ಶಿವಮೊಗ್ಗ: ಭದ್ರಾ ನದಿಯಲ್ಲಿ ಮುಳುಗುತ್ತಿದ್ದ ವೃದ್ಧೆಯನ್ನು ಪೊಲೀಸರು ರಕ್ಷಿಸಿದ್ದಾರೆ. ಭದ್ರಾವತಿಯ ಹೊಸ ಸೇತುವೆ ಬಳಿ ವೃದ್ಧೆ ನದಿಯಲ್ಲಿ ಬಿದ್ದು ಸಾಯಲು ಯತ್ನಿಸುತ್ತಿದ್ದಾರೆ ಎಂದು ERSS-122ಗೆ ದೂರವಾಣಿ ಕರೆ ಬಂದಿದೆ. ತಕ್ಷಣ ERSS-122 ಸಿಬ್ಬಂದಿ ಸೇತುವೆ ಬಳಿ ಹೋಗಿ ನೋಡಿದಾಗ ವೃದ್ಧೆ ಮುಳುಗುತ್ತಿದ್ದರು. ಪೊಲೀಸರು ಸಾರ್ವಜನಿಕರ ಸಹಾಯದಿಂದ ವೃದ್ಧೆಯನ್ನು ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ.
ನಂತರ ನೀರು ಕುಡಿಸಿ, ಯಾವ ಕಾರಣಕ್ಕೆ ನದಿಗೆ ಬಿದ್ದು ಸಾಯಲು ಯತ್ನಿಸುತ್ತಿದ್ದೀರಿ ಎಂದು ವಿಚಾರಿಸಿದ್ದು, ಕೌಟುಂಬಿಕ ಸಮಸ್ಯೆಗಳ ಕಾರಣದಿಂದ ಸಾಯುವ ನಿರ್ಧಾರ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.