ಕರ್ನಾಟಕ

karnataka

ಬೆಂಗಳೂರಿನಲ್ಲಿ ಗರಿ ಗರಿ ದೋಸೆ, ಫಿಲ್ಟರ್ ಕಾಫಿ ಸವಿದು ಸಂಭ್ರಮಿಸಿದ ನಟ ಕಾರ್ತಿಕ್ ಆರ್ಯನ್

By ETV Bharat Karnataka Team

Published : Feb 25, 2024, 12:38 PM IST

ಬಾಲಿವುಡ್​ ನಟ ಕಾರ್ತಿಕ್​ ಆರ್ಯನ್ ಅವರು​​​ ಬೆಂಗಳೂರಿನಲ್ಲಿ ರುಚಿಕರ ಆಹಾರಗಳನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.

Kartik Aaryan
ನಟ ಕಾರ್ತಿಕ್​​ ಆರ್ಯನ್

ಬೆಂಗಳೂರು: ಕಾರ್ತಿಕ್​​ ಆರ್ಯನ್​​. ಬಾಲಿವುಡ್​ನ ಯಂಗ್​ ಸೂಪರ್ ಸ್ಟಾರ್. ಅತ್ಯಂತ ಹ್ಯಾಂಡ್ಸಂ ನಟರಲ್ಲಿ ಓರ್ವರಾದ ಇವರು ಚಿತ್ರರಂಗದಲ್ಲಿ ತಮ್ಮದೇ ಆದ ಬೇಡಿಕೆ ಹೊಂದಿದ್ದಾರೆ. ಪ್ರೇಕ್ಷಕರ ಮನರಂಜಿಸುವ ಮೂಲಕ ಯಶಸ್ವಿ ವೃತ್ತಿಜೀವನ ಮುನ್ನಡೆಸುತ್ತಿದ್ದಾರೆ. ಇದೀಗ ಬೆಂಗಳೂರಿಗೆ ಆಗಮಿಸಿರುವ ಇವರು ರುಚಿಕರ ಖಾದ್ಯಗಳನ್ನು ಸವಿದು ಗಮನ ಸೆಳೆದಿದ್ದಾರೆ.

ಶುಕ್ರವಾರ ಸಂಜೆ ನಗರದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ(WPL) ಉದ್ಘಾಟನಾ ಸಮಾರಂಭದಲ್ಲಿ ನಟ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ತಮ್ಮ ಹಿಟ್ ಚಿತ್ರ 'ಭೂಲ್ ಭುಲೈಯ್ಯಾ 2'ರ 'ಹರೇ ರಾಮ್' ಹಾಡು ಸೇರಿದಂತೆ ಅನೇಕ ಹಾಡುಗಳಿಗೆ ಪ್ರದರ್ಶನ ನೀಡಿದರು. ಬಾಲಿವುಡ್​ ನಟರಾದ​​ ಶಾರುಖ್ ಖಾನ್, ಶಾಹಿದ್ ಕಪೂರ್, ವರುಣ್ ಧವನ್ ಮತ್ತು ಟೈಗರ್ ಶ್ರಾಫ್ ಸೇರಿದಂತೆ ಹಲವು ತಾರೆಯರು ಕೂಡ ಭಾಗಿಯಾಗಿ ನೃತ್ಯ ಪ್ರದರ್ಶನ ನೀಡಿದರು.

ಬಳಿಕ ಶನಿವಾರ ಕಾರ್ತಿಕ್‌ ಆರ್ಯನ್ ಬೆಂಗಳೂರು ರೌಂಡ್ಸ್ ಹೊಡೆದಿದ್ದು, ಫೋಟೋಗಳನ್ನು ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಫೆಬ್ರವರಿ 24ರಂದು 'ಸತ್ಯಪ್ರೇಮ್​ ಕಿ ಕಥಾ' ಸಿನಿಮಾ ನಟರೂ ಆಗಿರುವ ಕಾರ್ತಿಕ್ ಆರ್ಯನ್ ಬೆಂಗಳೂರಿನ 'ದಿ ರಾಮೇಶ್ವರಂ ಕೆಫೆ'ಗೆ ಭೇಟಿ ಕೊಟ್ಟರು. ಈ ಸಂದರ್ಭದಲ್ಲಿ ಕಾಫಿ ಕುಡಿದು ದೋಸೆ ಸವಿದಿದ್ದಾರೆ. ಅಲ್ಲದೇ 'ಐದು ಫಿಲ್ಟರ್​ ಕಾಫಿ ಕೊಡಿ' ಎಂದು ಕನ್ನಡ ಮಾತನಾಡುವ ಪ್ರಯತ್ನವನ್ನೂ ಮಾಡಿದರು. ಈ ಒಂದು ಪೋಸ್ಟ್‌ನಲ್ಲಿ 9 ಫೋಟೋ, ವಿಡಿಯೋಗಳಿದ್ದು ಎರಡು ಹೋಟೆಲ್​ಗಳಗೆ ಭೇಟಿ ಕೊಟ್ಟಂತಿದೆ. ಇತರೆ ಫೋಟೋಗಳಲ್ಲಿ ವೆಜ್​ ಥಾಲಿ ಸೇರಿದಂತೆ ಇತರೆ ಖಾದ್ಯಗಳ ರುಚಿಯುಂಡು ಸಂಭ್ರಮಿಸಿದ್ದಾರೆ.

ಇದನ್ನೂ ಓದಿ:ಡಬ್ಲ್ಯುಪಿಎಲ್ 2024: ಶಾರುಖ್​​ ಭರ್ಜರಿ ಡ್ಯಾನ್ಸ್; 'ನಾರಿ ಶಕ್ತಿ' ಬಗ್ಗೆ ಎಸ್​ಆರ್​ಕೆ ಗುಣಗಾನ

ಈ ಪೋಸ್ಟ್ ಶೇರ್ ಮಾಡಿದ ಕಾರ್ತಿಕ್ ಆರ್ಯನ್, ಬೆಂಗಳೂರಿನಲ್ಲಿ ರುಚಿಕರ ಮತ್ತು ಪ್ರಸಿದ್ಧ ಖಾದ್ಯಗಳನ್ನು ಸವಿದ ನಂತರ ನಾನು ಫುಡ್ ಬ್ಲಾಗರ್ ಆಗಲು ಯೋಚಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ತಮ್ಮ ಸ್ನೇಹಿತರೊಂದಿಗೆ ಮೋಜು ಮಸ್ತಿ ಮಾಡಿ ಖುಷಿ ಕ್ಷಣಗಳನ್ನು ಕಳೆದಿರುವುದನ್ನು ಅವರು ಪೋಸ್ಟ್‌ ಮಾಡಿರುವ ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ:AIನ ಪರಿಣಾಮ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ: ಅಮೀರ್​ ಖಾನ್​ ಆತಂಕ

ಕಾರ್ತಿಕ್ ಆರ್ಯನ್ ಸಿನಿಮಾ ವಿಚಾರಕ್ಕೆ ಬರುವುದಾದರೆ, ಕೊನೆಯದಾಗಿ 'ಸತ್ಯಪ್ರೇಮ್​ ಕಿ ಕಥಾ' ಚಿತ್ರದಲ್ಲಿ ಕಾಣಿಸಿಕೊಂಡರು. ಕಿಯಾರಾ ಅಡ್ವಾಣಿ ಜೊತೆ ಎರಡನೇ ಬಾರಿ ಕೆಲಸ ಮಾಡಿದ್ದು, ಸಿನಿಮಾ ಯಶಸ್ವಿಯೂ ಆಗಿತ್ತು. ಇದೀಗ 'ಭೂಲ್ ಭುಲಯ್ಯಾ 3' ಸಲುವಾಗಿ ಸುದ್ದಿಯಲ್ಲಿದ್ದಾರೆ. 'ಚಂದು ಚಾಂಪಿಯನ್' ಚಿತ್ರೀಕರಣ ಪೂರ್ಣಗೊಳಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಅಲ್ಲದೇ 'ಆಶಿಕಿ 3'ನಲ್ಲಿ ಕೆಲಸ ಮಾಡಲು ಸಹ ಸಜ್ಜಾಗಿದ್ದಾರೆ.

ABOUT THE AUTHOR

...view details