ETV Bharat / bharat

ಸ್ನಾನಕ್ಕೆಂದು ತೆರಳಿದ್ದ ಐವರು ಬಾಲಕರು ಸರಯೂ ನದಿಯಲ್ಲಿ ಮುಳುಗಿ ದುರ್ಮರಣ..

ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದಾಗ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಬೈರಿಯಾ ಪೊಲೀಸ್ ಠಾಣೆಯ ಅಧಿಕಾರಿ ಸಂಜಯ್​ ಕುಮಾರ್ ತ್ರಿಪಾಠಿ ತಿಳಿಸಿದ್ದಾರೆ.

author img

By

Published : May 5, 2020, 2:07 PM IST

Sarayu river
ಸರಯೂ ನ

ಉತ್ತರ ಪ್ರದೇಶ : ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ಮುಳುಗಿ ಐವರು ಬಾಲಕರು ನೀರುಪಾಲಾದ ಘಟನೆ ಯುಪಿಯ ಬಿಲ್ಲಿಯಾ ಜಿಲ್ಲೆಯ ಅಥಗಾವಾ ಪ್ರದೇಶದಲ್ಲಿ ನಡೆದಿದೆ.

ಸರಯೂ ನದಿಯೊಳಗೆ ಮುಳುಗಿ ಐವರು ಬಾಲಕರು ಸಾವು

ಇಲ್ಲಿನ ಸರಯೂ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಬಾಲಕರು ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಬೈರಿಯಾ ಪೊಲೀಸ್ ಠಾಣೆಯ ಅಧಿಕಾರಿ ಸಂಜಯ್​ ಕುಮಾರ್ ತ್ರಿಪಾಠಿ ತಿಳಿಸಿದ್ದಾರೆ.

ಫಕ್ರು ರೈ ಕಾ ಡೇರಾ ಗ್ರಾಮದ ಲವಕುಶ ಯಾದವ್​(16), ವಿಕಾಸ್​ ಯಾದವ್​(16), ಪಪ್ಪು ಯಾದವ್​ (10), ಲಾಲೂ ಯಾದವ್ (8) ಹಾಗೂ ವಿಶಾಲ್​ ಯಾದವ್​ (14) ಮೃತ ದುರ್ದೈವಿಗಳು. ನಾಲ್ವರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಮತ್ತೊಬ್ಬ ಬಾಲಕನ ಮೃತದೇಹಕ್ಕಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಆದರೆ, ನೀರಿನ ಅಲೆಗಳು ಹೆಚ್ಚಿರುವ ಕಾರಣದಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶ : ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ಮುಳುಗಿ ಐವರು ಬಾಲಕರು ನೀರುಪಾಲಾದ ಘಟನೆ ಯುಪಿಯ ಬಿಲ್ಲಿಯಾ ಜಿಲ್ಲೆಯ ಅಥಗಾವಾ ಪ್ರದೇಶದಲ್ಲಿ ನಡೆದಿದೆ.

ಸರಯೂ ನದಿಯೊಳಗೆ ಮುಳುಗಿ ಐವರು ಬಾಲಕರು ಸಾವು

ಇಲ್ಲಿನ ಸರಯೂ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಬಾಲಕರು ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಬೈರಿಯಾ ಪೊಲೀಸ್ ಠಾಣೆಯ ಅಧಿಕಾರಿ ಸಂಜಯ್​ ಕುಮಾರ್ ತ್ರಿಪಾಠಿ ತಿಳಿಸಿದ್ದಾರೆ.

ಫಕ್ರು ರೈ ಕಾ ಡೇರಾ ಗ್ರಾಮದ ಲವಕುಶ ಯಾದವ್​(16), ವಿಕಾಸ್​ ಯಾದವ್​(16), ಪಪ್ಪು ಯಾದವ್​ (10), ಲಾಲೂ ಯಾದವ್ (8) ಹಾಗೂ ವಿಶಾಲ್​ ಯಾದವ್​ (14) ಮೃತ ದುರ್ದೈವಿಗಳು. ನಾಲ್ವರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಮತ್ತೊಬ್ಬ ಬಾಲಕನ ಮೃತದೇಹಕ್ಕಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಆದರೆ, ನೀರಿನ ಅಲೆಗಳು ಹೆಚ್ಚಿರುವ ಕಾರಣದಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.