ಕರ್ನಾಟಕ

karnataka

ETV Bharat / bharat

ಆಗ್ರಾ ಉತ್ಸವದಲ್ಲಿ ಯಮುನಾ ಮಹಾ ಆರತಿ ವೈಭವ; ಸಂಭ್ರಮಿಸಿದ ಭಕ್ತ ಸಾಗರ - YAMUNA MAHA AARTI

ಯಮುನಾ ನದಿಯ ತಟದಲ್ಲಿ ಪ್ರತಿನಿತ್ಯ ಸಂಜೆ ಈ ಮಹಾ ಆರತಿ ಸಾಗುತ್ತಿದ್ದು, ಭಕ್ತರು ಈ ಭವ್ಯ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

yamuna-maha-aarti-like-kashi-agra-taj-mahotsav-2025-belanganj-yamuna-banks
ಯಮುನಾ ಆರತಿ (ಈಟಿವಿ ಭಾರತ್​)

By ETV Bharat Karnataka Team

Published : Feb 21, 2025, 2:14 PM IST

ಆಗ್ರಾ, ಉತ್ತರಪ್ರದೇಶ: ಕಾಶಿಯ ಗಂಗಾ ಆರತಿ ಮಾದರಿಯಲ್ಲಿಯೇ ಇದೀಗ ಯಮುನಾಗೆ ಮಹಾ ಆರತಿ ಸಾಗಿದೆ. ಬೆಲಂಗಂಜ್​ನ ಯಮುನಾ ನದಿ ತಟದಲ್ಲಿ ಈ ಆರತಿ ಸಾಗುತ್ತಿದೆ. ಇದಕ್ಕಾಗಿ ನದಿ ತೀರದಲ್ಲಿ ನೂರಾರೂ ಜ್ಯೋತಿಗಳನ್ನು ಬೆಳಗಿಸಲಾಗಿದೆ. ಕಾಶಿಯಿಂದ ಬಂದ ಪಂಡಿತರು ಮಂತ್ರಗಳ ಘೋಷಣೆಯೊಂದಿಗೆ ಆರತಿ ಮಾಡಲಾಗಿದೆ. ಈ ಅದ್ಬುತ ಕ್ಷಣವನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ. ಆಗ್ರಾದಲ್ಲಿ ಕಾಶಿ ಮತ್ತು ಹರಿದ್ವಾರ ಮಾದರಿಯಲ್ಲಿ ಪ್ರತಿನಿತ್ಯ ಸಂಜೆ 6 ರಿಂದ 8.30ಕ್ಕೆ ಈ ಯಮುನಾ ಆರತಿ ನಡೆಯಲಿದೆ.

ವಿಶ್ವವಿಖ್ಯಾತ ತಾಜ್​ಮಹಲ್​ ನಗರವಾದ ಆಗ್ರಾದಲ್ಲಿ ಅಂತಾರಾಷ್ಟ್ರೀಯ ತಾಜ್​ ಮಹೋತ್ಸವ ಸಾಗುತ್ತಿದೆ. ನಿತ್ಯ ಸಾವಿರಾರು ಜನರು ಶಿಲ್ಪಗ್ರಾಮ್​, ಸುರ್​​ ಸದಮ್​ಗೆ ಆಗಮಿಸುತ್ತಿದ್ದಾರೆ. ಇದರ ಜೊತೆಗೆ ಬೆಲಂಗಂಜ್​ನಲ್ಲಿ ನಡೆಯುತ್ತಿರುವ ಈ ಯಮುನಾ ಆರತಿ ನೋಡಲು ಸೇರುತ್ತಿದ್ದಾರೆ.

ಯಮುನಾ ಮಹಾ ಆರತಿ (ಈಟಿವಿ ಭಾರತ್​)

ಎರಡನೇ ವರ್ಷದ ತಾಜ್​ ಮಹೋತ್ಸವ ಫೆ. 18 ರಿಂದ ಆರಂಭವಾಗಿದ್ದು, ಆಗ್ರಾ ಮೇಯರ್​​ ಹೇಮಲತಾ ದಿವಾಕರ್​ ಕುಶ್ವಹ ಯಮುನಾ ಮಹಾ ಆರತಿಯನ್ನು ವೇದ - ಮಂತ್ರಗಳ ಪಠಣೆಯೊಂದಿಗೆ ಪ್ರಾರಂಭಿಸಿದ್ದಾರೆ.

ಮಹಾ ಆರತಿ ಕಣ್ತುಂಬಿಕೊಳ್ಳುತ್ತಿರುವ ಭಕ್ತರು (ಈಟಿವಿ ಭಾರತ್​)

ಮಹಾ ಆರತಿ ಜೊತೆಗೆ ಭಜನೆ: ಈ ಕುರಿತು ಮಾಹಿತಿ ನೀಡಿದ ಮಹಂತ್​​ ಜುಗಲ್ ಕಿಶೋರ್ ಶ್ರೋತ್ರಿಯ, 2024ರಲ್ಲಿ ಮೊದಲ ಬಾರಿಗೆ ಯಮುನಾ ದಡದಲ್ಲಿ ಮಹಾ ಆರತಿಯನ್ನು ಪಾಲಿಕೆ ವತಿಯಿಂದ ಪ್ರಾರಂಭಿಸಲಾಗಿತ್ತು. ಎರಡನೇ ಬಾರಿಗೆ ಯಮುನಾ ಮಹಾ ಆರತಿಯನ್ನು ಆಯೋಜಿಸಲಾಗಿದ್ದು, ಇದು ಕಾಶಿಯಲ್ಲಿನ ಮಹಾ ಆರತಿಯನ್ನೇ ನೋಡಿದಂತೆ ಭಾಸವಾಗುತ್ತದೆ.

ಯಮುನಾ ಆರತಿ (ಈಟಿವಿ ಭಾರತ್​​)

ವಿಶೇಷ ಪಂಡಿತರು, ಪುರೋಹಿತರು ಜ್ಞಾನಿಗಳನ್ನು ಈ ಮಹಾ ಆರತಿಗಾಗಿ ಕರೆ ತರಲಾಗಿದೆ. ನಿತ್ಯ ಮಹಾ ಆರತಿ ಜೊತೆಗೆಯೇ ಭಜನ್​ ಸಂಧ್ಯಾವನ್ನು ನಡೆಸಲಾಗುತ್ತಿದೆ. ಖ್ಯಾತ ದೇಗುಲದ ಅರ್ಚಕರನ್ನು ದಿನವೂ ಯಮುನಾ ಮಹಾ ಆರತಿಗೆ ಅತಿಥಿಗಳಾಗಿ ಆಹ್ವಾನಿಸಲಾಗುತ್ತಿದೆ.

yಮುನಾ ಆರತಿ (ಈಟಿವಿ ಭಾರತ್​)

ಭಕ್ತರ ಸಂತಸ: ಇನ್ನು ಈ ಯಮುನಾ ಆರತಿ ನೋಡಿದ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಸರೋಜ್​ ಅಹುಜಾ ಎಂಬ ಭಕ್ತರು, ನಾನು ಇಲ್ಲಿಗೆ ಬರದೇ ಇರಲು ಸಾಧ್ಯವಾಗಲಿಲ್ಲ. ಪ್ರತಿನಿತ್ಯ ಸಂಜೆ 6ಕ್ಕೆ ಭಕ್ತರು ಈ ಭವ್ಯ ದೃಶ್ಯ ಕಣ್ತುಂಬಿಕೊಳ್ಳುವುದೇ ಆನಂದದ ಕ್ಷಣ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

yಮುನಾ ಆರತಿ (ಈಟಿವಿ ಭಾರತ್​)

ಇದನ್ನೂ ಓದಿ: ಮೂರು ಕಡೆ ಭೀಕರ ರಸ್ತೆ ಅಪಘಾತ: ಕುಂಭಮೇಳಕ್ಕೆ ತೆರಳಿದ್ದ ಕರ್ನಾಟಕದ ಐವರು ಸೇರಿ ಒಟ್ಟು 15 ಸಾವು!

ಇದನ್ನೂ ಓದಿ: PM ಮಹತ್ವಾಕಾಂಕ್ಷೆಯ ಅಮೃತ ಭಾರತ ಎಕ್ಸ್‌ಪ್ರೆಸ್ ಪ್ರಾಯೋಗಿಕ ಪರೀಕ್ಷೆ ಇಂದು: ಈ ರೈಲಲ್ಲಿ ಏನೇನೆಲ್ಲಾ ವ್ಯವಸ್ಥೆ ಇದೆ ಗೊತ್ತಾ?

ABOUT THE AUTHOR

...view details