ಕರ್ನಾಟಕ

karnataka

ETV Bharat / entertainment

ಕಣ್ಣಪ್ಪ ಚಿತ್ರದಲ್ಲಿ 'ರುದ್ರ'ನಾಗಿ ಸೂಪರ್​ ಸ್ಟಾರ್ ಪ್ರಭಾಸ್​​​ : ಫಸ್ಟ್​ ಲುಕ್​ ರಿಲೀಸ್​​​​ - PRABHAS

ಬಹುನಿರೀಕ್ಷಿತ ಕಣ್ಣಪ್ಪ ಚಿತ್ರದಿಂದ ರೆಬೆಲ್​ ಸ್ಟಾರ್​ ಪ್ರಭಾಸ್​ ಅವರ ಮೊದಲ ನೋಟ ಅನಾವರಣಗೊಂಡಿದೆ.

Prabhas As 'Rudra'
ಕಣ್ಣಪ್ಪ ಚಿತ್ರದಲ್ಲಿ 'ರುದ್ರ'ನಾಗಿ ಪ್ರಭಾಸ್​​​ (Photo: Film Poster)

By ETV Bharat Entertainment Team

Published : Feb 3, 2025, 1:54 PM IST

'ಕಣ್ಣಪ್ಪ', ಭಾರತೀಯ ಚಿತ್ರರಂಗದ ಒಂದು ಮಹತ್ವಾಕಾಂಕ್ಷೆಯ ಚಿತ್ರವಾಗಿದ್ದು, ದಕ್ಷಿಣ ಚಿತ್ರರಂಗದ ಖ್ಯಾತ ನಟ ವಿಷ್ಣು ಮಂಚು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಬಹು ದೊಡ್ಡ ತಾರಾಗಣದೊಂದಿಗೆ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರದಲ್ಲಿ ಪ್ಯಾನ್​​ ಇಂಡಿಯಾ ಸ್ಟಾರ್ ಪ್ರಭಾಸ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಹಂಚಿಕೊಂಡಿದೆ.

ಹೌದು, ಸಲಾರ್​ ಸ್ಟಾರ್​​ ಪ್ರಭಾಸ್ ರುದ್ರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಅದರಂತೆ, ಇಂದು ಅನಾವರಣಗೊಂಡಿರುವ ಪೋಸ್ಟರ್​ ರೆಬೆಲ್​ ಸ್ಟಾರ್​​ನನ್ನು ರುದ್ರನಾಗೇ ಪರಿಚಯಿಸಿದೆ. ಪೋಸ್ಟರ್​ಗೆ, ಪರಾಕ್ರಮಿ 'ರುದ್ರ'. ರೆಬೆಲ್​ ಸ್ಟಾರ್​ ಪ್ರಭಾಸ್​ ಅವರನ್ನು ಇಂದು 'ರುದ್ರ'ನಾಗಿ ಅನಾವರಣಗೊಳಿಸಲಾಗುತ್ತಿದೆ. ಕಣ್ಣಪ್ಪ ಚಿತ್ರದಲ್ಲಿ ದೈವಿಕ ಶಕ್ತಿ, ಬುದ್ಧಿವಂತಿಕೆ ಮತ್ತು ರಕ್ಷಕನ ಶಕ್ತಿಯಾಗಿ ರುದ್ರ ಕಾಣಿಸಿಕೊಳ್ಳಲಿದ್ದಾನೆ. ಭಕ್ತಿ, ತ್ಯಾಗ ಮತ್ತು ಅಚಲ ಪ್ರೀತಿಯ ಅಸಾಧಾರಣ ಪ್ರಯಾಣದ ಪ್ರಾರಂಭ. ಈ ಏಪ್ರಿಲ್​ನಲ್ಲಿ ಬಿಗ್​ ಸ್ಕ್ರೀನ್​ ಮೇಲೆ ಈ ಮಹಾಕಾವ್ಯ ವೀಕ್ಷಿಸಿ! ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕಣ್ಣಪ್ಪ ಏಪ್ರಿಲ್​​ಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಎಂದು ತಿಳಿಸಿದ್ದಾರೆ.

ಬಹುನಿರೀಕ್ಷಿತ ಸಿನಿಮಾ ಬಿಗ್​ ಬಜೆಟ್​​, ಅತ್ಯಾಧುನಿಕ ತಂತ್ರಜ್ಞಾನದ ಸಹಾಯದೊಂದಿಗೆ ನಿರ್ಮಾಣಗೊಳ್ಳುತ್ತಿದೆ. ಈ ಪ್ರಾಜೆಕ್ಟ್​​ ಘೋಷಣೆಯಾದ ಸಂದರ್ಭ, ಪ್ರಭಾಸ್ ಮತ್ತು ನಯನತಾರಾ ಶಿವ ಪಾರ್ವತಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದ್ರೆ, ಕಾಜಲ್ ಪಾರ್ವತಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿತು. ಉಳಿದಂತೆ ಮೋಹನ್ ಲಾಲ್, ಶಿವರಾಜ್​ಕುಮಾರ್, ಆರ್.ಶರತ್ ಕುಮಾರ್, ಬ್ರಹ್ಮಾನಂದಂ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸ್ಟೀಫನ್ ದೇವಸ್ಸೆ ಮತ್ತು ಮಣಿ ಶರ್ಮಾ ಸಂಗೀತ ಸಂಯೋಜಿಸುತ್ತಿದ್ದಾರೆ.

ಇದನ್ನೂ ಓದಿ:'ನನ್ನಲ್ಲಿ ಕೆಟ್ಟ ಭಾವನೆಗಳಿಲ್ಲ, ಆದ್ರೆ ಜನರ ಯೋಚನೆ..!' ಕಿಸ್ ವಿವಾದದ ಬಗ್ಗೆ ಉದಿತ್ ನಾರಾಯಣ್ ಪ್ರತಿಕ್ರಿಯೆ

ಕಣ್ಣಪ್ಪ ಚಿತ್ರದ ಬಹುಪಾಲು ಚಿತ್ರೀಕರಣ ನ್ಯೂಜಿಲೆಂಡ್‌ನಲ್ಲಿಯೇ ನಡೆದಿದೆ. ಚೆನ್ನೈನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಚಿತ್ರತಂಡ ವಿದೇಶದಲ್ಲಿ ಶೂಟಿಂಗ್​ ನಡೆಸಿದ್ದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿತು. ಈ ಚಿತ್ರದ ಕಥೆ ಬಹಳ ಹಿಂದಿನದ್ದು. ಆ ಕಾಲದ ನೈಸರ್ಗಿಕ ಸೌಂದರ್ಯವನ್ನು ಚಿತ್ರದಲ್ಲಿ ತೋರಿಸಬೇಕಾಗಿರುವುದರಿಂದ ಚಿತ್ರವನ್ನು ನ್ಯೂಜಿಲೆಂಡ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ತಂಡ ಸ್ಪಷ್ಟಪಡಿಸಿತು. ಹೆಚ್ಚಾಗಿ ಸೋಮವಾರ, ಚಿತ್ರದ ಅಪ್ಡೇಟ್ಸ್ ಹೊರಬೀಳುತ್ತದೆ. ಪ್ರಭಾಸ್ ಅವರ ಲುಕ್ ಇಂದು ಬಹಿರಂಗಗೊಂಡಿದೆ.

ಇದನ್ನೂ ಓದಿ:ಅಯೋಧ್ಯೆಗೆ ಭೇಟಿ, ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ: ಕಾಶಿಯಲ್ಲಿ ಕನ್ನಡದ ಖ್ಯಾತ ನಿರ್ದೇಶಕ ಆರ್.ಚಂದ್ರು

ಕೆಲ ದಿನಗಳ ಹಿಂದೆ, ಕಣ್ಣಪ್ಪ ತಂಡ ಪ್ರಭಾಸ್ ಅವರ ಕಣ್ಣುಗಳನ್ನು ತೋರಿಸುವ ಮೂಲಕ ಕ್ರೇಜ್​ ಕ್ರಿಯೇಟ್​ ಮಾಡಿತ್ತು. ನೆಟ್ಟಿಗರು, ಸಿನಿಪ್ರಿಯರು, ಅಭಿಮಾನಿಗಳು ಅಪ್ಡೇಟ್​​ಗಾಗಿ ಬಹಳ ಸಮಯದಿಂದ ಕಾದಿದ್ದರು. ಇಂದು ಅನಾವರಣಗೊಂಡಿರುವ ಫಸ್ಟ್ ಲುಕ್​ಗೆ ಬಹುತೇಕ ಅದ್ಭುತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಪೋಸ್ಟರ್ ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಸಿನಿಮಾ ಮೇಲಿನ ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ.

ABOUT THE AUTHOR

...view details