ಕರ್ನಾಟಕ

karnataka

ರಾಮನವಮಿಗೆ ಯಶ್​​, ರಣ್​ಬೀರ್​​, ಸಾಯಿಪಲ್ಲವಿಯ ''ರಾಮಾಯಣ'' ಅನೌನ್ಸ್

By ETV Bharat Karnataka Team

Published : Mar 3, 2024, 5:32 PM IST

ಏಪ್ರಿಲ್ 17ರ ರಾಮನವಮಿಯಂದು ನಿತೇಶ್ ತಿವಾರಿ ಅವರ 'ರಾಮಾಯಣ' ಸಿನಿಮಾ ಘೋಷಣೆಯಾಗಲಿದೆ.

Ramayan
ರಾಮಾಯಣ ಸಿನಿಮಾ

ಬಾಲಿವುಡ್​ ಸೂಪರ್​​ ಸ್ಟಾರ್ ರಣ್​​ಬೀರ್ ಕಪೂರ್ ಭಗವಾನ್ ಶ್ರೀರಾಮನಾಗಿ, ಸೌತ್​ ಸ್ಟಾರ್ ನಟಿ ಸಾಯಿ ಪಲ್ಲವಿ ದೇವಿ ಸೀತೆಯಾಗಿ ಮತ್ತು ಸ್ಯಾಂಡಲ್​ವುಡ್​ನ ರಾಕಿಂಗ್​ ಸ್ಟಾರ್ ಯಶ್ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿರುವ ಬಾಲಿವುಡ್​ನ ಬಹುನಿರೀಕ್ಷಿತ ಸಿನಿಮಾ 'ರಾಮಾಯಣ'. ಚಿತ್ರದ ತಾರಾಬಳಗವನ್ನು ಬಹಿರಂಗಪಡಿಸಲು ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಸಿದ್ಧರಾಗಿದ್ದಾರೆ ಎಂದು ಹೇಳಲಾಗಿದೆ. ಪೌರಾಣಿಕ ಸಿನಿಮಾದ ಸುತ್ತಲಿರುವ ಮಾಹಿತಿ ಪ್ರಕಾರ, ನಿರ್ಮಾಪಕರು 2024ರ ರಾಮನವಮಿಯಂದು ಈ ಬಹುನಿರೀಕ್ಷಿತ ಚಿತ್ರವನ್ನು ಘೋಷಿಸಲು ಪ್ಲಾನ್​ ಮಾಡುತ್ತಿದ್ದಾರೆ.

ಕೆಲ ತಿಂಗಳಿಂದ ರಾಮಾಯಣ ಕುರಿತು ಹಲವು ಊಹಾಪೋಹಗಳು ಹರಿದಾಡಿವೆ. ಬರುವ ಏಪ್ರಿಲ್‌ನಲ್ಲಿ 'ರಾಮಾಯಣ'ದ ಅಧಿಕೃತ ಘೋಷಣೆ ಆಗೋ ಸಾಧ್ಯತೆ ಇದೆ. ವರದಿಗಳ ಪ್ರಕಾರ, ಸಿನಿಮಾದ ಅಧಿಕೃತ ಘೋಷಣೆಗಾಗಿ ಏಪ್ರಿಲ್ 17ರ ರಾಮ ನವಮಿಯ ಮಂಗಳಕರ ದಿನವನ್ನು ನಿಗದಿಪಡಿಸಲಾಗಿದೆ. ರಾಮನ ಕುರಿತ ಚಿತ್ರವಾಗಿರೋ ಹಿನ್ನೆಲೆ ರಾಮನವಮಿಯಂದು 'ರಾಮಾಯಣ' ಘೋಷಣೆ ಆಗಲಿದೆ. ಇದಕ್ಕಾಗಿ ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಈ ಪ್ರಾಜೆಕ್ಟ್​​​ ಹಿಂದಿರುವ ತಂಡ ಐದು ವರ್ಷಗಳಿಂದ 'ರಾಮಾಯಣ'ಕ್ಕಾಗಿ ಕೆಲಸ ಮಾಡುತ್ತಿದೆ. ಕಥೆ ಹೇಳುವಿಕೆ ಮತ್ತು ವಿಶುವಲ್​​​ ವಿಚಾರವಾಗಿ ಪ್ರೀ ಪ್ರೊಡಕ್ಷನ್​ ಕೆಲಸಗಳು ಜೋರಾಗೇ ನಡೆದಿವೆ.

ರಣ್​​ಬೀರ್ ಕಪೂರ್​​, ಸಾಯಿ ಪಲ್ಲವಿ ಮತ್ತು ಯಶ್ ಅಲ್ಲದೇ ಭಗವಾನ್ ಹನುಮಾನ್ ಆಗಿ ಸನ್ನಿ ಡಿಯೋಲ್, ಕೈಕೇಯಿ ಪಾತ್ರದಲ್ಲಿ ಲಾರಾ ದತ್ತಾ ಮತ್ತು ಶೂರ್ಪನಖಾ ಪಾತ್ರದಲ್ಲಿ ರಾಕುಲ್ ಪ್ರೀತ್ ಸಿಂಗ್ ನಟಿಸಲಿದ್ದಾರೆ. ಈ ಮಹಾಕಾವ್ಯದ ಮೊದಲ ಭಾಗದ ಚಿತ್ರೀಕರಣ ಈ ತಿಂಗಳು ಮುಂಬೈನಲ್ಲಿ ಪ್ರಾರಂಭವಾಗಲಿದೆ. 2025ರ ದೀಪಾವಳಿ ವಾರಾಂತ್ಯದಲ್ಲಿ ಸಿನಿಮಾ ಬಿಡುಗಡೆ ಮಾಡುವ ಗುರಿಯಿದೆ.

ಇದನ್ನೂ ಓದಿ:ಅಂಬಾನಿ ಕಾರ್ಯಕ್ರಮಕ್ಕೆ ಆಗಮಿಸಿದ ಅಮಿತಾಭ್​​-ರಜನಿ, ಐಶ್​-ಅಭಿ: ವಿಡಿಯೋ

ಕಳೆದ ಎರಡು ತಿಂಗಳಿನಿಂದ ಮುಂಬೈ ಮತ್ತು ಲಾಸ್ ಏಂಜಲೀಸ್​ನಲ್ಲಿ ಲುಕ್ ಟೆಸ್ಟ್, ಟೆಕ್ನಿಕಲ್ ರಿಹರ್ಸಲ್ ಸೇರಿದಂತೆ ವ್ಯಾಪಕ ಸಿದ್ಧತೆಗಳು ನಡೆದಿವೆ. ಅದ್ಭುತ ವಿಶುವಲ್​​ ಎಫೆಕ್ಟ್ಸ್ ಅಗತ್ಯತೆ ಹಿನ್ನೆಲೆ ನಿರ್ಮಾಪಕರು - ನಿರ್ದೇಶಕರು ಎಚ್ಚರಿಕೆ ವಹಿಸುತ್ತಿದ್ದಾರೆ. ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಬಾಲಿವುಡ್​ನ ಖಾನ್​ಗಳಿಗೆ ನಾಟು ನಾಟು ಡ್ಯಾನ್ಸ್​​ ಕಲಿಸಿಕೊಟ್ಟ ರಾಮ್​​​ ಚರಣ್​​: ವಿಡಿಯೋ ನೋಡಿ

ನಿರ್ದೇಶಕ ನಿತೇಶ್ ತಿವಾರಿ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಈ ಪ್ರೊಜೆಕ್ಟ್​ ಮುನ್ನಡೆಸುತ್ತಿದ್ದಾರೆ. ಇನ್ನು, ರಣ್​​​ಬೀರ್ ಕಪೂರ್ ಅವರು ಸಂಜಯ್ ಲೀಲಾ ಬನ್ಸಾಲಿ ಅವರ ಲವ್ ಅಂಡ್ ವಾರ್‌ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಶ್ ಟಾಕ್ಸಿಕ್‌ ಸಲುವಾಗಿ ಸುದ್ದಿಯಲ್ಲಿದ್ದಾರೆ. ಸಾಯಿ ಪಲ್ಲವಿ ತಂಡೆಲ್​ ಸಿನಿಮಾ ಸಲುವಾಗಿ ಗಮನ ಸೆಳೆದಿದ್ದಾರೆ.

ABOUT THE AUTHOR

...view details