ಕರ್ನಾಟಕ

karnataka

ETV Bharat / sports

ಪಾಕ್​ ವಿರುದ್ಧ 8 ವರ್ಷದ ಸೇಡು ತೀರಿಸಿಕೊಳ್ಳಲು ಭಾರತ ಮಾಸ್ಟರ್​ ಪ್ಲಾನ್! - IND VS PAK

ಇಂದು ಪಾಕಿಸ್ತಾನ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿ ಹಳೆ ಸೇಡು ತೀರಿಸಿಕೊಳ್ಳಲು ಸಿದ್ಧತೆ ನಡೆಸಿದೆ.

INDIA VS PAKISTAN MATCH  IND VS PAK RECORD  PAKISTAN TEAM  CHAMPIONS TROPHY 2025
India vs Pakistan (IANS)

By ETV Bharat Sports Team

Published : Feb 22, 2025, 4:26 PM IST

Ind vs Pak: ಐಸಿಸಿ ಚಾಂಪಿಯನ್ಸ್​ ಟ್ರೋಫಿಯ ಭಾಗವಾಗಿ ಇಂದು ಭಾರತ ಮತ್ತು ಪಾಕಿಸ್ತಾನ ನಡುವೆ ಮಹಾಯುದ್ಧ​ ನಡೆಯಲಿದೆ.

2017ರ ಬಳಿಕ ಇದೇ ಮೊದಲ ಬಾರಿಗೆ ಈ ಟೂರ್ನಿಯಲ್ಲಿ ಉಭಯ ತಂಡಗಳು ಮುಖಾಮುಖಿ ಆಗುತ್ತಿವೆ. ಈಗಾಗಲೇ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಬಗ್ಗು ಬಡೆದಿರುವ ಟೀಂ ಇಂಡಿಯಾ, ಇದೀಗ ಪಾಕ್​ಗೆ ಸೋಲಿನ ರುಚಿ ತೋರಿಸಲು ಭರ್ಜರಿ ತಯಾರಿ ನಡೆಸಿದೆ. ಈ ಮೆಘಾ ಫೈಟ್​ ಪಂದ್ಯಕ್ಕೆ ದುಬೈನಲ್ಲಿ ಅಖಾಡ ಸಿದ್ಧಗೊಂಡಿದೆ. ಪಾಕಿಸ್ತಾನ ಕೂಡ ದುಬೈಗೆ ತಲುಪಿದ್ದು, ಅಭ್ಯಾಸ ಪ್ರಾರಂಭಿಸಿದೆ.

ಮತ್ತೊಂದೆಡೆ ಎರಡನೇ ಪಂದ್ಯ ಭಾರತದ ಪಾಲಿಗೆ ಮಹತ್ವದಾಗಿದ್ದು ಗೆಲ್ಲಲೇಬೇಕೆಂಬ ಪಣತೊಟ್ಟಿದೆ. ಈ ಹಿನ್ನೆಲೆ ಮೊದಲ ಪಂದ್ಯದಲ್ಲಿ ಆಡಿರುವ ಬುಹುತೇಕ ಆಟಗಾರರೊಂದಿಗೆ ಇಂದು ಅಖಾಡಕ್ಕಿಳಿಯಲಿದೆ. ಆದರೆ ಕುಲ್ದೀಪ್​ ಯಾದವ್​ ಮಾತ್ರ ಹೊರಗುಳಿಯುವ ಸಾಧ್ಯತೆ ಇದೆ. ಕಾರಣ ಮೊದಲ ಪಂದ್ಯದಲ್ಲಿ ಅವರಿಂದ ನಿರೀಕ್ಷಿತ ಪ್ರದರ್ಶನ ಕಂಡು ಬಂದಿರಲಿಲ್ಲ. ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಮಿಸ್ಟರಿ ಸ್ಪಿನ್ನರ್​ ವರುಣ್​ ಚಕ್ರವರ್ತಿ ಆಡುವ ಸಾಧ್ಯತೆ ಇದೆ.

ಸೇಡು ತೀರಿಸಿಕೊಳ್ಳಲು ಭಾರತ ಸಜ್ಜು :ಏತನ್ಮಧ್ಯೆ, ಈ ಪಂದ್ಯ ಗೆಲ್ಲುವ ಮೂಲಕ ಪಾಕ್​ ವಿರುದ್ಧ ಭಾರತ ಹಳೆ ಸೇಡು ತೀರಿಸಿಕೊಳ್ಳಲು ಮುಂದಾಗಿದೆ. ಹೌದು ಈ ಹಿಂದೆ 2017ರಲ್ಲಿ ಇಂಗ್ಲೆಂಡ್​ನಲ್ಲಿ ಚಾಂಪಿಯನ್ಸ್​ ಟ್ರೋಫಿ ನಡೆದಿತ್ತು. ಈ ಟೂರ್ನಿಯ 4ನೇ ಪಂದ್ಯದಲ್ಲಿ ಭಾರತ ಪಾಕ್​ ವಿರುದ್ಧ 124 ರನ್​ಗಳಿಂದ ಗೆಲುವು ಸಾಧಿಸಿತ್ತು. ಅಲ್ಲದೆ ಒಟ್ಟು ಮೂರು ಪಂದ್ಯಗಳಲ್ಲಿ ಗೆದ್ದು ಫೈನಲ್​ಗೆ ಲಗ್ಗೆ ಇಟ್ಟಿತ್ತು. ಮತ್ತೊಂದೆಡೆ ಪಾಕ್​ ಕೂಡ ಫೈನಲ್​ಗೆ ಪ್ರವೇಶ ಪಡೆದಿತ್ತು.

ಈ ಪಂದ್ಯದಲ್ಲಿ ಭಾರತ ಸುಲಭವಾಗಿ ಗೆದ್ದು ಮೂರನೇ ಬಾರಿಗೆ ಚಾಂಪಿಯನ್ಸ್​ ಟ್ರೋಫಿ ಎತ್ತಿ ಹಿಡಿಯುತ್ತೆ ಎಂದೇ ಭಾವಿಸಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಪಾಕ್​ ವಿರುದ್ಧ 180 ರನ್​ಗಳ ಹೀನಾಯ ಸೋಲನ್ನು ಕಂಡಿತು. ಇದೀಗ 8 ವರ್ಷದ ಬಳಿಕ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಸುವರ್ಣಾವಕಾಶ ದೊರೆತಿದೆ. ಇದಕ್ಕಾಗಿ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯಲು ಮಾಸ್ಟರ್​ ಪ್ಲಾನ್​ ಮಾಡಿಕೊಂಡಿದೆ.

ಈಗಾಗಲೇ ಮೊದಲ ಪಂದ್ಯದಲ್ಲಿ ಸೋಲನ್ನು ಕಂಡಿರುವ ಪಾಕ್​ಗೆ ಈ ಪಂದ್ಯ ಮಾಡು ಇಲ್ಲ ಮಡಿಯಂತಾಗಿದೆ. ಒಂದು ವೇಳೆ ಈ ಪಂದ್ಯದಲ್ಲೂ ಸೋಲನುಭವಿಸಿದರೆ ಫೈನಲ್​ ಕನಸು ಭಗ್ನಗೊಳ್ಳಲಿದೆ.

ಸಂಭಾವ್ಯ ತಂಡಗಳು-ಭಾರತ : ರೋಹಿತ್​ ಶರ್ಮಾ (ನಾಯಕ), ಶುಭಮನ್​ ಗಿಲ್​, ವಿರಾಟ್​ ಕೊಹ್ಲಿ, ಅಕ್ಷರ್​ ಪಟೇಲ್​, ಕೆಎಲ್​ ರಾಹುಲ್​ (ವಿಕೆಟ್​ ಕೀಪರ್​), ಶ್ರೇಯಸ್​ ಅಯ್ಯರ್​, ರವೀಂದ್ರ ಜಡೇಜಾ, ಹಾರ್ದಿಕ್​ ಪಾಂಡ್ಯ, ಮೊಹಮ್ಮದ್​ ಶಮಿ, ವರುಣ್​ ಚಕ್ರವರ್ತಿ/ಕುಲ್ದೀಪ್​ ಯಾದವ್, ಹರ್ಷಿತ್​ ರಾಣಾ​.

ಇದನ್ನೂ ಓದಿ:ನಾಳೆ ಭಾರತ - ಪಾಕ್​ ಮಹಾಯುದ್ಧ: ತಂಡಕ್ಕೆ ಡೇಂಜರಸ್​ ಪ್ಲೇಯರ್ ಎಂಟ್ರಿ​!

ABOUT THE AUTHOR

...view details