ಕರ್ನಾಟಕ

karnataka

ETV Bharat / international

ಆಸ್ಟ್ರೇಲಿಯಾದಲ್ಲಿ ಬಾಡಿಗೆ ವಿಚಾರಕ್ಕೆ ಕಿತ್ತಾಡಿಕೊಂಡ ಗೆಳೆಯರು, ಭಾರತದ ವಿದ್ಯಾರ್ಥಿ ಸಾವು - Indian Student died in Aus - INDIAN STUDENT DIED IN AUS

ಆಸ್ಟ್ರೇಲಿಯಾದಲ್ಲಿ ಬಾಡಿಗೆ ವಿಚಾರಕ್ಕೆ ಜಗಳ ನಡೆದಿದ್ದು, ಜಗಳವಾಡಬೇಡಿ ಎಂದು ಬಿಡಿಸಲು ತೆರಳಿದ್ದ ಭಾರತದ ವಿದ್ಯಾರ್ಥಿ ಸಾವನ್ನಪ್ಪಿರುವುದು ವರದಿಯಾಗಿದೆ.

STABBED TO DEATH IN AUSTRALIA  INDIAN ORIGIN BROTHERS  POLICE SEARCH  MURDER CASE
ಭಾರತದ ವಿದ್ಯಾರ್ಥಿ ಸಾವು (Etv Bharat)

By PTI

Published : May 6, 2024, 8:01 PM IST

ಮೆಲ್ಬೋರ್ನ್/ಚಂಡೀಗಢ:ಆಸ್ಟ್ರೇಲಿಯಾದಲ್ಲಿ ಕೆಲವು ಭಾರತೀಯ ವಿದ್ಯಾರ್ಥಿಗಳ ನಡುವಿನ ಜಗಳದಲ್ಲಿ ಭಾರತದ 22 ವರ್ಷದ ಎಂಟೆಕ್ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ. ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಭಾರತೀಯ ಮೂಲದ ಸಹೋದರರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಹರ್ಯಾಣದ ಕರ್ನಾಲ್‌ನಲ್ಲಿರುವ ಮೃತರ ಚಿಕ್ಕಪ್ಪ ಯಶ್ವೀರ್ ಪ್ರಕಾರ, ಬಾಡಿಗೆ ವಿಚಾರದಲ್ಲಿ ಭಾರತೀಯ ವಿದ್ಯಾರ್ಥಿಗಳ ನಡುವಿನ ವಿವಾದದಲ್ಲಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ನವಜೀತ್ ಸಂಧು ಮೇಲೆ ಇನ್ನೊಬ್ಬ ವಿದ್ಯಾರ್ಥಿ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ.

"ನವಜೀತ್‌ನ ಸ್ನೇಹಿತ (ಮತ್ತೊಬ್ಬ ಭಾರತೀಯ ವಿದ್ಯಾರ್ಥಿ) ಬಳಿ ಕಾರು ಇತ್ತು. ನವಜೀತ್​ ತನ್ನ ಸಾಮಗ್ರಿಗಳನ್ನು ತೆಗೆದುಕೊಳ್ಳಲು ಅವನ ಮನೆಗೆ ತೆರಳಿದ್ದನು. ನವಜೀತ್​ ಒಳಗೆ ತೆರಳದೇ ತನ್ನ ಸ್ನೇಹಿತನನ್ನು ಸಾಮಾನುಗಳನ್ನು ತರಲು ಕಳುಹಿಸಿದ್ದನು. ಅವನ ಸ್ನೇಹಿತ ಮನೆಯೊಳಗೆ ಹೋದಾಗ ನವಜೀತ್ ಕೆಲವು ಕೂಗುಗಳನ್ನು ಕೇಳಿ ಓಡಿ ಬಂದಿದ್ದಾನೆ. ಗಲಾಟೆ ನಡೆಯುವುದನ್ನು ಕಂಡು ನವಜೀತ್ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಆತನ ಎದೆಗೆ ಚಾಕುವಿನಿಂದ ಮಾರಣಾಂತಿಕವಾಗಿ ಇನ್ನೊಬ್ಬ ಸ್ನೇಹಿತ ಇರಿದಿದ್ದಾನೆ ಎಂದು ಯಶ್ವೀರ್ ಹೇಳಿದ್ದಾರೆ.

ನವಜೀತ್ ಅವರಂತೆ ಆರೋಪಿಯೂ ಕೂಡ ಕರ್ನಾಲ್ ಮೂಲದವರಾಗಿದ್ದಾರೆ. ಭಾನುವಾರ ಮುಂಜಾನೆ ಘಟನೆಯ ಬಗ್ಗೆ ಕುಟುಂಬಕ್ಕೆ ಮಾಹಿತಿ ಸಿಕ್ಕಿದೆ. ಘಟನೆಯಲ್ಲಿ ನವಜೀತ್ ಅವರ ಜೊತೆಗಿದ್ದ ಸ್ನೇಹಿತನಿಗೂ ಗಾಯಗಳಾಗಿವೆ ಎಂದು ಮೃತರ ಚಿಕ್ಕಪ್ಪ ತಿಳಿಸಿದ್ದಾರೆ.

ನವಜೀತ್ ಅದ್ಭುತ ವಿದ್ಯಾರ್ಥಿಯಾಗಿದ್ದು, ಜುಲೈನಲ್ಲಿ ರಜೆಗಾಗಿ ಮನಗೆ ಬರಬೇಕಾಗಿತ್ತು. ನವಜೀತ್ ಒಂದೂವರೆ ವರ್ಷಗಳ ಹಿಂದೆ ವ್ಯಾಸಂಗದ ವೀಸಾದ ಮೇಲೆ ಆಸ್ಟ್ರೇಲಿಯಾಕ್ಕೆ ತೆರಳಿದ್ದರು ಮತ್ತು ಅವರ ತಂದೆ ಕೃಷಿಕರು. ತಮ್ಮ ಒಂದೂವರೆ ಎಕರೆ ಭೂಮಿಯನ್ನು ಆತನ ಶಿಕ್ಷಣ ಹಣಕ್ಕಾಗಿ ಮಾರಾಟ ಮಾಡಿದ್ದರು ಎಂದು ಯಶ್ವೀರ್​ ಹೇಳಿದ್ದಾರೆ.

ಆದಷ್ಟು ಬೇಗ ಮೃತದೇಹವನ್ನು ತರಲು ನಮಗೆ ಸಹಾಯ ಮಾಡುವಂತೆ ನಾವು ಭಾರತ ಸರ್ಕಾರವನ್ನು ಒತ್ತಾಯಿಸುತ್ತೇವೆ. ವಿಕ್ಟೋರಿಯಾ ಪೊಲೀಸರು ತಮ್ಮ ನರಹತ್ಯೆ ಸ್ಕ್ವಾಡ್ ಪತ್ತೆದಾರರು ಮೆಲ್ಬೋರ್ನ್‌ನ ಆಗ್ನೇಯದಲ್ಲಿರುವ ಓರ್ಮಂಡ್‌ನಲ್ಲಿ ಇರಿತದ ನಂತರ ಅವರು ಹುಡುಕುತ್ತಿರುವ ಇಬ್ಬರು ವ್ಯಕ್ತಿಗಳ ವಿವರಗಳು ಮತ್ತು ಚಿತ್ರಗಳನ್ನು ಬಿಡುಗಡೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಭಾರತೀಯ ಮೂಲದ ಸಹೋದರರಾದ ಅಭಿಜೀತ್ ಮತ್ತು ರಾಬಿನ್ ಗಾರ್ಟನ್‌ಗಾಗಿ ಸದ್ಯ ಹುಡುಕಾಟ ನಡೆಯುತ್ತಿದೆ. ಅವರು ಕದ್ದ 2014 ಬಿಳಿ ಟೊಯೊಟಾ ಕ್ಯಾಮ್ರಿ ಸೆಡಾನ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆ ಸಂಭವಿಸಿದ ಸ್ವಲ್ಪ ಸಮಯದ ನಂತರ ಈ ಜೋಡಿಯು ಕೊನೆಯದಾಗಿ ಭಾನುವಾರದ ಮುಂಜಾನೆ ಒರ್ಮಂಡ್ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಸ್ಥಳೀಯ ಪೊಲೀಸ್​ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಓದಿ:ಬೆಂಗಳೂರು: ನಗರದ ಹಲವೆಡೆ ಗಾಳಿ, ಆಲಿಕಲ್ಲು ಸಹಿತ ಭಾರಿ ಮಳೆ - Rain in Bengaluru

ABOUT THE AUTHOR

...view details