟ್ಟನ್ನು ರೂಪಿಸಲಾಗುತ್ತದೆ.