ಕರ್ನಾಟಕ

karnataka

ಮದ್ದು ಕಟ್ಟುವ ವೇಳೆ ಸ್ಫೋಟ: ಓರ್ವ ವ್ಯಕ್ತಿ ಸಜೀವ ದಹನ

By ETV Bharat Karnataka Team

Published : Jul 20, 2024, 10:47 PM IST

Explosion in Belagavi: One person burnt alive
ಮದ್ದು ಕಟ್ಟುವ ವೇಳೆ ಸ್ಫೋಟ: ಓರ್ವ ವ್ಯಕ್ತಿ ಸಜೀವ ದಹನ (ETV Bharat)

ಬೆಳಗಾವಿ: ಮದ್ದು ಕುಟ್ಟುವ ವೇಳೆ ಆಕಸ್ಮಿಕವಾಗಿ ಸ್ಫೋಟಗೊಂಡು ಓರ್ವ ವ್ಯಕ್ತಿ ಸಜೀವ ದಹನವಾಗಿರುವ ಘಟನೆ ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಮಲ್ಲಪ್ಪ ಸತ್ಯಪ್ಪ ಕಂಕಣವಾಡಿ(38) ಸಜೀವ ದಹನವಾದ ವ್ಯಕ್ತಿ. ಪಂಚಮಿಯಲ್ಲಿ ಹಾರಿಸೋಕೆ ಮದ್ದು ತಯಾರಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಸ್ಫೋಟಗೊಂಡು ದುರ್ಘಟನೆ ಸಂಭವಿಸಿದೆ. ಏಕಾಏಕಿ ಎಲ್ಲಾ ಕಡೆ ಬೆಂಕಿ ಆವರಿಸಿದ್ದರಿಂದ ಸ್ಥಳದಲ್ಲೇ ಮಲ್ಲಪ್ಪ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಘಟಪ್ರಭಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

ABOUT THE AUTHOR

...view details