ಉತ್ತರ ಪ್ರದೇಶ: ಮಾಜಿ ಸೈನಿಕನ ಮೇಲೆ ಗ್ರಾಮದ ಮುಖ್ಯಸ್ಥರ ಪತಿ ಮತ್ತು ಅವರ ಸಹಚರರು ಗುಂಡಿನ ದಾಳಿ ನಡೆಸಿರುವ ಘಟನೆ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ. ನಿವೃತ್ತ ಸೈನಿಕ ಯಶ್ವೀರ್ ಸಿಂಗ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಸಿಂಗ್ ಸಹೋದರ ಪೊಲೀಸರಿಗೆ ದೂರು ನೀಡಿದ್ದು, ಗ್ರಾಮದ ಮುಖ್ಯಸ್ಥರ ಪತಿ ಸಂದೀಪ್ ಮತ್ತು ಅವರ ಬೆಂಬಲಿಗರು ಬುಧವಾರ ಸಂಜೆ ಜಿಲ್ಲೆಯ ಹಸನ್ಪುರ ಗ್ರಾಮದಲ್ಲಿರುವ ಸೈನಿಕನ ಮನೆಗೆ ನುಗ್ಗಿ ಹಳೆ ದ್ವೇಷದ ಹಿನ್ನೆಲೆ ಗುಂಡು ಹಾರಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.