ನವದೆಹಲಿ: ಭಯೋತ್ಪಾದನೆಗೆ ಹಣಕಾಸು ಸಹಾಯ ತಡೆಯುವಂತೆ ಪಾಕಿಸ್ತಾನಕ್ಕೆ ಎಫ್ಎಟಿಎಫ್ ಕಟ್ಟಾಜ್ಞೆ ವಿಧಿಸಿರುವ ಬೆನ್ನಲ್ಲೆ, ಭಾರತ ಸಹ ಈ ಬಗ್ಗೆ ಇನ್ನಾದರೂ ಕ್ರಮ ಕೈಗೊಳ್ಳುವಂತೆ ಹೇಳಿದೆ.
ಅಕ್ಟೋಬರ್ ತಿಂಗಳೊಳಗೆ ಉಗ್ರರಿಗೆ ಹಣಕಾಸು ನೆರವು ನೀಡುವುದನ್ನು ನಿಲ್ಲಿಸಬೇಕು ಎಂದು ಫಿನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ನಿನ್ನೆ ಹೇಳಿತ್ತು. ಇಲ್ಲವಾದರೆ ಪಾಕಿಸ್ತಾನವನ್ನು ಬ್ಲಾಕ್ಲಿಸ್ಟ್ಗೆ ಸೇರಿಸುವುದಾಗಿ ಎಚ್ಚರಿಕೆ ನೀಡಿತ್ತು. ಪಾಕಿಸ್ತಾನವು ಇನ್ನಾದರೂ ಈ ಬಗ್ಗೆ ನಂಬಿಕಾರ್ಹ, ಪರಿಶೀಲನಾರ್ಹ ಹಾಗೂ ಸುಸ್ಥಿರವಾದ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಭಾರತ ಇಂದು ಹೇಳಿದೆ.
ಎಫ್ಎಟಿಎಫ್ ಆಕ್ಷನ್ ಪ್ಲಾನ್ನಂತೆ ಗಡುವಿನೊಳಗೆ ಪಾಕಿಸ್ತಾನ ಅಗತ್ಯ ಹೆಜ್ಜೆ ಇಡಬೇಕಿದೆ. ರಾಜಕೀಯ ಬದ್ಧತೆಯಿಂದ ಉಗ್ರರಿಗೆ ಹಣಸಾಕು ನೆರವು ತಡೆಯಬೇಕಿದೆ ಎಂದು ಕೇಂದ್ರ ವಿದೇಶಾಂಗ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ಪಾಕಿಸ್ತಾನವೂ ಎಫ್ಎಟಿಎಫ್ ಎಚ್ಚರಿಕೆಗೆ ತಲೆಬಾಗಿದ್ದು, ಅಗತ್ಯ ಕ್ರಮ ಕೈಗೊಳ್ತೇವೆ. ಗ್ರೇ ಲಿಸ್ಟ್ನಿಂದ ಹೊರಬರುವ ಪ್ರಯತ್ನ ಮಾಡ್ತೇವೆ ಎಂದು ಹೇಳಿದೆ