ಕರ್ನಾಟಕ

karnataka

ETV Bharat / bharat

ರಾಷ್ಟ್ರ ರಾಜಧಾನಿಯಲ್ಲಿ ಗೂಳಿ ಗುದ್ದಿದೇಟಿಗೆ ವ್ಯಕ್ತಿ ಬಲಿ - ಗೂಳಿ ಗುದ್ದಿದೇಟಿಗೆ ವ್ಯಕ್ತಿ ಬಲಿ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗೂಳಿ ದಾಳಿಗೆ ವ್ಯಕ್ತಿಯೋರ್ವ ಬಲಿಯಾದ ಘಟನೆ ನಡೆದಿದೆ.

Man killed in bull  bull attack  new Delhi  ಗೂಳಿ ಗುದ್ದಿದೇಟಿಗೆ ವ್ಯಕ್ತಿ ಬಲಿ  ರಾಷ್ಟ್ರ ರಾಜಧಾನಿ ನವದೆಹಲಿ
ರಾಷ್ಟ್ರ ರಾಜಧಾನಿಯಲ್ಲಿ ಗೂಳಿ ಗುದ್ದಿದೇಟಿಗೆ ವ್ಯಕ್ತಿ ಬಲಿ

By PTI

Published : Feb 23, 2024, 7:01 PM IST

ನವದೆಹಲಿ:ದಕ್ಷಿಣ ದೆಹಲಿಯ ಟಿಗ್ರಿ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಗೂಳಿಯೊಂದು ದಾಳಿ ನಡೆಸಿದ್ದು, 42 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ವ್ಯಕ್ತಿಯನ್ನು ಖಾನ್‌ಪುರದ ನಿವಾಸಿ ಸುಭಾಷ್ ಕುಮಾರ್ ಝಾ ಎಂದು ಗುರುತಿಸಲಾಗಿದೆ.

ಪೊಲೀಸರ ಹೇಳಿಕೆ ಪ್ರಕಾರ:ದೇವ್ಲಿ ಮೋರ್‌ನ ಜಸ್ಪಾಲ್ ಮಾರ್ಟ್ ಬಳಿ ಬೆಳಗ್ಗೆ 11.45 ರ ಸುಮಾರಿಗೆ ಸುಭಾಷ್​ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬಿಡಾಡಿ ಗೂಳಿಯೊಂದು ಸುಭಾಷ್​ ಮೇಲೆ ದಾಳಿ ನಡೆಸಿದೆ. ದಾಳಿ ಹೊಡೆತಕ್ಕೆ ಅವರು ಕೆಳಗೆ ಬಿದ್ದಿದ್ದರು. ಆದ್ರೂ ಸಹ ಗೂಳಿ ತನ್ನ ದಾಳಿಯನ್ನು ಮುಂದುವರಿಸುತ್ತಲೇ ಇತ್ತು. ಇನ್ನು ಇದನ್ನು ನೋಡಿದ ಸ್ಥಳೀಯರು ಕೋಲುಗಳಿಂದ ಗೂಳಿಯನ್ನು ಓಡಿಸಲು ಮತ್ತು ಸುಭಾಷ್​ ಅನ್ನು ರಕ್ಷಿಸಲು ಮುಂದಾದರು. ಆದ್ರೂ ಸಹಿತ ಗೂಳಿ ಸುಭಾಷ್​ ಮೇಲೆ ದಾಳಿ ಮಾಡುತ್ತಲೇ ಇತ್ತು. ಸ್ವಲ್ಪ ಸಮಯದ ಬಳಿಕ ಸ್ಥಳೀಯರು ಗೂಳಿಯನ್ನು ಓಡಿಸಲು ಯಶಸ್ವಿಯಾದರು.

ಗಂಭೀರವಾಗಿ ಗಾಯಗೊಂಡಿದ್ದ ಸುಭಾಷ್​ ಅವರನ್ನು ಸ್ಥಳೀಯರು ಕೂಡಲೇ ಬಾತ್ರಾ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಸುಭಾಷ್​ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಮಹಾನಗರ ಪಾಲಿಕೆಗೆ ಮಾಹಿತಿ ರವಾನಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲದೆ ಈ ಪ್ರದೇಶದಲ್ಲಿ ಬಿಡಾಡಿ ದನಗಳ ಸಮಸ್ಯೆ ಸಾಮಾನ್ಯವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನು ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ.

ಓದಿ:ಶಿಕಾರಿಪುರ: ಹೋರಿ ಬೆದರಿಸುವ ಸ್ಪರ್ಧೆ, ಹೋರಿ ತಿವಿದು ಯುವಕ ಸಾವು

ABOUT THE AUTHOR

...view details