ಕರ್ನಾಟಕ

karnataka

ETV Bharat / snippets

ಭದ್ರಾನದಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆಯ ರಕ್ಷಿಸಿದ ಪೊಲೀಸರು

OLD WOMAN RESCUED
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Oct 21, 2024, 6:29 PM IST

ಶಿವಮೊಗ್ಗ: ಭದ್ರಾ ನದಿಯಲ್ಲಿ ಮುಳುಗುತ್ತಿದ್ದ ವೃದ್ಧೆಯನ್ನು ಪೊಲೀಸರು ರಕ್ಷಿಸಿದ್ದಾರೆ. ಭದ್ರಾವತಿಯ ಹೊಸ ಸೇತುವೆ ಬಳಿ ವೃದ್ಧೆ ನದಿಯಲ್ಲಿ ಬಿದ್ದು ಸಾಯಲು ಯತ್ನಿಸುತ್ತಿದ್ದಾರೆ ಎಂದು ERSS-122ಗೆ ದೂರವಾಣಿ ಕರೆ ಬಂದಿದೆ. ತಕ್ಷಣ ERSS-122 ಸಿಬ್ಬಂದಿ ಸೇತುವೆ ಬಳಿ ಹೋಗಿ‌ ನೋಡಿದಾಗ ವೃದ್ಧೆ ಮುಳುಗುತ್ತಿದ್ದರು. ಪೊಲೀಸರು ಸಾರ್ವಜನಿಕರ ಸಹಾಯದಿಂದ ವೃದ್ಧೆಯನ್ನು ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ.

ನಂತರ ನೀರು ಕುಡಿಸಿ, ಯಾವ ಕಾರಣಕ್ಕೆ ನದಿಗೆ ಬಿದ್ದು ಸಾಯಲು ಯತ್ನಿಸುತ್ತಿದ್ದೀರಿ ಎಂದು ವಿಚಾರಿಸಿದ್ದು, ಕೌಟುಂಬಿಕ ಸಮಸ್ಯೆಗಳ ಕಾರಣದಿಂದ ಸಾಯುವ ನಿರ್ಧಾರ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

ವೃದ್ಧೆಯ ಮನವೊಲಿಸಿ ಭದ್ರಾವತಿ ಡಿವೈಎಸ್ಪಿ‌ ಕಚೇರಿಗೆ ಕರೆದುಕೊಂಡು ಹೋಗಲಾಯಿತು. ಆ ಬಳಿಕ ಸಂಬಂಧಿಕರನ್ನು ಕರೆಯಿಸಿ ಮನೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಹಾವೇರಿ: ಹಳ್ಳದ ನಡುವೆ ಸಿಲುಕಿದ್ದ 25 ಭಕ್ತರ ರಕ್ಷಣೆ, ನಿಟ್ಟುಸಿರು ಬಿಟ್ಟ ಜನ

ABOUT THE AUTHOR

...view details