ETV Bharat / briefs

ಅಡಿಕೆ ಮರ ಏರುವ ಯಂತ್ರ ಕಂಡುಹಿಡಿದ ಭಟ್ಟರ ಸಾಧನೆಗೆ ಮಹೀಂದ್ರ ಗ್ರೂಪ್​ ಅಧ್ಯಕ್ಷರ ಶ್ಲಾಘನೆ

author img

By

Published : Jun 20, 2019, 1:33 AM IST

ಅಡಿಕೆ ಮರವೇರಲು ಯಂತ್ರವೊಂದನ್ನು ಆವಿಷ್ಕಾರ ಮಾಡಿದ ಬಂಟ್ವಾಳ ತಾಲೂಕಿನ ಪಣೋಲಿಬೈಲು ಸಮೀಪದ ಕೋಮಾಲಿಯ ಗಣಪತಿ ಭಟ್ಟ ಅವರ ಸಾಧನೆಗೆ‌ ದೇಶಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ. ಭಾರತದ ಬಹುದೊಡ್ಡ ಉದ್ಯಮಿ ಮಹೀಂದ್ರ ಗ್ರೂಪ್ ನ ಅಧ್ಯಕ್ಷ ಆನಂದ್ ಮಹೀಂದ್ರ ಟ್ವೀಟ್ ಮೂಲಕ  ಗಣಪತಿ ಭಟ್ಟರ ಸಾಧನೆಯನ್ನು ಶ್ಲಾಘಿಸಿದ್ದಾರೆ. ‌

ಭಟ್ಟರ ಸಾಧನೆಗೆ ಆನಂದ್ ಮಹೀಂದ್ರ ಶ್ಲಾಘನೆ

ಮಂಗಳೂರು: ಮಹೀಂದ್ರ ಗ್ರೂಪ್​ನ ಆನಂದ್ ಮಹೀಂದ್ರ ಅವರು ಅಡಿಕೆ ಮರವೇರುವ ಈ ಯಂತ್ರದ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಪ್ರತಿಕ್ರಿಯಿಸಿ, 'ಹೌ ಕೂಲ್ ಈಸ್ ದಿಸ್' ಎಂದು ಹೇಳಿದ್ದಾರೆ.

ಈ ಯಂತ್ರ ಕೆಲಸ ಮಾಡುವುದರಲ್ಲಿ ಯಶಸ್ವಿಯಾಗುವುದು ಮಾತ್ರವಲ್ಲ, ಕಡಿಮೆ ತೂಕದಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಹೊಗಳಿದ್ದಾರೆ. ಅಲ್ಲದೆ ತಮ್ಮ ಸಿಬ್ಬಂದಿ ಮೂಲಕ ಗಣಪತಿ ಭಟ್ ರನ್ನು ಸಂಪರ್ಕಿಸುವುದಾಗಿ ತಿಳಿಸಿದ್ದಾರೆ.

  • How cool is this? The device not only seems effective & does the job, but also looks elegantly designed with a minimum of weight. @rajesh664 can your team look at this more closely & see whether we can market Mr. Bhat’s device as part of our Farm solutions portfolio? https://t.co/4O0y2DmBzh

    — anand mahindra (@anandmahindra) June 18, 2019 " class="align-text-top noRightClick twitterSection" data=" ">


ಭಟ್ಟರ ಸಾಧನೆಗೆ ಆನಂದ್ ಮಹೀಂದ್ರ ಶ್ಲಾಘನೆ

ಕೇವಲ 28 ಕೆಜಿ ಯಂತ್ರ ಗಂಟೆಗೆ ಸುಮಾರು 80 ಅಡಿಕೆ ಮರಗಳನ್ನು ಏರುವ ಸಾಮರ್ಥ್ಯ ಹೊಂದಿದೆ. ಇದರಿಂದ ಅಡಿಕೆ ಬೆಳೆಗಾರರಿಗೆ ಪ್ರಯೋಜನ ಆಗಲಿದೆ. ಇಂದಿನ ದಿನಗಳಲ್ಲಿ ಅಡಿಕೆ ಕೊಯ್ಯಲು, ಔಷಧಿ ಸಿಂಪಡಿಸಲು ಕಾರ್ಮಿಕರ ಕೊರತೆಯಿದೆ. ಸ್ವತಃ ಈ ಸಮಸ್ಯೆಯನ್ನು ಅನುಭವಿಸಿದ ಗಣಪತಿ ಭಟ್ಟ​ರ ಸತತ ಸಂಶೋಧನೆಯ ಫಲವೇ ಈ ಅಡಿಕೆ ಮರ ಏರುವ ಯಂತ್ರ. ಇಂದು ಈ ಯಂತ್ರ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ್ದು, ಗಣಪತಿ ಭಟ್ಟರಿಗೆ ಸತತವಾಗಿ ಫೋನ್​ಗಳ ಸುರಿಮಳೆಯೇ ಬರುತ್ತಿದೆಯಂತೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಗಣಪತಿ ಭಟ್ಟರು, ಅಡಿಕೆ ಮರ ಏರುವ ಯಂತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ಮೇಲೆ ನಮ್ಮ ಮನೆಗೆ ಬಂದು ಅದನ್ನು ವೀಕ್ಷಣೆ ಮಾಡುವವರ ಸಂಖ್ಯೆ ಅಧಿಕವಾಗಿದೆ. ಮಹೀಂದ್ರ ಕಂಪನಿಯ ಅಧ್ಯಕ್ಷರು ಈ ಯಂತ್ರದ ಬಗ್ಗೆ ಶ್ಲಾಘನೆ ಮಾಡಿ ಟ್ವೀಟ್ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ.

ಆದರೆ ನಮಗೆ ಅದರ ಆಸೆ ಆಕಾಂಕ್ಷೆ ಯಾವುದೂ ಇಲ್ಲ. ನಾವು ಈ ಯಂತ್ರವನ್ನು ಯಶಸ್ವಿಯಾಗಿ ಆವಿಷ್ಕಾರ ಮಾಡಿದ್ದೇವೆ. ಇದನ್ನು ರೈತರಿಗೆ ತಲುಪಿಸುವ ಕಾರ್ಯವನ್ನು ನಾವು ಮಾಡುತ್ತೇವೆ. ಈಗಾಗಲೇ ಈ ಯಂತ್ರ ಬೇಕೆಂದು ದುಂಬಾಲು ಬೀಳುತ್ತಿದ್ದಾರೆ‌. 7-8 ದಿನಗಳಲ್ಲಿ ಒಂದು ಯಂತ್ರ ತಯಾರಿಸಿ ಕೊಡುವ ಉದ್ದೇಶ ಇರಿಸಿಕೊಂಡಿದ್ದೇವೆ ಎಂದು ಹೇಳಿದರು.

ಮಂಗಳೂರು: ಮಹೀಂದ್ರ ಗ್ರೂಪ್​ನ ಆನಂದ್ ಮಹೀಂದ್ರ ಅವರು ಅಡಿಕೆ ಮರವೇರುವ ಈ ಯಂತ್ರದ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಪ್ರತಿಕ್ರಿಯಿಸಿ, 'ಹೌ ಕೂಲ್ ಈಸ್ ದಿಸ್' ಎಂದು ಹೇಳಿದ್ದಾರೆ.

ಈ ಯಂತ್ರ ಕೆಲಸ ಮಾಡುವುದರಲ್ಲಿ ಯಶಸ್ವಿಯಾಗುವುದು ಮಾತ್ರವಲ್ಲ, ಕಡಿಮೆ ತೂಕದಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಹೊಗಳಿದ್ದಾರೆ. ಅಲ್ಲದೆ ತಮ್ಮ ಸಿಬ್ಬಂದಿ ಮೂಲಕ ಗಣಪತಿ ಭಟ್ ರನ್ನು ಸಂಪರ್ಕಿಸುವುದಾಗಿ ತಿಳಿಸಿದ್ದಾರೆ.

  • How cool is this? The device not only seems effective & does the job, but also looks elegantly designed with a minimum of weight. @rajesh664 can your team look at this more closely & see whether we can market Mr. Bhat’s device as part of our Farm solutions portfolio? https://t.co/4O0y2DmBzh

    — anand mahindra (@anandmahindra) June 18, 2019 " class="align-text-top noRightClick twitterSection" data=" ">


ಭಟ್ಟರ ಸಾಧನೆಗೆ ಆನಂದ್ ಮಹೀಂದ್ರ ಶ್ಲಾಘನೆ

ಕೇವಲ 28 ಕೆಜಿ ಯಂತ್ರ ಗಂಟೆಗೆ ಸುಮಾರು 80 ಅಡಿಕೆ ಮರಗಳನ್ನು ಏರುವ ಸಾಮರ್ಥ್ಯ ಹೊಂದಿದೆ. ಇದರಿಂದ ಅಡಿಕೆ ಬೆಳೆಗಾರರಿಗೆ ಪ್ರಯೋಜನ ಆಗಲಿದೆ. ಇಂದಿನ ದಿನಗಳಲ್ಲಿ ಅಡಿಕೆ ಕೊಯ್ಯಲು, ಔಷಧಿ ಸಿಂಪಡಿಸಲು ಕಾರ್ಮಿಕರ ಕೊರತೆಯಿದೆ. ಸ್ವತಃ ಈ ಸಮಸ್ಯೆಯನ್ನು ಅನುಭವಿಸಿದ ಗಣಪತಿ ಭಟ್ಟ​ರ ಸತತ ಸಂಶೋಧನೆಯ ಫಲವೇ ಈ ಅಡಿಕೆ ಮರ ಏರುವ ಯಂತ್ರ. ಇಂದು ಈ ಯಂತ್ರ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ್ದು, ಗಣಪತಿ ಭಟ್ಟರಿಗೆ ಸತತವಾಗಿ ಫೋನ್​ಗಳ ಸುರಿಮಳೆಯೇ ಬರುತ್ತಿದೆಯಂತೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಗಣಪತಿ ಭಟ್ಟರು, ಅಡಿಕೆ ಮರ ಏರುವ ಯಂತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ಮೇಲೆ ನಮ್ಮ ಮನೆಗೆ ಬಂದು ಅದನ್ನು ವೀಕ್ಷಣೆ ಮಾಡುವವರ ಸಂಖ್ಯೆ ಅಧಿಕವಾಗಿದೆ. ಮಹೀಂದ್ರ ಕಂಪನಿಯ ಅಧ್ಯಕ್ಷರು ಈ ಯಂತ್ರದ ಬಗ್ಗೆ ಶ್ಲಾಘನೆ ಮಾಡಿ ಟ್ವೀಟ್ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ.

ಆದರೆ ನಮಗೆ ಅದರ ಆಸೆ ಆಕಾಂಕ್ಷೆ ಯಾವುದೂ ಇಲ್ಲ. ನಾವು ಈ ಯಂತ್ರವನ್ನು ಯಶಸ್ವಿಯಾಗಿ ಆವಿಷ್ಕಾರ ಮಾಡಿದ್ದೇವೆ. ಇದನ್ನು ರೈತರಿಗೆ ತಲುಪಿಸುವ ಕಾರ್ಯವನ್ನು ನಾವು ಮಾಡುತ್ತೇವೆ. ಈಗಾಗಲೇ ಈ ಯಂತ್ರ ಬೇಕೆಂದು ದುಂಬಾಲು ಬೀಳುತ್ತಿದ್ದಾರೆ‌. 7-8 ದಿನಗಳಲ್ಲಿ ಒಂದು ಯಂತ್ರ ತಯಾರಿಸಿ ಕೊಡುವ ಉದ್ದೇಶ ಇರಿಸಿಕೊಂಡಿದ್ದೇವೆ ಎಂದು ಹೇಳಿದರು.

Intro:ಮಂಗಳೂರು: ಅಡಿಕೆ ಮರವೇರಲು ಯಂತ್ರವೊಂದನ್ನು ಅವಿಷ್ಕಾರ ಮಾಡಿದ ಬಂಟ್ವಾಳ ತಾಲೂಕಿನ ಪಣೋಲಿಬೈಲು ಸಮೀಪದ ಕೋಮಾಲಿ ಎಂಬಲ್ಲಿನ ಗಣಪತಿ ಭಟ್ ಅವರ ಸಾಧನೆಯನ್ನು‌ ಶ್ಲಾಘಿಸಿ ಭಾರತದ ಬಹುದೊಡ್ಡ ಉದ್ಯಮಿ ಮಹೀಂದ್ರ ಗ್ರೂಪ್ ನ ಅಧ್ಯಕ್ಷ ಆನಂದ್ ಮಹೀಂದ್ರ ಟ್ವಿಟ್ ಮಾಡಿದ್ದಾರೆ. ‌

ಆನಂದ್ ಮಹೀಂದ್ರ ಅವರು ಅಡಿಕೆ ಮರವೇರುವ ಈ ಯಂತ್ರದ ಬಗ್ಗೆ ಟ್ವಿಟ್ಟರ್ ನಲ್ಲಿ ಬಂದಿರುವ ಸುದ್ದಿಯೊಂದಕ್ಕೆ ಪ್ರತಿಕ್ರಿಯಿಸಿ, 'ಹೌ ಕೂಲ್ ಈಸ್ ದಿಸ್' ಎಂದು ಹೇಳಿರುವ ಅವರು, ಈ ಯಂತ್ರ ಕೆಲಸ ಮಾಡುವುದರಲ್ಲಿ ಯಶಸ್ವಿಯಾಗುವುದು ಮಾತ್ರವಲ್ಲ, ಕಡಿಮೆ ತೂಕದಲ್ಲಿಯೂ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ ತನ್ನ ಸಿಬ್ಬಂದಿ ಮೂಲಕ ಗಣಪತಿ ಭಟ್ ರನ್ನು ಸಂಪರ್ಕಿಸುವುದಾಗಿ ತಿಳಿಸಿದ್ದಾರೆ.


Body:ಕೇವಲ 28 ಕೆ.ಜಿ.ಯುಳ್ಳ ಯಂತ್ರ ಗಂಟೆಗೆ ಸುಮಾರು 80 ಅರಗಳಿಗೆ ಮರಗಳಿಗೆ ಏರುವ ಸಾಮರ್ಥ್ಯ ಹೊಂದಿದೆ. ಇದರಿಂದ ಅಡಿಕೆ ಬೆಳಗಾರರಿಗೆ ತುಂಬಾ ಪ್ರಯೋಜನ ಆಗಲಿದೆ. ಇಂದಿನ ದಿನಗಳಲ್ಲಿ ಅಡಿಕೆ ಕೊಯ್ಯಲು, ಔಷಧಿ ಸಿಂಪಡಿಸಲು ಕಾರ್ಮಿಕರ ಕೊರತೆಯಿದ್ದು, ಸ್ವತಃ ಈ ಸಮಸ್ಯೆಯನ್ನು ಅನುಭವಿಸಿದ ಗಣಪತಿ ಭಟ್ಟರ ಸತತ ಸಂಶೋಧನೆಯ ಫಲವೇ ಈ ಅಡಿಕೆ ಮರ ಏರುವ ಯಂತ್ರ. ಇಂದು ಈ ಯಂತ್ರ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ್ದು, ಗಣಪತಿ ಭಟ್ಟರಿಗೆ ಸತತವಾಗಿ ಫೋನ್ ಗಳ ಸುರಿಮಳೆಯೇ ಬರುತ್ತಿದೆಯಂತೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಗಣಪತಿ ಭಟ್ಟರು, ಅಡಿಕೆ ಮರ ಏರುವ ಯಂತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ಮೇಲೆ ನಮ್ಮ ಮನೆಗೆ ಬಂದು ಅದನ್ನು ವೀಕ್ಷಣೆ ಮಾಡುವವರ ಸಂಖ್ಯೆ ಅಧಿಕವಾಗಿದೆ. ಮಹೀಂದ್ರ ಕಂಪೆನಿಯ ಅಧ್ಯಕ್ಷ ಈ ಯಂತ್ರದ ಬಗ್ಗೆ ಶ್ಲಾಘನೆ ಮಾಡಿ ಟ್ವಿಟ್ ಮಾಡಿರುವುದು ನಮ್ಮ‌ಗಮನಕ್ಕೆ ಬಂದಿದೆ. ಆದರೆ ನಮಗೆ ಅದರ ಆಸೆ ಆಕಾಂಕ್ಷೆ ಯಾವುದೂ ಇಲ್ಲ. ನಾವು ಈ ಯಂತ್ರವನ್ನು ಯಶಸ್ವಿಯಾಗಿ ಆವಿಷ್ಕಾರ ಮಾಡಿದ್ದೇವೆ. ಇದನ್ನು ರೈತರಿಗೆ ತಲುಪಿಸುವ ನಾವು ಮಾಡುತ್ತೇವೆ. ಈಗಾಗಲೇ ಈ ಯಂತ್ರ ಬೇಕೆಂದು ದುಂಬಾಲು ಬೀಳುತ್ತಿದ್ದಾರೆ‌. ಏಳೆಂಟು ದಿನಗಳಲ್ಲಿ ಒಂದು ಯಂತ್ರ ತಯಾರಿಸಿ ಕೊಡುವ ಉದ್ದೇಶ ವಿರಿಸಿಕೊಂಡಿದ್ದೇವೆ. ಈಗಾಗಲೇ 300 ಮಂದಿ ಬುಕಿಂಗ್ ಮಾಡಿದ್ದಾರೆ. ಇವತ್ತೂ ಕೂಡಾ ಏಳೆಂಟು ಮಂದಿ ಈ ಯಂತ್ರ ಬೇಕೆಂದು ಕೇಳಿ ಹೋಗಿದ್ದಾರೆ. ಈ ಯಂತ್ರದ ಉತ್ಪಾದನೆಗೆ ನಮ್ಮೊಂದಿಗೆ ಶ್ರಮಿಸಿದ ಇಂಜಿನಿಯರಿಂಗ್ ನವರಿಗೆ ಹೇಳಿದ್ದೇವೆ. ಅವರೊಂದಿಗೆ ಜೊತೆಗೂಡಿ ಈ ಕಾರ್ಯದಲ್ಲಿ ಮುಂದುವರಿಯುತ್ತೇವೆ ಎಂದು ಹೇಳಿದರು.

Reporter_Vishwanath Panjimogaru


Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.