ಆಗ್ರಾ: ವಾರದ ಹಿಂದೆ ಎಂಟು ಮಂದಿ ಪೊಲೀಸರನ್ನ ಹತ್ಯೆ ಮಾಡಿದ್ದ ಕುಖ್ಯಾತ ರೌಡಿ ವಿಕಾಸ್ ದುಬೆ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಇದೀಗ ಅವರನ್ನ ಜೀವಂತವಾಗಿ ಸುಟ್ಟು ಹಾಕುವಂತೆ ಹುತಾತ್ಮ ಪೊಲೀಸ್ ಕಾನ್ಸ್ಟೇಬಲ್ ಸಹೋದರ ಆಗ್ರಹಿಸಿದ್ದಾರೆ.
ಹುತಾತ್ಮ ಪೊಲೀಸ್ ಕಾನ್ಸ್ಟೇಬಲ್ ಬಬ್ಲು ಕುಮಾರ್ ಸಹೋದರ ದಿನೇಶ್ ಕುಮಾರ್ ಮಾತನಾಡಿದ್ದು, ಕುಖ್ಯಾತ ರೌಡಿ ವಿಕಾಸ್ ದುಬೆ ಬಂಧನ ಮಾಡಲು ಪೊಲೀಸರು ಬಹಳ ಸಮಯ ತೆಗೆದುಕೊಂಡಿದ್ದು, ಆತನಿಗೆ ಹೆಚ್ಚಿನ ಶಿಕ್ಷೆ ನೀಡಬೇಕು ಎಂದಿದ್ದು, ಆತನನ್ನ ಜೀವಂತವಾಗಿ ಸುಟ್ಟು ಹಾಕಿದಾಗ ಮಾತ್ರ ನಮ್ಮ ಕುಟುಂಬಕ್ಕೆ ತೃಪ್ತಿ ಸಿಗಲಿದೆ ಎಂದಿದ್ದಾರೆ.
ಕಾನ್ಪುರದಲ್ಲಿ ನಡೆದ ಪೊಲೀಸರ ಮೇಲಿನ ಎನ್ಕೌಂಟರ್ ಬಳಿಕ ತಲೆಮರೆಸಿಕೊಂಡಿದ್ದ ವಿಕಾಸ್ ದುಬೆ, ಮಧ್ಯ ಪ್ರದೇಶದ ಉಜ್ಜಯಿನಿ ಬಳಿ ಸಿಕ್ಕಿಬಿದ್ದಿದ್ದಾನೆ.