ETV Bharat / bharat

ಉದಯ್​​ಪುರ ಹತ್ಯೆ ಕೇಸ್​​: ಇಸ್ಲಾಮಿ ಸಂಘಟನೆಯ 40 ಜನರಿಗಾಗಿ NIA ಶೋಧ.. ಪಾಕ್​​ನಿಂದ ಆನ್​ಲೈನ್​ ತರಬೇತಿ

author img

By

Published : Jul 13, 2022, 7:49 PM IST

ಕನ್ಹಯ್ಯಲಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಹೊಸ ಹೊಸ ಮಾಹಿತಿ ಹೊರಬೀಳಲು ಶುರುವಾಗಿವೆ. ಸದ್ಯ ಪಾಕಿಸ್ತಾನದಿಂದ ಆನ್​ಲೈನ್ ಮೂಲಕ ತರಬೇತಿ ಪಡೆದುಕೊಂಡ 40 ಮಂದಿಗೋಸ್ಕರ ಶೋಧಕಾರ್ಯ ಚುರುಕುಗೊಂಡಿದೆ.

Udaipur murder case
Udaipur murder case

ಜೈಪುರ್​​(ರಾಜಸ್ಥಾನ): ರಾಜಸ್ಥಾನದ ಉದಯ್​ಪುರದಲ್ಲಿ ನಡೆದ ಹಿಂದೂ ವ್ಯಕ್ತಿಯ ಕೊಲೆ ಪ್ರಕರಣದ ತನಿಖೆ ಎನ್​ಐಎನಿಂದ ನಡೆಯುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಹೊಸ ಹೊಸ ಮಾಹಿತಿ ಹೊರಬೀಳಲು ಶುರುವಾಗಿವೆ. ಸದ್ಯದ ಮಾಹಿತಿ ಪ್ರಕಾರ ದಾವತ್​-ಎ-ಇಸ್ಲಾಮಿ ಸಂಘಟನೆಗೆ ಸಂಬಂಧಿಸಿದ 40 ಮಂದಿಗೋಸ್ಕರ ಎನ್​ಐಎ ತೀವ್ರ ಶೋಧ ಕಾರ್ಯ ನಡೆಸುತ್ತಿದೆ.

ಇವರಿಗೆಲ್ಲ ಪಾಕಿಸ್ತಾನದಿಂದ ಆನ್​ಲೈನ್​ ತರಬೇತಿ ನೀಡಲಾಗುತ್ತಿತ್ತು ಎಂಬ ಮಾಹಿತಿ ತಿಳಿದು ಬಂದಿದೆ. ಮೊಬೈಲ್​ ಸಂಖ್ಯೆ ಆಧಾರದ ಮೇಲೆ ಎನ್​ಐಎ ಮತ್ತು ಎಸ್​​ಐಟಿ 40 ಜನರನ್ನ ಗುರಿಯಾಗಿಸಿದ್ದು, ಅವರಿಗೋಸ್ಕರ ಶೋಧಕಾರ್ಯ ಆರಂಭಗೊಂಡಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಲಿಸ್ಟ್​ನಲ್ಲಿರುವ 40 ಮಂದಿ ರಾಜಸ್ಥಾನದ ಆರು ಜಿಲ್ಲೆಗಳಿಗೆ ಸೇರಿದ್ದು, ಕಳೆದ ಒಂದು ವರ್ಷದಿಂದ ದಾವತ್​ - ಎ - ಇಸ್ಲಾಮಿ ಸಂಘಟನೆ ಜೊತೆ ಗುರುತಿಸಿಕೊಂಡಿದ್ದರಂತೆ. ಇವರಿಗೆ ವಾಟ್ಸ್​ಆ್ಯಪ್​ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೂಲಕ ಪಾಕ್​​ನಿಂದ ತರಬೇತಿ ನೀಡಲಾಗುತ್ತಿತ್ತು ಎಂದು ಹೇಳಲಾಗ್ತಿದೆ.

ಇದನ್ನೂ ಓದಿರಿ: ಕ್ರಿಕೆಟ್​​ ಬ್ಯಾಟ್​​ನಿಂದ ಗಂಡನಿಗೆ ಹಿಗ್ಗಾಮುಗ್ಗಾ ಥಳಿಸಿದ ಪತ್ನಿ.. ಆಸ್ಪತ್ರೆಗೆ ದಾಖಲಾದ ಪತಿ

ನೂಪುರ್​ ಶರ್ಮಾ ಅವರನ್ನ ಬೆಂಬಲಿಸಿ ಪೋಸ್ಟ್ ಮಾಡಿದವರ ಶಿರಚ್ಛೇದ ಮಾಡಲು ಪಾಕಿಸ್ತಾನದಿಂದಲೇ ತರಬೇತಿ ನೀಡಲಾಗಿತ್ತು ಎಂದು ಎನ್​ಐಎ ತಿಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿಗಳಾದ ಗೌಸ್ ಮೊಹಮ್ಮದ್​ ಹಾಗೂ ಮೊಹಮ್ಮದ್ ರಿಯಾಜ್​​ ಈಗಾಗಲೇ ಬಂಧನವಾಗಿದ್ದು, ಅವರಿಂದ ಮಹತ್ವದ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಹೇಳಿಕೆ ಬೆಂಬಲಿಸಿ ಟ್ವೀಟ್ ಮಾಡಿದ್ದ ಕನ್ಹಯ್ಯಲಾಲ್​ ಎಂಬಾತನನ್ನ ರಾಜಸ್ಥಾನದ ಉದಯ್​ಪುರದಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಘಟನೆ ನಡೆದ ಕೆಲ ಗಂಟೆಗಳಲ್ಲಿ ಆರೋಪಿಗಳ ಬಂಧನ ಮಾಡಲಾಗಿತ್ತು. ಈ ಪ್ರಕರಣವನ್ನ ಎನ್​ಐಎ ತನಿಖೆ ನಡೆಸುತ್ತಿದೆ.

ಜೈಪುರ್​​(ರಾಜಸ್ಥಾನ): ರಾಜಸ್ಥಾನದ ಉದಯ್​ಪುರದಲ್ಲಿ ನಡೆದ ಹಿಂದೂ ವ್ಯಕ್ತಿಯ ಕೊಲೆ ಪ್ರಕರಣದ ತನಿಖೆ ಎನ್​ಐಎನಿಂದ ನಡೆಯುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಹೊಸ ಹೊಸ ಮಾಹಿತಿ ಹೊರಬೀಳಲು ಶುರುವಾಗಿವೆ. ಸದ್ಯದ ಮಾಹಿತಿ ಪ್ರಕಾರ ದಾವತ್​-ಎ-ಇಸ್ಲಾಮಿ ಸಂಘಟನೆಗೆ ಸಂಬಂಧಿಸಿದ 40 ಮಂದಿಗೋಸ್ಕರ ಎನ್​ಐಎ ತೀವ್ರ ಶೋಧ ಕಾರ್ಯ ನಡೆಸುತ್ತಿದೆ.

ಇವರಿಗೆಲ್ಲ ಪಾಕಿಸ್ತಾನದಿಂದ ಆನ್​ಲೈನ್​ ತರಬೇತಿ ನೀಡಲಾಗುತ್ತಿತ್ತು ಎಂಬ ಮಾಹಿತಿ ತಿಳಿದು ಬಂದಿದೆ. ಮೊಬೈಲ್​ ಸಂಖ್ಯೆ ಆಧಾರದ ಮೇಲೆ ಎನ್​ಐಎ ಮತ್ತು ಎಸ್​​ಐಟಿ 40 ಜನರನ್ನ ಗುರಿಯಾಗಿಸಿದ್ದು, ಅವರಿಗೋಸ್ಕರ ಶೋಧಕಾರ್ಯ ಆರಂಭಗೊಂಡಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಲಿಸ್ಟ್​ನಲ್ಲಿರುವ 40 ಮಂದಿ ರಾಜಸ್ಥಾನದ ಆರು ಜಿಲ್ಲೆಗಳಿಗೆ ಸೇರಿದ್ದು, ಕಳೆದ ಒಂದು ವರ್ಷದಿಂದ ದಾವತ್​ - ಎ - ಇಸ್ಲಾಮಿ ಸಂಘಟನೆ ಜೊತೆ ಗುರುತಿಸಿಕೊಂಡಿದ್ದರಂತೆ. ಇವರಿಗೆ ವಾಟ್ಸ್​ಆ್ಯಪ್​ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೂಲಕ ಪಾಕ್​​ನಿಂದ ತರಬೇತಿ ನೀಡಲಾಗುತ್ತಿತ್ತು ಎಂದು ಹೇಳಲಾಗ್ತಿದೆ.

ಇದನ್ನೂ ಓದಿರಿ: ಕ್ರಿಕೆಟ್​​ ಬ್ಯಾಟ್​​ನಿಂದ ಗಂಡನಿಗೆ ಹಿಗ್ಗಾಮುಗ್ಗಾ ಥಳಿಸಿದ ಪತ್ನಿ.. ಆಸ್ಪತ್ರೆಗೆ ದಾಖಲಾದ ಪತಿ

ನೂಪುರ್​ ಶರ್ಮಾ ಅವರನ್ನ ಬೆಂಬಲಿಸಿ ಪೋಸ್ಟ್ ಮಾಡಿದವರ ಶಿರಚ್ಛೇದ ಮಾಡಲು ಪಾಕಿಸ್ತಾನದಿಂದಲೇ ತರಬೇತಿ ನೀಡಲಾಗಿತ್ತು ಎಂದು ಎನ್​ಐಎ ತಿಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿಗಳಾದ ಗೌಸ್ ಮೊಹಮ್ಮದ್​ ಹಾಗೂ ಮೊಹಮ್ಮದ್ ರಿಯಾಜ್​​ ಈಗಾಗಲೇ ಬಂಧನವಾಗಿದ್ದು, ಅವರಿಂದ ಮಹತ್ವದ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಹೇಳಿಕೆ ಬೆಂಬಲಿಸಿ ಟ್ವೀಟ್ ಮಾಡಿದ್ದ ಕನ್ಹಯ್ಯಲಾಲ್​ ಎಂಬಾತನನ್ನ ರಾಜಸ್ಥಾನದ ಉದಯ್​ಪುರದಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಘಟನೆ ನಡೆದ ಕೆಲ ಗಂಟೆಗಳಲ್ಲಿ ಆರೋಪಿಗಳ ಬಂಧನ ಮಾಡಲಾಗಿತ್ತು. ಈ ಪ್ರಕರಣವನ್ನ ಎನ್​ಐಎ ತನಿಖೆ ನಡೆಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.