ಕರ್ನಾಟಕ

karnataka

ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ತಂದ 'ಭೀಮ': 3 ದಿನಗಳ ಕಲೆಕ್ಷನ್‌ ಎಷ್ಟು? - Bheema Collection

By ETV Bharat Karnataka Team

Published : Aug 12, 2024, 4:48 PM IST

ದುನಿಯಾ ವಿಜಯ್​​ ನಟಿಸಿ, ನಿರ್ದೇಶಿಸಿರುವ ಸಿನಿಮಾ ಉತ್ತಮ ರೆಸ್ಪಾನ್ಸ್ ಸ್ವೀಕರಿಸುವುದರ ಜೊತೆ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುತ್ತಿದೆ. ಸಿನಿಮಾದ ಗಳಿಕೆ ಬಗ್ಗೆ ವಿಜಯ್ ಆಪ್ತರೊಬ್ಬರು ಮಾಹಿತಿ ನೀಡಿದ್ದಾರೆ.

Bheema poster
ಭೀಮ ಪೋಸ್ಟರ್ (Photo: Duniya vijay IG)

ಒಂದೊಳ್ಳೆ ಕಂಟೆಂಟ್ ಜೊತೆಗೆ ಮೆಸೇಜ್ ಇರುವ ಸಿನಿಮಾಗಳನ್ನು ಕನ್ನಡ ಸಿನಿಪ್ರಿಯರು ಎಂದೂ ಕೈಬಿಟ್ಟಿಲ್ಲ ಅನ್ನೋದಕ್ಕೆ ಸದ್ಯ ರಾಜ್ಯಾದ್ಯಂತ ಬಿಡುಗಡೆ ಆಗಿರುವ 'ಭೀಮ' ಸಿನಿಮಾ ಸಾಕ್ಷಿ. ಹೌದು, 2024ರ ಅರ್ಧ ವರ್ಷ ಯಾವುದೇ ಸ್ಟಾರ್ ಸಿನಿಮಾಗಳಿಲ್ಲದೇ ಸಿಂಗಲ್ ಸ್ಕ್ರೀನ್ ಥಿಯೇಟರ್ಸ್ ಮಾಲೀಕರು ಹಾಗೂ ಕಾರ್ಮಿಕರು ಬಹಳ ಸಂಕಷ್ಟದಲ್ಲಿದ್ದರು.‌ ಕೆಲವೆಡೆ ಕನ್ನಡ ಚಿತ್ರಗಳಿಲ್ಲದೇ ಸಿಂಗಲ್ ಸ್ಕ್ರೀನ್ ಥಿಯೇಟರ್ ಮಾಲೀಕರು ಮುಚ್ಚುವ ನಿರ್ಧಾರಕ್ಕೂ ಬಂದಿದ್ದರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಧೈರ್ಯ ಮಾಡಿ ಚಿತ್ರಮಂದಿರಕ್ಕೆ ಬಂದ ದುನಿಯಾ ವಿಜಯ್ ಅವರ ಭೀಮ ಚಿತ್ರ ಅಭೂತಪೂರ್ವ ಯಶ ಕಂಡಿದೆ. ವಿಜಯ್​​ ನಟಿಸಿ, ನಿರ್ದೇಶಿಸಿರುವ ಸಿನಿಮಾ ಉತ್ತಮ ರೆಸ್ಪಾನ್ಸ್ ಸ್ವೀಕರಿಸುವುದರ ಜೊತೆ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದೆ.

ಈ ಮೊದಲೇ ಹೇಳಿದಂತೆ 'ಭೀಮ' ಪಕ್ಕಾ ಮಾಸ್ ಎಂಟರ್​​ಟೈನ್ಮೆಂಟ್​ ಚಿತ್ರ. ಸಮಾಜಕ್ಕೊಂದು ಸಂದೇಶವೂ ಇದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಸಂಕಷ್ಟದಲ್ಲಿದ್ದ ಹೊತ್ತಲ್ಲಿ ಥಿಯೇಟರ್​ಗೆ ಲಗ್ಗೆ ಇಟ್ಟು, ಚಿತ್ರರಂಗ ಹಾಗೂ ಚಿತ್ರಮಂದಿರದ ಮಾಲೀಕರು, ಕಾರ್ಮಿಕರಿಗೆ ಹೊಸ ಹುರುಪು ತಂದಿದೆ. ಅದಕ್ಕೆ ಸಾಕ್ಷಿಯೆಂಬಂತೆ ಸಿಂಗಲ್ ಸ್ಕ್ರೀನ್ ಜೊತೆಗೆ ಮಲ್ಟಿಪ್ಲೆಕ್ಸ್ ಥಿಯೇಟರ್​ಗಳಲ್ಲೂ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ‌‌. ಇದಕ್ಕೆ ತಾಜಾ ಉದಾಹರಣೆ ಅಂದ್ರೆ ಬೆಂಗಳೂರಿನ ಮಾಲ್‌ವೊಂದಕ್ಕೆ ದುನಿಯಾ ವಿಜಯ್ ಭೇಟಿ ನೀಡಿ ಸಿನಿಮಾ ನೋಡಿದವರ ಅಭಿಪ್ರಾಯ ಕೇಳಿದ್ದಾರೆ. ಹೆಣ್ಣುಮಕ್ಕಳು ಕೂಡಾ ಚಿತ್ರಕ್ಕೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿತ್ರದಲ್ಲಿ ಖಡಕ್ ಡೈಲಾಗ್, ಭರ್ಜರಿ ಆ್ಯಕ್ಷನ್, ಬೈಕ್ ವಿಲಿಂಗ್ ಜೊತೆಗೆ ಸದ್ಯ ಸಮಾಜದಲ್ಲಿ ನಡೆಯುತ್ತಿರುವ ಡ್ರಗ್ಸ್, ಗಾಂಜಾ ವಿಚಾರದ ಮೇಲೂ ಬೆಳಕು ಚೆಲ್ಲಲಾಗಿದೆ‌. ಬೆಂಗಳೂರಿನಲ್ಲಿ ಇದು ಎಷ್ಟರ ಮಟ್ಟಿಗೆ ಅವರಿಸಿಕೊಂಡಿದೆ ಅನ್ನೋದನ್ನು ಸಾಕ್ಷಿ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಅನ್ನೋದಕ್ಕೆ ಸ್ವತಃ ದುನಿಯಾ ವಿಜಯ್​​ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಲೈವ್​ಗೆ ಬಂದು ಮಾಹಿತಿ ಕೊಟ್ಟಿದ್ದಾರೆ. ಇಂದಿನ ಯುವಕರು ಯುವತಿಯರು ಈ ಗಾಂಜಾ ಹಾಗೂ ಡ್ರಗ್ಸ್​ಗೆ ವ್ಯಸನಿಗಳಾಗಿದ್ದು,‌ ಇದನ್ನ ಹೇಗಾದರೂ ಮಟ್ಟ ಹಾಕಬೇಕನ್ನೋದು ದುನಿಯಾ ವಿಜಯ್ ಕಾಳಜಿ.

ಇದನ್ನೂ ಓದಿ:ಸ್ಟಾರ್ ನಟರ ಸಿನಿಮಾಗಳಿಲ್ಲದೇ ಕಾರ್ಮಿಕರು ಸಂಕಷ್ಟದಲ್ಲಿ: ಚಿತ್ರಮಂದಿರದವರು ಹೇಳಿದ್ದಿಷ್ಟು - Theaters condition

ಇನ್ನೂ ಬಾಕ್ಸ್ ಆಫೀಸ್‌ ವಿಚಾರಕ್ಕೆ ಬಂದ್ರೆ, ವಿಜಯ್ ಆಪ್ತರೊಬ್ಬರು ಹೇಳುವ ಹಾಗೆ ಮೂರು ದಿನಕ್ಕೆ 12 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ. ಇಂದಿಗೂ ಭೀಮನ ಓಟ ಮುಂದುವರೆದಿದ್ದು ಈ ವಾರಾಂತ್ಯಕ್ಕೆ 15 ರಿಂದ 18 ಕೋಟಿ ಕಲೆಕ್ಷನ್‌ ಆಗುವ ಸೂಚನೆಯಿದೆ. ಆಗಸ್ಟ್ 15ರಿಂದ 18ನೇ ತಾರೀಖಿನವರೆಗೂ ರಜೆ ಇರೋ ಕಾರಣ ಭೀಮ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮತ್ತಷ್ಟು ಗಳಿಕೆ ಮಾಡುವ ಭರವಸೆ ಇದೆ.

ಇದನ್ನೂ ಓದಿ:ಡ್ರಗ್ಸ್ ಮಾಫಿಯಾ ಮೇಲೆ ಬೆಳಕು ಚೆಲ್ಲಿದ 'ಭೀಮ': ದುನಿಯಾ ವಿಜಯ್​​ ಸಿನಿಮಾಗೆ ಪ್ರೇಕ್ಷಕರ ರಿಯಾಕ್ಷನ್​ ಹೀಗಿದೆ - ವಿಡಿಯೋ - Bheema Movie Reactions

ಚಿತ್ರದಲ್ಲಿ ವಿಜಯ್ ಜೊತೆಗೆ ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಿ ಕಾಕ್ರೋಚ್, ಕಲ್ಯಾಣಿ, ಅಶ್ವಿನಿ, ಪ್ರಿಯಾ, ಡ್ರಾಗನ್ ಮಂಜು ಸೇರಿದಂತೆ ಹಲವರು ನಟಿಸಿದ್ದಾರೆ. ಶಿವಸೇನಾ ಅವರ ಕ್ಯಾಮರಾ ಕೈಚಳಕವಿದೆ. ಚರಣ್ ರಾಜ್ ಅವರ ಸಂಗೀತ ಮತ್ತು ಮಾಸ್ತಿ ಡೈಲಾಗ್ಸ್ ಭೀಮನಿಗಿದೆ. ದೀಪು ಎಸ್ ಕುಮಾರ್ ಸಂಕಲನ ನಿರ್ವಹಿಸಿದ್ರೆ, ಚೇತನ್ ಡಿಸೋಜಾ, ವಿನೋದ್, ಗೌತಮ್ ಅವರ ಸಾಹಸ ಮತ್ತು ಧನು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದು, ತಂಡ ಉತ್ತಮ ಕಲೆಕ್ಷನ್​ನ ಖುಷಿಯಲ್ಲಿದೆ. ದುನಿಯಾ ವಿಜಯ್ ಸಲಗ ನಂತರ ಭೀಮ ಸಿನಿಮಾವನ್ನು ಗೆಲ್ಲಿಸುವುದರ ಜೊತೆಗೆ ಚಿತ್ರರಂಗಕ್ಕೆ ಹೊಸ ಚೈತನ್ಯ ತುಂಬಿದ್ದಾರೆ.

ABOUT THE AUTHOR

...view details