ಗಾಂಧಿನಗರ, ಗುಜರಾತ್: ಮುಂಬೈ- ಅಹಮದಾಬಾದ್ ಬುಲೆಟ್ ಟ್ರೈನ್ ಯೋಜನೆಗಾಗಿ ಗುಜರಾತ್ನ ಸೂರತ್ನಲ್ಲಿ 100 ಮೀಟರ್ ಉದ್ದದ ಉಕ್ಕಿನ ಸೇತುವೆ ನಿರ್ಮಿಸಲಾಗಿದೆ. ಇದನ್ನು ನ್ಯಾಷನಲ್ ಹೈ- ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಡೆಟ್ (ಎನ್ಎಚ್ಎಸ್ಆರ್ಸಿಎಲ್) ಅಭಿವೃದ್ಧಿ ಪಡಿಸಿದೆ. ಈ ಸೇತುವೆಯಲ್ಲಿ ನಾಲ್ಕು ರೈಲ್ವೆ ಟ್ರ್ಯಾಕ್ ಇದ್ದು, ಎರಡು ಪಶ್ಚಿಮ ರೈಲ್ವೆಗೆ ಮೀಸಲಾಗಿದ್ದರೆ, ಮತ್ತೆರಡು ಕಿಮ್ ಮತ್ತು ಸಯಾನ್ ನಡುವೆ ಸರಕು ಸಾಗಣೆ ಭಾರತೀಯ ಕಾರಿಡಾರ್ ಕಾರ್ಪೊರೇಷನ್ (ಡಿಎಫ್ಸಿಸಿಐಎಲ್)ಗೆ ಮೀಸಲಾಗಿದೆ.
100 ಮೀಟರ್ ಉದ್ದ ಹಾಗೂ 60 ಮೀಟರ್ ಅಗಲದ ಸೇತುವೆ ಇದಾಗಿದ್ದು, ಡಬಲ್ ಟ್ರ್ಯಾಕ್ ಸ್ಟ್ಯಾಂಡರ್ಡ್ ಗೇಜ್ ರೈಲು ವ್ಯವಸ್ಥೆಯನ್ನು ಸರಾಗಗೊಳಿಸಲು ವಿನ್ಯಾಸಗೊಳಿಸಲಾಗಿದೆ. 1,432 ಮೆಟ್ರಿಕ್ ಟನ್ ತೂಕದ 100 ಮೀಟರ್ ಉದ್ದದ ಈ ಸೇತುವೆಯನ್ನು ಜನವರಿ 28 ಮತ್ತು ಫೆಬ್ರವರಿ 5 ರ ನಡುವೆ ಚಾಲನೆ ನೀಡಲಾಯಿತು.
ಸೇತುವೆ ಪಕ್ಕದಲ್ಲೇ ನೀರಾವರಿಗಾಗಿ ಕಾಲುವೆ:60 ಮೀಟರ್ ಅಗಲದ ಈ ರೈಲ್ವೆ ಸೇತುವೆ ಪಕ್ಕದಲ್ಲಿ ನೀರಾವರಿಗಾಗಿ ಕಾಲುವೆ ಪ್ರದೇಶವನ್ನು ಅಭಿವೃದ್ಧಿಗೊಳಿಸಲಾಗಿದೆ. ಈ ಯೋಜನೆಯು ನಾಲ್ಕು ಪ್ರಮುಖ ರೈಲ್ವೆ ಹಳಿಗಳು ಮತ್ತು ನೀರಾವರಿ ಕಾಲುವೆಗಳನ್ನು ದಾಟಲಿದ್ದು, ಮುಂದಿನ ದಿನದಲ್ಲಿ ಹೈ ಸ್ಪೀಡ್ ರೈಲು ಸೇವೆಯ ಸರಾಗತೆ ಮಾರ್ಗದ ಭರವಸೆ ನೀಡುತ್ತದೆ.
100 ಮೀಟರ್ ಉದ್ದದ ಈ ಉಕ್ಕಿನ ಸೇತುವೆ ನಿರ್ಮಾಣಕ್ಕೆ 525 ಮೆಟ್ರಿಕ್ ಟನ್ ತೂಕದ 84 ಮೀಟರ್ ಉದ್ದದ ಲಾಂಚಿಂಗ್ ನೋಸ್ ಅನ್ನು ಬಳಕೆ ಮಾಡಲಾಗಿದೆ. 14.3 ಮೀಟರ್ ಅಗಲದ ಸೇತುವೆಯನ್ನು ಗುಜರಾತ್ನ ಭುಜ್ನಲ್ಲಿ ಆರ್ಡಿಎಸ್ಒ ಅನುಮೋದಿತ ಕಾರ್ಯಾಗಾರದಲ್ಲಿ ಜೋಡಿಸಲಾಗಿದೆ. ಇದನ್ನು ಸಾರಿಗೆ ಮೂಲಕ ಸಾಗಿಸಿ, ಇಲ್ಲಿ ಅಳವಡಿಸಲಾಗಿದೆ.
ನೂರು ವರ್ಷ ಬಾಳಿಕೆ ಬರುವಂತೆ ವಿನ್ಯಾಸ:ಎರಡು ಸೆಮಿ- ಆಟೋಮೆಟಿಕ್ ಜಾಕ್ ಬಳಕೆ ಮಾಡಿಕೊಂಡು 50 ಮಿ.ಮೀ ಮ್ಯಾಕ್-ಲೊಯ್ ಬಾರ್ಗಳನ್ನು ಅದರ ಸ್ಥಾನಕ್ಕೆ ಎಳೆಯಲಾಗಿದೆ. ಇವು ಒಂದೊಂದು 250 ಟನ್ ಸಾಮರ್ಥ್ಯದ್ದಾಗಿವೆ. ಇದರ ಎತ್ತರ 12 ಮೀಟರ್ ಇದೆ. ಇವುಗಳನ್ನು 60,000 ಟೊರ್ ಶೀರ್ ಟೈಪ್ ಹೈ ಸ್ಟ್ರೇಂಥ್ ಬೋಲ್ಟ್ನಿಂದ ಬಿಗಿ ಮಾಡಲಾಗಿದ್ದು, ಇದು 100 ವರ್ಷಗಳವರೆಗೆ ಬಾಳಿಕೆ ಬರುವಂತೆ ವಿನ್ಯಾಸ ಮಾಡಲಾಗಿದೆ.
ಜೊತೆಗೆ, ಸೇತುವೆಯನ್ನು ಸಿ5 ವ್ಯವಸ್ಥೆ ಜೊತೆ ಪೈಂಟ್ ಮಾಡಲಾಗಿದ್ದು, ಇದು ಎಲಾಸ್ಟೊಮೆರಿಕ್ ಬೇರಿಂಗ್ಗಳ ಬಾಳಿಕೆ ಹೊಂದಿದೆ. ಇದರ ಸುರಕ್ಷತೆ ಮತ್ತು ನಿಖರತೆಗಾಗಿ ಪಶ್ಚಿಮ ರೈಲ್ವೆ ಮತ್ತು ಡಿಎಫ್ಸಿಸಿಐಎಲ್ ಟ್ರಾಕ್ ಅಲ್ಲಿ ತಾತ್ಕಾಲಿಕ ಟ್ರಾಫಿಕ್ ಬ್ಲಾಕ್ ಅಳವಡಿಸಲಾಗಿದೆ. ಈ ಬ್ಲಾಕ್ಸ್ಗಳನ್ನು ನಿಯಮಿತ ರೈಲು ಮತ್ತು ಸರಕು ಸೇವೆ ರೈಲು ಸಂಚಾರದಲ್ಲಿ ತೊಡಕಾಗದಂತೆ ಸಾರಾಗ ಚಲನೆಗೆ ಸೇತುವೆಯಲ್ಲಿ ಜಪಾನ್ ತಂತ್ರಜ್ಞರ ಸಹಾಯದಿಂದ ಹಂತಹಂತವಾಗಿ ಅಳವಡಿಸಲಾಗಿದೆ. ಬುಲೆಟ್ ಟ್ರೈನ್ ಯೋಜನೆಯಂತಹ ವೇಗದ ರೈಲು ನಿರ್ಮಾಣಕ್ಕೆ ಭಾರತದ ದೇಶಿಯ ಸಂಪನ್ಮೂಲವನ್ನು ಹೆಚ್ಚಾಗಿ ಬಳಕೆ ಮಾಡಿಕೊಂಡಿರುವುದು ಗಮನಾರ್ಹವಾಗಿದೆ.
ಸೂರತ್ನ ಈ ಸೇತುವೆ ಬುಲೆಟ್ ಟ್ರೈನ್ ಕಾರಿಡಾರ್ನ ಗುಜರಾತ್ ವಿಭಾಗದ ಜೊತೆಗೆ ನಿರ್ಮಾಣವಾಗಿರುವ ಆರನೇ ಉಕ್ಕಿನ ಯೋಜನೆ ಇದಾಗಿದೆ. ಒಟ್ಟು 17 ಉಕ್ಕಿನ ಸೇತುವೆಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದ್ದು, ಇದರಲ್ಲಿ 5 ಸೇತುವೆಗಳ ಕಾಮಗಾರಿಗಳು ಈಗಾಗಲೇ ಮುಕ್ತಾಯಗೊಂಡಿವೆ. ಸೂರತ್ನಲ್ಲಿ 70 ಮೀಟರ್ ಉದ್ದದ ಸೇತುವೆ, ಆನಂದ್ನಲ್ಲಿ 100 ಮೀಟರ್ ಉದ್ದದ ಸೇತುವೆ. ವಡೋದರದಲ್ಲಿ 230 ಉದ್ದದ ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ಸಿಲ್ವಸ್ಸಾ (ದಾದ್ರ ಮತ್ತು ನಗರ್ ಹವೇಲಿ)ಯಲ್ಲಿ 100 ಮೀಟರ್ ಉದ್ದದ ಸೇತುವೆ ಹಾಗೂ ವಡೋದರದಲ್ಲಿ 60 ಮೀಟರ್ ಉದ್ದದ ಸೇತುವೆ ನಿರ್ಮಿಸಲಾಗಿದೆ. (ಐಎಎನ್ಎಸ್)
ಇದನ್ನೂ ಓದಿ: ಮಹಾಮಂಡಲೇಶ್ವರರಾಗಿ ಸಾಧ್ವಿ ಸತ್ಯಪ್ರಿಯಾರಿಗೆ ಪಟ್ಟಾಭೀಷೇಕ.. ಇವರ ಕರ್ತವ್ಯಗಳೇನು? ಆಯ್ಕೆ ನಡೆಯುವುದು ಹೇಗೆ?
ಇದನ್ನೂ ಓದಿ: ಸಣ್ಣ ಮತ್ತು ಗೇಣಿದಾರ ರೈತರಿಗೆ ಸಿಗ್ತಿಲ್ಲ ಕಿಸಾನ್ ಕ್ರೆಡಿಟ್ ಕಾರ್ಡ್, ಬೆಳೆವಿಮೆ ಲಾಭ.. ಇದಕ್ಕೆ ಬೇಕಿದೆ ಸ್ಪಷ್ಟ ನೀತಿ