ನವದೆಹಲಿ: ಮಹಾಮಾರಿ ಕೊರೊನಾ ವೈರಸ್ನಿಂದ ನಲುಗಿ ಹೋಗಿದ್ದ ವಿಶ್ವ ಇದೀಗ ಚೇತರಿಸಿಕೊಳ್ಳುತ್ತಿದ್ದು, ಹೊಸ ವಿಶ್ವ ನಿರ್ಮಾಣದಲ್ಲಿ ಭಾರತದ ಪಾತ್ರ ಬಹುದೊಡ್ಡದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಎನ್ಡಿಎ ನಾಯಕರ ಸಭೆಯನ್ನುದ್ದೇಶಿಸಿ ಮಾತನಾಡಿದ ನಮೋ, ಈ ದಶಕ ತುಂಬಾ ಮಹತ್ವದ್ದಾಗಿದ್ದು, ಎರಡನೇ ಮಹಾಯುದ್ಧದ ನಂತರ ಅತಿ ಹೆಚ್ಚು ಮಹತ್ವ ಪಡೆದುಕೊಂಡಿದೆ. ಈ ಹಿಂದಿನಂತೆ ನಾವು ಮೂಕ ಪ್ರೇಕ್ಷರಾಗಲು ಸಾಧ್ಯವಿಲ್ಲ ಎಂದಿರುವ ಅವರು, ನಮ್ಮ ಸಂಪ್ರದಾಯದಂತೆ ವಸುದೈವ ಕುಟುಂಬಕಂ ಆದರ್ಶ ಆಧರಿಸಿ ಈ ಸಂದರ್ಭಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಕೆಲಸ ಮಾಡಬೇಕಾಗಿದೆ ಎಂದರು. ಕೇಂದ್ರ ಬಜೆಟ್ ಮಂಡನೆಯಾಗಲು ಒಂದು ದಿನ ಬಾಕಿ ಇದ್ದು, ಅದಕ್ಕೂ ಮುಂಚಿತವಾಗಿ ಎನ್ಡಿಎ ಮುಖಂಡ ಸಭೆ ನಡೆಸಲಾಯಿತು.
ಇದನ್ನೂ ಓದಿ: ಮಮತಾಗೆ ಬಿಗ್ ಶಾಕ್: ಬಿಜೆಪಿ ಸೇರಿದ ಐವರು ಟಿಎಂಸಿ ನಾಯಕರು!
ಸಾಂಕ್ರಾಮಿಕ ರೋಗ ಕೊರೊನಾ ನಂತರ ಹೊಸ ವಿಶ್ವ ರೂಪಗೊಳ್ಳುತ್ತಿದ್ದು, ಈ ಹೊಸ ವಿಶ್ವ ಕಟ್ಟುವಲ್ಲಿ ನಮ್ಮ ಪಾತ್ರ ದೊಡ್ಡದ್ದಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ ಎಂದರು.