ವಿಕಾರಾಬಾದ್ (ತೆಲಂಗಾಣ):ವಿಕಾರಾಬಾದ್ ಜಿಲ್ಲೆಯ ನಾವಂದಗಿ ಗ್ರಾಮದವರಾದ ಎಲ್ಲಪ್ಪ ಅವರಿಗೆ ಪತ್ನಿ ವಿಮಲಮ್ಮ, ಇಬ್ಬರು ಪುತ್ರರಿದ್ದಾರೆ. ಎಲ್ಲಪ್ಪ ಬಶೀರ್ಬಾದ್ನಲ್ಲಿ ಗೋಪಾಲಕನಾಗಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಅಲ್ಲಿ ಕೆಲಸ ಬಿಟ್ಟು ತಾಂಡೂರಿನಲ್ಲಿ ಹಮಾಲಿ ಕೆಲಸಕ್ಕೆ ಸೇರಿದ್ದರು. ಅಲ್ಲಿ ವ್ಯಕ್ತಿಯೊಬ್ಬರ ಪರಿಚಯವಾಗಿತ್ತು. ಆತ ಎಲ್ಲಪ್ಪನಿಗೆ ಗೆಳೆಯನಾಗಿದ್ದ.
ಕೆಲಸ ಮುಗಿಸಿ ಹೊರಗೆ ಹೋಗಿದ್ದ ಇಬ್ಬರೂ ಶನಿವಾರ ಸಂಜೆ ಕಂಠಪೂರ್ತಿ ಮದ್ಯ ಸೇವಿಸಿದ್ದರು. ಎಲ್ಲಪ್ಪ ಸಂಪೂರ್ಣವಾಗಿ ಕುಡಿದು ಫುಟ್ಪಾತ್ ಮೇಲೆ ಅಮಲಿನಲ್ಲಿ ಮಲಗಿದ್ದ. ಎಲ್ಲಪ್ಪನ ಜೊತೆಗೆ ಪಾನಮತ್ತನಾಗಿದ್ದ ವ್ಯಕ್ತಿ ಹಣ ಹಾಗೂ ಮೊಬೈಲ್ ಕದ್ದು ಪರಾರಿಯಾಗಿದ್ದ. ಅಂದು ರಾತ್ರಿ ವಿಕಾರಾಬಾದ್ ರೈಲು ನಿಲ್ದಾಣದಲ್ಲಿ ರೈಲು ಹಳಿ ದಾಟುತ್ತಿದ್ದಾಗ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ.
ರೈಲ್ವೇ ಸಿಬ್ಬಂದಿ ಅಪಘಾತದ ಬಳಿಕ ಸಾಕ್ಷಿಗಾಗಿ ಹುಡುಕಾಟ ನಡೆಸಿದಾಗ ಮೊಬೈಲ್ ಫೋನ್ ಪತ್ತೆಯಾಗಿದೆ. ಕಾಲ್ ಡೇಟಾ ಆಧರಿಸಿ ಮೃತ ವ್ಯಕ್ತಿ ಎಲ್ಲಪ್ಪ ಎಂದು ಪೊಲೀಸರು ಭಾವಿಸಿ ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಮೃತದೇಹ ಗುರುತು ಹಿಡಿಯಲಾಗದ ಸ್ಥಿತಿಯಲ್ಲಿದ್ದ ಕಾರಣ ಕುಟುಂಬಸ್ಥರು ಅಂತ್ಯಕ್ರಿಯೆಗಾಗಿ ನಾವಂದಗಿಗೆ ತಂದಿದ್ದರು.