ಶ್ರೀನಗರ: ಕಾಶ್ಮೀರ್ ಗಡಿ ಸಮಸ್ಯೆ ಆದಷ್ಟು ಬೇಗ ಬಗೆಹರಿಯಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದು, ಭೂಮಿಯ ಮೇಲಿನ ಯಾವುದೇ ಶಕ್ತಿ ಅದನ್ನ ತಡೆಯಲು ಅಸಾಧ್ಯ ಎಂದು ಹೇಳಿದ್ದಾರೆ.
1999ರ ಕಾರ್ಗಿಲ್ ವಾರ್ನಲ್ಲಿ ವೀರ ಮರಣವನ್ನಪ್ಪಿರುವ ಯೋಧರ ವಾರ್ ಮೆಮೋರಿಯಲ್ಗೆ ಭೇಟಿ ನೀಡಿದ ವೇಳೆ ಈ ಮಾತು ಹೇಳಿದ್ದಾರೆ. ಆಪರೇಷನ್ ವಿಜಯ್ಗೆ 20 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ರಾಜನಾಥ್ ಸಿಂಗ್ ಅಲ್ಲಿಗೆ ತೆರಳಿ ಗೌರವ ಸಲ್ಲಿಸಿದರು.
ಸಮಸ್ಯೆ ಮಾತಿನ ಮೂಲಕ ಬಗೆಹರಿಯದಿದ್ದರೆ ಹೇಗೆ ಇತ್ಯರ್ಥ ಮಾಡಬೇಕು ಎಂಬುದು ನಮಗೆ ಗೊತ್ತಿದೆ ಎಂದ ಅವರು, ಜಮ್ಮು-ಕಾಶ್ಮೀರದಲ್ಲಿ ಹೆಚ್ಚಿನ ಅಭಿವೃದ್ಧಿಗೆ ಕೇಂದ್ರ ನಿರ್ಧರಿಸಿದ್ದು,ಅತ್ಯದ್ಬುತ ಪ್ರವಾಸಿ ತಾಣವನ್ನಾಗಿ ಮಾರ್ಪಾಡು ಮಾಡುವುದೇ ನಮ್ಮ ಆದ್ಯತೆ ಎಂದಿದ್ದಾರೆ. ಇದೇ ವೇಳೆ ಬಾರ್ಡರ್ನಲ್ಲಿ ನಿರ್ಮಾಣಗೊಂಡಿರುವ ಎರಡು ರಸ್ತೆಗಳ ಉದ್ಘಾಟನೆ ಸಹ ನೇರವೇರಿಸಿದರು.