ETV Bharat / bharat

ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಕಾಣಿಸಿಕೊಂಡ ಚಿರತೆ - Leopard near court premises

author img

By ETV Bharat Karnataka Team

Published : 2 hours ago

ನಿರಂತರವಾಗಿ ಪೌರಿ ಗರ್ವಾಲ್​ ಜಿಲ್ಲಾ ನ್ಯಾಯಾಲಯದ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

LEOPARD NEAR COURT PREMISES
ಉತ್ತರಾಖಂಡ: ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಕಾಣಿಸಿಕೊಂಡ ಚಿರತೆ (ETV Bharat)

ಪೌರಿ ಗರ್ವಾಲ್​: ಉತ್ತರಾಖಂಡದ ಪೌರಿ ಗರ್ವಾಲ್​ ಜಿಲ್ಲಾ ನ್ಯಾಯಾಲಯದ ಆವರಣದ ಬಳಿ ಮರಿಯೊಂದಿಗೆ ದೊಡ್ಡ ಚಿರತೆಯೊಂದು ಕಾಣಿಸಿಕೊಂಡಿರುವುದು ಸಂಚಲನ ಮೂಡಿಸಿದೆ. ಆವರಣದಲ್ಲಿ ಚಿರತೆ ಓಡಾಡುತ್ತಿರುವುದನ್ನು ಸ್ಥಳೀಯ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ಸದ್ಯ ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗುತ್ತಿದೆ.

ಕೋರ್ಟ್​ ಆವರಣ, ಸರ್ಕ್ಯೂಟ್​ ಹೌಸ್​ ಹಾಗೂ ಇತರ ವಸತಿ ಬಡಾವಣೆಗಳ ಬಳಿ ನಿರಂತರವಾಗಿ ಚಿರತೆ ಕಾಣಿಸಿಕೊಳ್ಳುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಅರಣ್ಯ ಇಲಾಖೆಗೆ ಲಿಖಿತ ಹಾಗೂ ಮೌಖಿಕವಾಗಿ ದೂರು ನೀಡಿದರೂ ಯಾವುದೇ ಪ್ರತಿಕ್ರಿಯೆ ಇಲ್ಲ. ಇದರಿಂದಾಗಿ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಪೌರಿ ಗರ್ವಾಲ್​ ಅರಣ್ಯ ವಿಭಾಗದ ನಾಗದೇವ್​ ರೇಂಜ್​ ಫಾರೆಸ್ಟ್​ ಆಫೀಸರ್​ ದಿನೇಶ್​ ಚಂದ್ರ ನೌಟಿಯಾಲ್​ ಮಾತನಾಡಿ, "ಕೋರ್ಟ್​ ಆವರಣದಲ್ಲಿ ಚಿರತೆ ಚಲನವಲನದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಅರಣ್ಯ ಇಲಾಖೆ ನಿರಂತರವಾಗಿ ಗಸ್ತು ತಿರುಗುತ್ತಿದ್ದು, ಇದನ್ನು ಹೆಚ್ಚಿಸಲಾಗುವುದು. ಅಗತ್ಯವಿದ್ದರೆ, ಚಿರತೆ ಕಾಣಿಸಿಕೊಂಡಿದೆ ಎಂದು ಹೇಳಲಾದ ಸ್ಥಳದಲ್ಲಿ ಬೋನ್​ಗಳನ್ನು ಸಹ ಇರಿಸಲಾಗುವುದು" ಎಂದು ತಿಳಿಸಿದರು.

ಈಟಿವಿ ಭಾರತ ಜೊತೆಗೆ ಮಾತನಾಡಿದ ಡಿಎಫ್​ಒ ಅನಿರುದ್ಧ ಸ್ವಪ್ನಿಲ್​, "ಚಿರತೆ ಕಾಣಿಸಿಕೊಂಡಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಗಸ್ತು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಗತ್ಯವಿದ್ದರೆ, ಆ ಪ್ರದೇಶದಲ್ಲಿ ಬೋನ್​ ಇಡಲಾಗುವುದು. ನಾಗದೇವ್​ ವ್ಯಾಪ್ತಿ ಈಗಾಗಲೇ ಚಿರತೆ ಪೀಡಿತ ಪ್ರದೇಶವಾಗಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಿರತೆಗಳಿವೆ. ಅವುಗಳು ಕೆಲವೊಮ್ಮೆ ವಸತಿ ಪ್ರದೇಶಗಳ ಕಡೆಗೂ ಬರುತ್ತವೆ" ಎಂದರು.

ಕೆಲವು ದಿನಗಳ ಹಿಂದೆ ಚಾಕಿಸೈನ್​ ತಹಸಿಲ್​ನ ಮರ್ಖೋಲಾ ಗ್ರಾಮದಲ್ಲಿ ಹುಲ್ಲು ತರಲೆಂದು ಹೋಗಿದ್ದ ವೃದ್ಧೆಯೊಬ್ಬಳ ಮೇಲೆ ಚಿರತೆ ದಾಳಿ ಮಾಡಿತ್ತು. ದಾಳಿಯಲ್ಲಿ ಮಹಿಳೆಯ ಕೆನ್ನೆ, ಕೈ ಮತ್ತು ಭುಜಕ್ಕೆ ಗಾಯಗಳಾಗಿತ್ತು.

ಇದನ್ನೂ ಓದಿ: ಚಿರತೆ ದಾಳಿಗೆ ಅರ್ಚಕ ಬಲಿ; 10 ದಿನದಲ್ಲಿ ಆರನೇ ಸಾವು - PANTHER ATTACK

ಪೌರಿ ಗರ್ವಾಲ್​: ಉತ್ತರಾಖಂಡದ ಪೌರಿ ಗರ್ವಾಲ್​ ಜಿಲ್ಲಾ ನ್ಯಾಯಾಲಯದ ಆವರಣದ ಬಳಿ ಮರಿಯೊಂದಿಗೆ ದೊಡ್ಡ ಚಿರತೆಯೊಂದು ಕಾಣಿಸಿಕೊಂಡಿರುವುದು ಸಂಚಲನ ಮೂಡಿಸಿದೆ. ಆವರಣದಲ್ಲಿ ಚಿರತೆ ಓಡಾಡುತ್ತಿರುವುದನ್ನು ಸ್ಥಳೀಯ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ಸದ್ಯ ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗುತ್ತಿದೆ.

ಕೋರ್ಟ್​ ಆವರಣ, ಸರ್ಕ್ಯೂಟ್​ ಹೌಸ್​ ಹಾಗೂ ಇತರ ವಸತಿ ಬಡಾವಣೆಗಳ ಬಳಿ ನಿರಂತರವಾಗಿ ಚಿರತೆ ಕಾಣಿಸಿಕೊಳ್ಳುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಅರಣ್ಯ ಇಲಾಖೆಗೆ ಲಿಖಿತ ಹಾಗೂ ಮೌಖಿಕವಾಗಿ ದೂರು ನೀಡಿದರೂ ಯಾವುದೇ ಪ್ರತಿಕ್ರಿಯೆ ಇಲ್ಲ. ಇದರಿಂದಾಗಿ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಪೌರಿ ಗರ್ವಾಲ್​ ಅರಣ್ಯ ವಿಭಾಗದ ನಾಗದೇವ್​ ರೇಂಜ್​ ಫಾರೆಸ್ಟ್​ ಆಫೀಸರ್​ ದಿನೇಶ್​ ಚಂದ್ರ ನೌಟಿಯಾಲ್​ ಮಾತನಾಡಿ, "ಕೋರ್ಟ್​ ಆವರಣದಲ್ಲಿ ಚಿರತೆ ಚಲನವಲನದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಅರಣ್ಯ ಇಲಾಖೆ ನಿರಂತರವಾಗಿ ಗಸ್ತು ತಿರುಗುತ್ತಿದ್ದು, ಇದನ್ನು ಹೆಚ್ಚಿಸಲಾಗುವುದು. ಅಗತ್ಯವಿದ್ದರೆ, ಚಿರತೆ ಕಾಣಿಸಿಕೊಂಡಿದೆ ಎಂದು ಹೇಳಲಾದ ಸ್ಥಳದಲ್ಲಿ ಬೋನ್​ಗಳನ್ನು ಸಹ ಇರಿಸಲಾಗುವುದು" ಎಂದು ತಿಳಿಸಿದರು.

ಈಟಿವಿ ಭಾರತ ಜೊತೆಗೆ ಮಾತನಾಡಿದ ಡಿಎಫ್​ಒ ಅನಿರುದ್ಧ ಸ್ವಪ್ನಿಲ್​, "ಚಿರತೆ ಕಾಣಿಸಿಕೊಂಡಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಗಸ್ತು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಗತ್ಯವಿದ್ದರೆ, ಆ ಪ್ರದೇಶದಲ್ಲಿ ಬೋನ್​ ಇಡಲಾಗುವುದು. ನಾಗದೇವ್​ ವ್ಯಾಪ್ತಿ ಈಗಾಗಲೇ ಚಿರತೆ ಪೀಡಿತ ಪ್ರದೇಶವಾಗಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಿರತೆಗಳಿವೆ. ಅವುಗಳು ಕೆಲವೊಮ್ಮೆ ವಸತಿ ಪ್ರದೇಶಗಳ ಕಡೆಗೂ ಬರುತ್ತವೆ" ಎಂದರು.

ಕೆಲವು ದಿನಗಳ ಹಿಂದೆ ಚಾಕಿಸೈನ್​ ತಹಸಿಲ್​ನ ಮರ್ಖೋಲಾ ಗ್ರಾಮದಲ್ಲಿ ಹುಲ್ಲು ತರಲೆಂದು ಹೋಗಿದ್ದ ವೃದ್ಧೆಯೊಬ್ಬಳ ಮೇಲೆ ಚಿರತೆ ದಾಳಿ ಮಾಡಿತ್ತು. ದಾಳಿಯಲ್ಲಿ ಮಹಿಳೆಯ ಕೆನ್ನೆ, ಕೈ ಮತ್ತು ಭುಜಕ್ಕೆ ಗಾಯಗಳಾಗಿತ್ತು.

ಇದನ್ನೂ ಓದಿ: ಚಿರತೆ ದಾಳಿಗೆ ಅರ್ಚಕ ಬಲಿ; 10 ದಿನದಲ್ಲಿ ಆರನೇ ಸಾವು - PANTHER ATTACK

ETV Bharat Logo

Copyright © 2024 Ushodaya Enterprises Pvt. Ltd., All Rights Reserved.