ಕರ್ನಾಟಕ

karnataka

ETV Bharat / bharat

ಹವಾಮಾನ ಇಲಾಖೆಯ ಈ ಎಚ್ಚರಿಕೆಗಳ ಬಗ್ಗೆ ನಿಮಗೆ ತಿಳಿದಿದೆಯೇ?: ಏನಿವು ರೆಡ್​​​​​, ಯೆಲೋ, ಆರೇಂಜ್​​ ALERTಗಳು?

ಅಕ್ಟೋಬರ್-ಡಿಸೆಂಬರ್ ನಡುವೆ ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಚಂಡಮಾರುತಗಳು ತೀವ್ರ ಸ್ವರೂಪ ಪಡೆಯುತ್ತಿವೆ. ಹೀಗಾಗಿ ಹವಾಮಾನ ಇಲಾಖೆ ಹಳದಿ, ಕಿತ್ತಳೆ, ರೆಡ್​​ ಅಲರ್ಟ್​ ಘೋಷಣೆ ಮಾಡಿದೆ.

By ETV Bharat Karnataka Team

Published : 4 hours ago

meteorological-department-issues-yellow-orange-and-red-alerts-during-cyclones
Etv Bhಹವಾಮಾನ ಇಲಾಖೆಯ ಈ ಎಚ್ಚರಿಕೆಗಳ ಬಗ್ಗೆ ನಿಮಗೆ ತಿಳಿದಿದೆಯೇ?: ಏನಿವು ರೆಡ್​​​​​, ಯೆಲೋ, ಆರೇಂಜ್​​ ALERTಗಳು?arat (ETV Bharat)

ನೈಋತ್ಯ ಮಾನ್ಸೂನ್ ಹಿಮ್ಮೆಟ್ಟುತ್ತಿರುವಾಗ, ಈಶಾನ್ಯ ಮಾನ್ಸೂನ್ ಪ್ರಭಾವ ಹೆಚ್ಚಾಗಿ ಗೋಚರಿಸುತ್ತದೆ. ಈ ಸಮಯದಲ್ಲಿ ಸಮುದ್ರದ ಉಷ್ಣತೆ ಹೆಚ್ಚಿರುವುದರಿಂದ ಪ್ರತಿ ವರ್ಷ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಬಂಗಾಳಕೊಲ್ಲಿಯಲ್ಲಿ ಚಂಡಮಾರುತಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಕಡಿಮೆ ಒತ್ತಡಗಳು ಕ್ರಮೇಣ ವಾಯು ಪಾಕೆಟ್ಸ್ ಮತ್ತು ಚಂಡಮಾರುತಗಳಾಗಿ ಪರಿವರ್ತನೆಗೊಳ್ಳುತ್ತವೆ. ಈ ಪರಿಸ್ಥಿತಿಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಕಳೆದ ದಶಕದಲ್ಲಿ, ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ಬಂಗಾಳ ಕೊಲ್ಲಿಯಲ್ಲಿ 11 ಚಂಡಮಾರುತಗಳು ರೂಪುಗೊಂಡಿವೆ, ಅದರಲ್ಲಿ 6 ಚಂಡಮಾರುತಗಳು ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಪಾರ ಹಾನಿಯನ್ನುಂಟು ಮಾಡಿದ್ದವು.

ಅರಬ್ಬಿ ಸಮುದ್ರದಲ್ಲಿ ರೂಪುಗೊಂಡಿರುವ ತೀವ್ರ ಕಡಿಮೆ ಒತ್ತಡ ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಪರಿಚಲನೆಯಾಗಿ ಬಲಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಐಎಂಡಿ ಬಹಿರಂಗಪಡಿಸಿದೆ. ಈ ಹಿನ್ನೆಲೆಯಲ್ಲಿ ಮಳೆ ಮತ್ತು ಗಾಳಿಯ ತೀವ್ರತೆ ಆಧರಿಸಿ ಹವಾಮಾನ ಇಲಾಖೆ ಆಗಾಗ್ಗೆ ಎಚ್ಚರಿಕೆಗಳನ್ನು ರವಾನಿಸುತ್ತದೆ. ಮಳೆಯ ತೀವ್ರತೆ ಮತ್ತು ಗಾಳಿಯ ವೇಗವನ್ನು ಆಧರಿಸಿ, IMD ಹಸಿರು, ಹಳದಿ, ಕಿತ್ತಳೆ ಮತ್ತು ಕೆಂಪು ಎಚ್ಚರಿಕೆಗಳನ್ನು ನೀಡುತ್ತದೆ ಮತ್ತು ಕಾಲಕಾಲಕ್ಕೆ ಸರ್ಕಾರಗಳನ್ನು ಈ ಮೂಲಕ ಎಚ್ಚರಿಸಲಾಗುತ್ತದೆ.

ಇದನ್ನು ಓದಿ:ತೀವ್ರ ಸ್ವರೂಪ ಪಡೆಯುತ್ತಿರುವ ಚಂಡಮಾರುತಗಳು: ರಾಜ್ಯದ 11 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ಹಸಿರು ಎಚ್ಚರಿಕೆ Green Alert :24 ಗಂಟೆಗಳ ಅವಧಿಯಲ್ಲಿ ಯಾವುದೇ ಪ್ರದೇಶದಲ್ಲಿ 6.4 ಸೆಂ.ಮೀಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದ್ದರೆ ಹವಾಮಾನ ಇಲಾಖೆ ಅಧಿಕಾರಿಗಳು ಈ ಎಚ್ಚರಿಕೆಯನ್ನು ನೀಡುತ್ತಾರೆ. ಈ ಎಚ್ಚರಿಕೆಯು ಹವಾಮಾನದಲ್ಲಿ ಮುಂಬರುವ ಬದಲಾವಣೆಗಳ ಬಗ್ಗೆ ನಮಗೆ ತಿಳಿಸುತ್ತದೆ. ಆದರೆ, ಕಡಿಮೆ ಮಳೆಯಾಗುವ ಸಾಧ್ಯತೆಗಳಿರುವುದರಿಂದ ಈ ಎಚ್ಚರಿಕೆಯ ಮೂಲಕ ವಿಶೇಷ ಎಚ್ಚರಿಕೆ ನೀಡುವ ಅಗತ್ಯ ಇರುವುದಿಲ್ಲ.

ಹಳದಿ ಎಚ್ಚರಿಕೆ - Yellow Alert:ಒಂದು ಸ್ಥಳದಲ್ಲಿ 6.45 ಸೆಂ.ಮೀ ನಿಂದ 11.55 ಸೆಂ.ಮೀ ವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂಬ ಮಾಹಿತಿ ಮತ್ತು ಅಂದಾಜಿನ ಆಧಾರದ ಮೇಲೆ ಹವಾಮಾನ ಇಲಾಖೆ ಹಳದಿ ಎಚ್ಚರಿಕೆಯನ್ನು ನೀಡುತ್ತದೆ. ಈ ಎಚ್ಚರಿಕೆಯನ್ನು ನೀಡಲಾಗಿದೆ ಅಂದರೆ ಪ್ರಸ್ತುತ ಹವಾಮಾನ ಪರಿಸ್ಥಿತಿಗಳು ಬದಲಾಗುತ್ತವೆ ಎಂದೇ ಅರ್ಥ. ಸುಮಾರು 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇರುತ್ತದೆ. ಹಠಾತ್ ಪ್ರವಾಹದ ಅಪಾಯವಿರುವುದರಿಂದ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ. ಇದು ಮುಂಬರುವ ಭಾರಿ ಅಪಾಯಗಳಿಂದ ನಮ್ಮನ್ನು ರಕ್ಷಿಸುವ ಉದ್ದೇಶ ಹೊಂದಿರುತ್ತದೆ.

ಇದನ್ನು ಓದಿ:ಧಾರವಾಡದಲ್ಲಿ ನಿರಂತರ ಮಳೆಗೆ ಕೊಚ್ಚಿ ಹೋದ ಸೇತುವೆ: ಹಗ್ಗವೇ ಜನರಿಗಿಲ್ಲಿ ಆಸರೆ

ಕಿತ್ತಳೆ ಎಚ್ಚರಿಕೆ - Orange Alert:IMD (ಭಾರತೀಯ ಹವಾಮಾನ ಇಲಾಖೆ) 24 ಗಂಟೆಗಳ ಅವಧಿಯಲ್ಲಿ 11.56 cm ನಿಂದ 20.44 cm ಮಳೆಯ ಅಂದಾಜಿನೊಂದಿಗೆ ಈ ಎಚ್ಚರಿಕೆಯನ್ನು ನೀಡುತ್ತದೆ. ಈ ವೇಳೆ, ಗಾಳಿಯ ವೇಗ 40ರಿಂದ 60 ಕಿ.ಮೀ. ಪ್ರಕ್ಷುಬ್ಧ ಪರಿಸ್ಥಿತಿಗಳ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು, ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗುತ್ತದೆ ಮತ್ತು ಪ್ರವಾಹ ಪೀಡಿತ ತಗ್ಗು ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು. ಪ್ರವಾಹ ಭೀತಿ ಎದುರಾಗಿದೆ ಎಂಬ ಎಚ್ಚರಿಕೆಯ ಹಿನ್ನೆಲೆಯಲ್ಲಿ ಈ ಆರೆಂಜ್ ಅಲರ್ಟ್ ನೀಡಲಾಗುತ್ತದೆ.

ರೆಡ್ ಅಲರ್ಟ್ Red Alert:ಹವಾಮಾನ ಮತ್ತು ಮಳೆಯ ಬಗ್ಗೆ ಇದು ಕೊನೆಯ ಹಾಗೂ ಅಂತಿಮ ಎಚ್ಚರಿಕೆ ಎಂದು ಹೇಳಬಹುದು. 24 ಗಂಟೆಗಳ ಅವಧಿಯಲ್ಲಿ 20.45 ಸೆಂ.ಮೀಗಿಂತ ಹೆಚ್ಚು ಮಳೆಯಾದರೆ, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿ ಸರ್ಕಾರಗಳಿಗೆ ಎಚ್ಚರಿಕೆ ನೀಡುತ್ತದೆ. ಈ ಅಪಾಯದ ಎಚ್ಚರಿಕೆಯು ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ನೀಡಲಾಗುತ್ತದೆ.

ಈ ವೇಳೆ, ವಿದ್ಯುತ್ ಕಂಬಗಳು ಕುಸಿದು ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ನಾಗರಿಕರ ಜೀವಕ್ಕೆ ಅಪಾಯವಿದೆ ಎಂಬ ಮೌಲ್ಯಮಾಪನಕ್ಕೆ ಪ್ರತಿಕ್ರಿಯೆಯಾಗಿ IMD ಈ ರೀತಿಯ ಎಚ್ಚರಿಕೆಗಳನ್ನು ನೀಡುತ್ತದೆ. ಇದರೊಂದಿಗೆ ವಿಪತ್ತು ನಿರ್ವಹಣಾ ಪಡೆಗಳು, ಐಎಂಡಿ ತಂಡಗಳು, ರಕ್ಷಣಾ ಸಿಬ್ಬಂದಿ ಮತ್ತು ಸ್ಥಳೀಯ ಕಂದಾಯ, ಪುರಸಭೆ ಮತ್ತು ಪೊಲೀಸ್ ಇಲಾಖೆಗಳು ಜಾಗರೂಕರಾಗಿರುತ್ತವೆ. ಸುಮಾರು ಐದು ದಿನಗಳ ಕಾಲ ರೆಡ್ ಅಲರ್ಟ್ ಜಾರಿಯಲ್ಲಿರುತ್ತದೆ.

ಇವುಗಳನ್ನು ಓದಿ:ತಮಿಳುನಾಡಿನಲ್ಲಿ ಭಾರಿ ಮಳೆ ಮುನ್ಸೂಚನೆ: ಐಟಿ ಉದ್ಯೋಗಿಗಳಿಗೆ ಅ.18ರವರೆಗೆ ವರ್ಕ್‌ ಫ್ರಂ ಹೋಮ್‌ಗೆ ಸೂಚನೆ

ಭಾರತದಲ್ಲಿ ಇದೇ ಮೊದಲ ಬಾರಿಗೆ ನದಿ ಡಾಲ್ಫಿನ್​ಗಳ ಗಣತಿ: ಫಲಿತಾಂಶ ಶೀಘ್ರ ಪ್ರಕಟ

ಇಂದು ಅಂತಾರಾಷ್ಟ್ರೀಯ ವಿಕೋಪ ಅಪಾಯ ತಗ್ಗಿಸುವಿಕೆ ದಿನ: ಇದರ ಮಹತ್ವ ಏನ್​ ಗೊತ್ತಾ?

ABOUT THE AUTHOR

...view details