ನವದೆಹಲಿ: ಭಾರತ ಮತ್ತು ಐರ್ಲೆಂಡ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್ಎಸ್ಸಿ) ಕಾರ್ಯಸೂಚಿಯಲ್ಲಿ ವ್ಯಾಪಕವಾದ ವಿಷಯಗಳ ಬಗ್ಗೆ ಚರ್ಚಿಸಿದೆ. ಈ ವರ್ಷ ವಿಶ್ವ ಸಂಸ್ಥೆಯಲ್ಲಿ ತಮ್ಮ ಇನ್ನಿಂಗ್ಸ್ ಸಮಯದಲ್ಲಿ ಒಟ್ಟಿಗೆ ಕೆಲಸ ಮಾಡಲು ಒಪ್ಪಿಕೊಂಡಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ವಿಡಿಯೋ-ಟೆಲಿಕಾನ್ ಕಾನ್ಫರೆನ್ಸಿಂಗ್ ವೇದಿಕೆ ಮುಖಾಂತರ ಉಭಯ ದೇಶಗಳ ಅಧಿಕಾರಿಗಳು ಯುಎನ್ಎಸ್ಸಿ ವಿಷಯಗಳ ಬಗ್ಗೆ ದ್ವಿಪಕ್ಷೀಯ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಎರಡೂ ಕಡೆಯವರು ಯುಎನ್ಎಸ್ಸಿಗೆ ಆಯ್ಕೆಯಾಗಿದ್ದಕ್ಕೆ ಪರಸ್ಪರ ಅಭಿನಂದಿಸಿದರು ಮತ್ತು ತಮ್ಮ ಆದ್ಯತೆಗಳ ಬಗ್ಗೆ ಪರಸ್ಪರ ವಿವರಿಸಿದರು.
ಐರಿಶ್ ನಿಯೋಗದ ನೇತೃತ್ವವನ್ನು ಯುಎನ್ ನಿರ್ದೇಶಕ ಮತ್ತು ಯುಎನ್ಎಸ್ಸಿ ಕಾರ್ಯ ತಂಡದ ಮುಖ್ಯಸ್ಥ ಹಾಗೂ ವಿದೇಶಾಂಗ ವ್ಯವಹಾರ ಮತ್ತು ವ್ಯಾಪಾರ ಇಲಾಖೆ ಮುಖ್ಯಸ್ಥ ಜೆರಾರ್ಡ್ ಕಿಯೋನ್ ವಹಿಸಿದ್ದರು. ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಕಾಶ್ ಗುಪ್ತಾ ಅವರು ಭಾರತೀಯ ನಿಯೋಗ ಮುನ್ನಡೆಸಿದರು.