ಕರ್ನಾಟಕ

karnataka

ETV Bharat / entertainment

ಸೆಟ್ಟೇರಿತು ದಳಪತಿ ವಿಜಯ್​​​ ನಟನೆಯ 'ದಳಪತಿ 69': 'ಕೆವಿಎನ್'​​ ಕಾರ್ಯಕ್ರಮದ ಫೋಟೋಗಳು - Thalapathy 69 Pooja Ceremony

ಸೌತ್ ಸೂಪರ್​ ಸ್ಟಾರ್ ದಳಪತಿ ವಿಜಯ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ದಳಪತಿ 69'ರ ಪೂಜಾ ಕಾರ್ಯಕ್ರಮ ಇಂದು ಅದ್ಧೂರಿಯಾಗಿ ನೆರವೇರಿದೆ.

By ETV Bharat Entertainment Team

Published : 4 hours ago

Thalapathy 69 Pooja Ceremony
'ದಳಪತಿ 69' ಪೂಜಾ ಕಾರ್ಯಕ್ರಮ (ETV Bharat)

ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ದಳಪತಿ 69'. ತಾತ್ಕಾಲಿಕ ಶೀರ್ಷಿಕೆಯುಳ್ಳ ಈ ಸಿನಿಮಾಗಿಂದು ಚಾಲನೆ ಸಿಕ್ಕಿದೆ. ಚೆನ್ನೈನಲ್ಲಿ ಭವ್ಯ ಪೂಜಾ ಸಮಾರಂಭದೊಂದಿಗೆ ಸಿನಿಮಾ ಸೆಟ್ಟೇರಿತು.

'ದಳಪತಿ 69' ವಿಜಯ್ ಅವರ ಸಿನಿಮಾ ವೃತ್ತಿಜೀವನದಲ್ಲೇ ಅತ್ಯಂತ ಮಹತ್ವದ ಚಿತ್ರಗಳಲ್ಲಿ ಒಂದಾಗುವ ಭರವಸೆಯಿದೆ. ಏಕೆಂದರೆ ರಾಜಕೀಯದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವ ಮುನ್ನ ಬರುತ್ತಿರುವ ನಟನ ಚಿತ್ರವಿದು. ಅಲ್ಲದೇ ವಿಜಯ್​ ಬಣ್ಣ ಹಚ್ಚುತ್ತಿರುವ ಕೊನೆ ಸಿನಿಮಾ ಆಗಿದೆ.

'ದಳಪತಿ 69' ನಟಿ - ನಟ (ETV Bharat)

ಶುಕ್ರವಾರದ ಅದ್ಧೂರಿ ಸಮಾರಂಭಕ್ಕೆ ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿ ಸಾಕ್ಷಿಯಾಗಿದ್ದರು. ಸಿನಿಮಾದ ನಾಯಕ ನಟ ವಿಜಯ್ ಅವರ ಉಪಸ್ಥಿತಿ ಪ್ರೋಗ್ರಾಮ್​ನ ಹೈಲೆಟ್​​. ಸೆಟ್‌ಗೆ ಹೋಗುವ ಮುನ್ನ ಪ್ರೊಡಕ್ಷನ್​ ಟೀಮ್​ನ ಪ್ರಮುಖ ಸದಸ್ಯರೊಂದಿಗೆ ಒಂದು ಫಾರ್ಮಲ್​​ ಮೀಟಿಂಗ್​ ನಡೆಸಿದರು.

'ದಳಪತಿ 69' ನಿರ್ಮಾಪಕ - ನಟ (ETV Bharat)

ಚಿತ್ರತಂಡದ ಮೂಲವೊಂದು ಮಾತನಾಡಿ, "ದಳಪತಿ 69 ಪೂಜೆ ಸುಗಮವಾಗಿ ಸಾಗಿತು. ಸಮಾರಂಭ ಮುಕ್ತಾಯಗೊಂಡಿದೆ. ಈಗಾಗಲೇ ಪ್ಲ್ಯಾನ್​ ಮಾಡಿರುವಂತೆ ಚಿತ್ರೀಕರಣ ನಾಳೆ ಶುರುವಾಗಲಿದೆ. ಅಭಿಮಾನಿಗಳು ಇಂದು ಸಂಜೆಯೊಳಗೆ ಸಮಾರಂಭದ ಗ್ಲಿಂಪ್ಸ್​" ನೋಡಬಹುದೆಂದು ತಿಳಿಸಿದ್ದರು.

ಇಂದಿನ ಕಾರ್ಯಕ್ರಮದ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ. ದಳಪತಿ 69ರ ಚಿತ್ರೀಕರಣ ನಾಳೆ ಶುರುವಾಗಲಿದೆ. ಪೂಜಾ ಹೆಗ್ಡೆ ಜೊತೆಗೆ ವಿಜಯ್ ಅವರನ್ನೊಳಗೊಂಡ ಡ್ಯಾನ್ಸ್​ ಸೀನ್​ ಮೂಲಕ ಶೂಟಿಂಗ್​​ ಪ್ರಾರಂಭವಾಗಲಿದೆ. ಹಾಡಿನ ಸೀಕ್ವೆನ್ಸ್‌ಗಾಗಿ ಕೇರಳದ ಪಯ್ಯನೂರಿನಲ್ಲಿ ಬೃಹತ್ ಸೆಟ್ ನಿರ್ಮಿಸಲಾಗಿದೆ.

ಇದನ್ನೂ ಓದಿ:ಆಕಸ್ಮಿಕ ಗುಂಡೇಟು; ನಟ ಗೋವಿಂದ ಆಸ್ಪತ್ರೆಯಿಂದ ಡಿಸ್ಚಾರ್ಜ್​ - Actor Govinda Discharged

'ದಳಪತಿ 69' ಪ್ರೊಜೆಕ್ಟ್​​ ಅನ್ನು ಸೆಪ್ಟೆಂಬರ್‌ನಲ್ಲಿ ಅಧಿಕೃತವಾಗಿ ಘೋಷಿಸಲಾಯಿತು. ಹೆಚ್ಚಿನ ವಿವರಗಳು ಶೀಘ್ರದಲ್ಲೇ ಬರಲಿದೆ. ವಿಜಯ್, ರಾಜಕೀಯಕ್ಕೆ ಸಂಪೂರ್ಣವಾಗಿ ಎಂಟ್ರಿ ಕೊಡುವ ಮೊದಲು ಬರುತ್ತಿರುವ ಮತ್ತು ಅವರ ಕೊನೆಯ ಚಿತ್ರ. ಹೆಚ್.ವಿನೋತ್ ನಿರ್ದೇಶನದ ಈ ಚಿತ್ರದಲ್ಲಿ ಬಾಬಿ ಡಿಯೋಲ್, ಮಮಿತಾ ಬೈಜು, ಪ್ರಕಾಶ್ ರಾಜ್ ಮತ್ತು ಗೌತಮ್ ವಾಸುದೇವ್ ಮೆನನ್ ಪ್ರಮುಖ ಪಾತ್ರ ವಹಿಸಲಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ್ ಅವರು ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಜಗದೀಶ್ ಪಳನಿಸಾಮಿ ಮತ್ತು ಲೋಹಿತ್ ಎನ್​.​ಕೆ. ಚಿತ್ರದ ಸಹ ನಿರ್ಮಾಪಕರು.

ಇದನ್ನೂ ಓದಿ:ಪ್ರೇಕ್ಷಕರೊಂದಿಗೆ ಕುಣಿದು ಕುಪ್ಪಳಿಸಿದ ರಾಧಿಕಾ ಕುಮಾರಸ್ವಾಮಿ: ಅಘೋರಿಯಾಗಿ ಮನಗೆದ್ದ ನಟಿ - Bhairadevi

ನಾಳೆ ಶೂಟಿಂಗ್​ ಶುರುವಾಗಲಿರುವ ಹಿನ್ನೆಲೆಯಲ್ಲಿ ಮಂಗಳವಾರದಿಂದ ಕಲಾವಿದರ ಹೆಸರುಗಳು ಘೋಷಣೆಯಾದವು. ಚಿತ್ರ ನಿರ್ಮಾಪಕರು ಒಬ್ಬರಾದ ಬಳಿಕ ಒಬ್ಬರಂತೆ ನಟ ನಟಿಯರ ಹೆಸರನ್ನು ಅನೌನ್ಸ್ ಮಾಡಿವೆ. ಬಾಲಿವುಡ್​ ನಟ ಬಾಬಿ ಡಿಯೋಲ್ ಹೆಸರು ಮೊದಲು ಘೋಷಣೆಯಾಯಿತು. ನಂತರ, ಪೂಜಾ ಹೆಗ್ಡೆ ಸೇರಿದಂತೆ ಹಲವರ ಹೆಸರು ಅನೌನ್ಸ್ ಆಗಿವೆ. ನಾಳೆಯಿಂದ ಶೂಟಿಂಗ್​ ಶುರುವಾಗಲಿರುವ ಈ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

ABOUT THE AUTHOR

...view details