ETV Bharat / bharat

'ಗಾಲ್ವಾನ್ ಘರ್ಷಣೆಯ ನಂತರ ಸಿದ್ಧತೆ, ತರಬೇತಿ ಅನಿವಾರ್ಯವೆಂದು ಚೀನಾ ಅರಿತುಕೊಂಡಿದೆ'

author img

By

Published : Jun 23, 2021, 10:13 AM IST

ಚೀನಾದಲ್ಲಿ ಸಾಮಾನ್ಯವಾಗಿ ಅಲ್ಪಾವಧಿಗೆ ಸೈನಿಕರನ್ನು ನೇಮಿಸಿಕೊಂಡು ಹಿಮಾಲಯದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ ಎಂದು ಬಿಪಿನ್ ರಾವತ್ ಹೇಳಿದ್ದಾರೆ.

After Galwan clash, Ladakh faceoffs, Chinese Army realised it needs to be better trained: CDS Rawat
'ಗಾಲ್ವಾನ್ ಸಂಘರ್ಷದ ನಂತರ ಚೀನಾ ಸಿದ್ಧತೆ, ತರಬೇತಿ ಅನಿವಾರ್ಯವೆಂದು ಅರಿತುಕೊಂಡಿದೆ'

ನವದೆಹಲಿ: ಕಳೆದ ವರ್ಷ ಗಾಲ್ವಾನ್ ಕಣಿವೆಯಲ್ಲಿ ಭಾರತದ ಸೈನಿಕರೊಂದಿಗೆ ಸಂಘರ್ಷ ನಡೆಸಿದ ನಂತರ ಮತ್ತಷ್ಟು ಸಿದ್ಧತೆ ಮತ್ತು ತರಬೇತಿ ಅನಿವಾರ್ಯ ಎಂಬುದನ್ನು ಚೀನಾ ಅರಿತುಕೊಂಡಿದೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

ಚೀನಾದ ಸೈನಿಕರು ಅಲ್ಪಾವಧಿಗೆ ಮಾತ್ರ ಕಾರ್ಯ ನಿರ್ವಹಿಸುತ್ತಾರೆ. ಅತಿ ಎತ್ತರದ ಹಿಮಾಲಯ ಭೂ ಪ್ರದೇಶದಲ್ಲಿ ಹೋರಾಡುವ ಅನುಭವವನ್ನು ಚೀನಾದ ಸೈನಿಕರು ಹೊಂದಿಲ್ಲ ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ.

ಜೂನ್ 15ರಂದು ನಡೆದ ಗಾಲ್ವಾನ್ ಕಣಿವೆ ಘರ್ಷಣೆಯಲ್ಲಿ ಚೀನಾದ ಸೈನ್ಯವು ಭಾರಿ ನಷ್ಟವನ್ನು ಅನುಭವಿಸಿತು. ಚೀನಾದಲ್ಲಿ ಸಾಮಾನ್ಯವಾಗಿ ಅಲ್ಪಾವಧಿಗೆ ಸೈನಿಕರನ್ನು ನೇಮಿಸಿಕೊಂಡು ಹಿಮಾಲಯದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಹೊಸ ಅಪಾಯ ತಂದಿಟ್ಟ ಡೆಲ್ಟಾ ಪ್ಲಸ್​: ವ್ಯಾಕ್ಸಿನ್‌ ಕೆಲಸ ಮಾಡುವುದೇ? ಇಲ್ಲಿದೆ ಪೂರ್ತಿ ವಿವರ..

ಗಾಲ್ವಾನ್ ಪ್ರದೇಶದ ಚೀನಾದ ಎಲ್ಲಾ ಚಟುವಟಿಕೆಗಳ ಬಗ್ಗೆ ಭಾರತ ನಿಗಾ ಇಡಬೇಕಿದೆ. ಇಂಥ ಪ್ರದೇಶಗಳಲ್ಲಿ ಹೋರಾಡುವುದರಲ್ಲಿ ಭಾರತೀಯ ಸೈನಿಕರು ಬಹಳ ಪ್ರವೀಣರು. ಟಿಬೆಟ್​ ಯುದ್ಧ ಭೂಮಿಯಲ್ಲೂ ನಮ್ಮ ಸೈನಿಕರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ.

ಸದ್ಯಕ್ಕೆ ಚೀನಾದ ಕ್ರಮಗಳನ್ನು ತಡೆಯಲು ಗಾಲ್ವಾನ್ ಗಡಿಯಲ್ಲಿ ಹೆಚ್ಚಿನ ಸೈನ್ಯ ನಿಯೋಜನೆ ಮಾಡಲಾಗಿದೆ. ಉತ್ತರ ಗಡಿಯಲ್ಲಿ ನಿಯೋಜಿಸಿರುವ ಸೈನ್ಯವು ಪಶ್ಚಿಮ ಗಡಿಯಲ್ಲಿಯೂ ಕಾರ್ಯನಿರ್ವಹಿಸಲು ಸಮರ್ಥವಾಗಿದೆ ಎಂದು ಸಿಡಿಎಸ್ ಹೇಳಿದ್ದಾರೆ.

ನವದೆಹಲಿ: ಕಳೆದ ವರ್ಷ ಗಾಲ್ವಾನ್ ಕಣಿವೆಯಲ್ಲಿ ಭಾರತದ ಸೈನಿಕರೊಂದಿಗೆ ಸಂಘರ್ಷ ನಡೆಸಿದ ನಂತರ ಮತ್ತಷ್ಟು ಸಿದ್ಧತೆ ಮತ್ತು ತರಬೇತಿ ಅನಿವಾರ್ಯ ಎಂಬುದನ್ನು ಚೀನಾ ಅರಿತುಕೊಂಡಿದೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

ಚೀನಾದ ಸೈನಿಕರು ಅಲ್ಪಾವಧಿಗೆ ಮಾತ್ರ ಕಾರ್ಯ ನಿರ್ವಹಿಸುತ್ತಾರೆ. ಅತಿ ಎತ್ತರದ ಹಿಮಾಲಯ ಭೂ ಪ್ರದೇಶದಲ್ಲಿ ಹೋರಾಡುವ ಅನುಭವವನ್ನು ಚೀನಾದ ಸೈನಿಕರು ಹೊಂದಿಲ್ಲ ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ.

ಜೂನ್ 15ರಂದು ನಡೆದ ಗಾಲ್ವಾನ್ ಕಣಿವೆ ಘರ್ಷಣೆಯಲ್ಲಿ ಚೀನಾದ ಸೈನ್ಯವು ಭಾರಿ ನಷ್ಟವನ್ನು ಅನುಭವಿಸಿತು. ಚೀನಾದಲ್ಲಿ ಸಾಮಾನ್ಯವಾಗಿ ಅಲ್ಪಾವಧಿಗೆ ಸೈನಿಕರನ್ನು ನೇಮಿಸಿಕೊಂಡು ಹಿಮಾಲಯದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಹೊಸ ಅಪಾಯ ತಂದಿಟ್ಟ ಡೆಲ್ಟಾ ಪ್ಲಸ್​: ವ್ಯಾಕ್ಸಿನ್‌ ಕೆಲಸ ಮಾಡುವುದೇ? ಇಲ್ಲಿದೆ ಪೂರ್ತಿ ವಿವರ..

ಗಾಲ್ವಾನ್ ಪ್ರದೇಶದ ಚೀನಾದ ಎಲ್ಲಾ ಚಟುವಟಿಕೆಗಳ ಬಗ್ಗೆ ಭಾರತ ನಿಗಾ ಇಡಬೇಕಿದೆ. ಇಂಥ ಪ್ರದೇಶಗಳಲ್ಲಿ ಹೋರಾಡುವುದರಲ್ಲಿ ಭಾರತೀಯ ಸೈನಿಕರು ಬಹಳ ಪ್ರವೀಣರು. ಟಿಬೆಟ್​ ಯುದ್ಧ ಭೂಮಿಯಲ್ಲೂ ನಮ್ಮ ಸೈನಿಕರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ.

ಸದ್ಯಕ್ಕೆ ಚೀನಾದ ಕ್ರಮಗಳನ್ನು ತಡೆಯಲು ಗಾಲ್ವಾನ್ ಗಡಿಯಲ್ಲಿ ಹೆಚ್ಚಿನ ಸೈನ್ಯ ನಿಯೋಜನೆ ಮಾಡಲಾಗಿದೆ. ಉತ್ತರ ಗಡಿಯಲ್ಲಿ ನಿಯೋಜಿಸಿರುವ ಸೈನ್ಯವು ಪಶ್ಚಿಮ ಗಡಿಯಲ್ಲಿಯೂ ಕಾರ್ಯನಿರ್ವಹಿಸಲು ಸಮರ್ಥವಾಗಿದೆ ಎಂದು ಸಿಡಿಎಸ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.