ಔರಯಾ(ಉತ್ತರ ಪ್ರದೇಶ): ನಗರದ ನಾರಾಯಣಪುರದಲ್ಲಿ ಶನಿವಾರ 2 ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಇನ್ನೂ ಘಟನೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಎಂಎಲ್ಸಿ ಕಮಲೇಶ್ ಪಾಠಕ್ ಸೇರಿದಂತೆ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಕಾರಣ, ಇನ್ನುಳಿದ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.
ಗಲಾಟೆ ವೇಳೆ ಸಮಾಜವಾದಿ ಪಕ್ಷದ ಎಂಎಲ್ಸಿ ಕಮಲೇಶ್ ಪಾಠಕ್ ಸಹೋದರ ಸಂತೋಷ್ ಪಾಠಕ್ ಇಬ್ಬರ ಮೇಲೆ ಗುಂಡು ಹಾರಿಸಿದ್ದಾನೆ. ಸದ್ಯ ಎಂಎಲ್ಸಿ ಕಮಲೇಶ್ ಪಾಠಕ್ ಸೇರಿದಂತೆ 6 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಔರಯಾ ಎಸ್ಪಿ ಸುನಿತಿ ಹೇಳಿದ್ದಾರೆ.