ಹೈದರಾಬಾದ್:ತೆಲುಗು ನಟಿ ಶೋಭಿತಾ ಧೂಳಿಪಾಲ ಮತ್ತು ನಟ ನಾಗ ಚೈತನ್ಯ ಕುಟುಂಬಗಳು ಇದೀಗ ಮದುವೆ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗಷ್ಟೇ ಉಭಯ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆದಿತ್ತು. ಇದೀಗ ಮದುವೆ ತಯಾರಿ ಭರದಿಂದ ಸಾಗುತ್ತಿದೆ. ಇದರ ಭಾಗವಾಗಿ ಶೋಭಿತಾ ನಿವಾಸದಲ್ಲಿ ಇತ್ತೀಚಿಗೆ ಸಾಂಪ್ರದಾಯಿಕ ಪಸುಪು ಧಾನಚದಮ್ (ಧಾನ್ಯ ದಾನ) ಕಾರ್ಯಕ್ರಮ ನಡೆದಿದೆ. ಸಮಾರಂಭದ ಚಿತ್ರಗಳನ್ನು ಮದುಮಗಳು ಶೋಭಿತಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಆದರೆ, ಮದುವೆ ಯಾವಾಗ ಎಂಬ ಕುರಿತು ಕುಟುಂಬಸ್ಥರು ರಹಸ್ಯ ಕಾಯ್ದುಕೊಂಡಿದ್ದಾರೆ. ಶೋಭಿತಾ ಮಾತ್ರ ತಮ್ಮ ಹೊಸ ಜೀವನದ ಆರಂಭದ ಕುರಿತ ಹಲವು ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಧಾನ್ಯ ದಾನ ಕಾರ್ಯಕ್ರಮದಲ್ಲಿ ಕೇಸರಿ, ಹಸಿರು ರೇಷ್ಮೆ ಸೇರಿಯುಟ್ಟು ನಟಿ ಕಂಗೊಳಿಸಿದ್ದಾರೆ. ದಕ್ಷಿಣ ಭಾರತದ ಸಂಪ್ರದಾಯದಂತೆ ಚಿನ್ನದ ಒಡವೆಗಳೊಂದಿಗೆ ಅವರು ಅದ್ಬುತವಾಗಿ ಕಂಡಿದ್ದಾರೆ.