ETV Bharat / bharat

ಮೊಬೈಲ್ ಟಾರ್ಚ್​ ಬೆಳಕಿನಲ್ಲಿ ಗಾಯಗೊಂಡಿದ್ದ ಬಾಲಕನ ತಲೆಗೆ ಹೊಲಿಗೆ ಹಾಕಿದ ಸರ್ಕಾರಿ ಆಸ್ಪತ್ರೆ ವೈದ್ಯರು - STITCHES UNDER MOBILE TORCH LIGHT

ಹೊಲಿಗೆ ಹಾಕುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ ಘಟನೆ ವಿವಾದಾತ್ಮಕ ತಿರುವು ಪಡೆದುಕೊಂಡಿದೆ.

Doctor stitches boy's head under mobile torch light
ಮೊಬೈಲ್ ಟಾರ್ಚ್​ ಬೆಳಕಿನಲ್ಲಿ ಬಾಲಕನ ತಲೆಗೆ ಹೊಲಿಗೆ ಹಾಕಿದ ವೈದ್ಯರು (ETV Bharat)
author img

By ETV Bharat Karnataka Team

Published : Feb 2, 2025, 7:56 PM IST

ಕೊಟ್ಟಾಯಂ (ಕೇರಳ): ಗಾಯಗೊಂಡಿದ್ದ ಬಾಲಕನೊಬ್ಬನ ತಲೆಗೆ ವೈದ್ಯರು ಮೊಬೈಲ್​ ಟಾರ್ಚ್​ ಬೆಳಕಿನಲ್ಲಿ ಹೊಲಿಗೆ ಹಾಕಿದ ಘಟನೆ ಕೊಟ್ಟಾಯಂ ಜಿಲ್ಲೆಯ ವೈಕಂ ತಾಲೂಕು ಆಸ್ಪತ್ರೆಯಲ್ಲಿ ಶನಿವಾರ ಸಂಜೆ ನಡೆದಿದೆ.

11 ವರ್ಷದ ಬಾಲಕ ಎಸ್​ ದೇವತೀರ್ಥ ಎಂಬ ಬಾಲಕ ಬಿದ್ದ ಪರಿಣಾಮ ಆತನ ತಲೆಗೆ ಗಂಭೀರ ಗಾಯವಾಗಿತ್ತು. ಬಾಲಕನನ್ನು ಪರೀಕ್ಷಿಸಿದ ವೈದ್ಯರು ಗಾಯಕ್ಕೆ ಹೊಲಿಗೆ ಹಾಕಬೇಕು ಎಂದು ಸೂಚಿಸಿದ್ದಾರೆ. ಆದರೆ ಅದೇ ಸಮಯಕ್ಕೆ ಆಸ್ಪತ್ರೆಯಲ್ಲಿ ವಿದ್ಯುತ್​ ಕಡಿತಗೊಂಡಿದ್ದು, ಮೊಬೈಲ್​ ಟಾರ್ಚ್​ ಬೆಳಕಿನಲ್ಲಿ ವೈದ್ಯರು ಬಾಲಕನ ಗಾಯಕ್ಕೆ ಹೊಲಿಗೆ ಹಾಕಿದ್ದಾರೆ.

ವೈದ್ಯರು ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಸ್ಟಿಚ್​ ಹಾಕುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ, ಘಟನೆ ವಿವಾದಾತ್ಮಕ ತಿರುವು ಪಡೆದುಕೊಂಡಿತು.

ಹೊಲಿಗೆ ಕೋಣೆಯಲ್ಲಿ ವಿದ್ಯುತ್​ ಏಕೆ ಇಲ್ಲ? ಆಸ್ಪತ್ರೆಯಲ್ಲಿ ಜನರೇಟರ್​ ಇದೆಯೇ ಎಂದು ಪೋಷಕರು ಕೇಳಿದಾಗ, ನಿರಂತರವಾಗಿ ಜನರೇಟರ್​ ಹಾಕಲು ಡೀಸೆಲ್​ ಬೇಕು ಎಂದು ಕರ್ತವ್ಯದಲ್ಲಿದ್ದ ಅಟೆಂಡರ್​ ಉತ್ತರಿಸುವುದು ವಿಡಿಯೋದಲ್ಲಿ ಇದೆ.

ಆಸ್ಪತ್ರೆಯಲ್ಲಿ ಬೆಳಕಿನ ಕೊರತೆಯಿಂದ ಗಾಯವನ್ನು ಸರಿಯಾಗಿ ಸ್ವಚ್ಛಗೊಳಿಸಲು ಸಹ ಸಾಧ್ಯವಾಗಿಲ್ಲ. ಮಾತ್ರವಲ್ಲ, ಚಿಕಿತ್ಸೆ ನೀಡುವುದು ಕೂಡ ಕಷ್ಟಕರವಾಗಿತ್ತು ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ.

ಇದರ ಮಧ್ಯೆ, ಘಟನೆಯ ಕುರಿತು ಆರ್​ಎಂಒ ಅವರು ತನಿಖೆ ನಡೆಸಿ, ವರದಿ ಬಿಡುಗಡೆ ಮಾಡಿದ್ದಾರೆ. ಹೊಸ ವಿದ್ಯುತ್​ ಕಂಬ ಅಳವಡಿಸುವಾಗ ಜನರೇಟರ್​ಗೆ ಸಂಪರ್ಕಗೊಂಡಿದ್ದ ಸ್ವಿಚ್​ ಓವರ್​ ಬಟನ್​ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದೆ ಎಂದು ಹೇಳಿದ್ದಾರೆ. ಆರ್​ಎಂಒ ವರದಿಯನ್ನು ಡಿಎಂಒಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಸಂಧ್ಯಾ ಥಿಯೇಟರ್ ಕಾಲ್ತುಳಿತ : 56 ದಿನಗಳ ಚಿಕಿತ್ಸೆ ಬಳಿಕವೂ ಗುಣಮುಖವಾಗದ ಬಾಲಕ

ಕೊಟ್ಟಾಯಂ (ಕೇರಳ): ಗಾಯಗೊಂಡಿದ್ದ ಬಾಲಕನೊಬ್ಬನ ತಲೆಗೆ ವೈದ್ಯರು ಮೊಬೈಲ್​ ಟಾರ್ಚ್​ ಬೆಳಕಿನಲ್ಲಿ ಹೊಲಿಗೆ ಹಾಕಿದ ಘಟನೆ ಕೊಟ್ಟಾಯಂ ಜಿಲ್ಲೆಯ ವೈಕಂ ತಾಲೂಕು ಆಸ್ಪತ್ರೆಯಲ್ಲಿ ಶನಿವಾರ ಸಂಜೆ ನಡೆದಿದೆ.

11 ವರ್ಷದ ಬಾಲಕ ಎಸ್​ ದೇವತೀರ್ಥ ಎಂಬ ಬಾಲಕ ಬಿದ್ದ ಪರಿಣಾಮ ಆತನ ತಲೆಗೆ ಗಂಭೀರ ಗಾಯವಾಗಿತ್ತು. ಬಾಲಕನನ್ನು ಪರೀಕ್ಷಿಸಿದ ವೈದ್ಯರು ಗಾಯಕ್ಕೆ ಹೊಲಿಗೆ ಹಾಕಬೇಕು ಎಂದು ಸೂಚಿಸಿದ್ದಾರೆ. ಆದರೆ ಅದೇ ಸಮಯಕ್ಕೆ ಆಸ್ಪತ್ರೆಯಲ್ಲಿ ವಿದ್ಯುತ್​ ಕಡಿತಗೊಂಡಿದ್ದು, ಮೊಬೈಲ್​ ಟಾರ್ಚ್​ ಬೆಳಕಿನಲ್ಲಿ ವೈದ್ಯರು ಬಾಲಕನ ಗಾಯಕ್ಕೆ ಹೊಲಿಗೆ ಹಾಕಿದ್ದಾರೆ.

ವೈದ್ಯರು ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಸ್ಟಿಚ್​ ಹಾಕುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ, ಘಟನೆ ವಿವಾದಾತ್ಮಕ ತಿರುವು ಪಡೆದುಕೊಂಡಿತು.

ಹೊಲಿಗೆ ಕೋಣೆಯಲ್ಲಿ ವಿದ್ಯುತ್​ ಏಕೆ ಇಲ್ಲ? ಆಸ್ಪತ್ರೆಯಲ್ಲಿ ಜನರೇಟರ್​ ಇದೆಯೇ ಎಂದು ಪೋಷಕರು ಕೇಳಿದಾಗ, ನಿರಂತರವಾಗಿ ಜನರೇಟರ್​ ಹಾಕಲು ಡೀಸೆಲ್​ ಬೇಕು ಎಂದು ಕರ್ತವ್ಯದಲ್ಲಿದ್ದ ಅಟೆಂಡರ್​ ಉತ್ತರಿಸುವುದು ವಿಡಿಯೋದಲ್ಲಿ ಇದೆ.

ಆಸ್ಪತ್ರೆಯಲ್ಲಿ ಬೆಳಕಿನ ಕೊರತೆಯಿಂದ ಗಾಯವನ್ನು ಸರಿಯಾಗಿ ಸ್ವಚ್ಛಗೊಳಿಸಲು ಸಹ ಸಾಧ್ಯವಾಗಿಲ್ಲ. ಮಾತ್ರವಲ್ಲ, ಚಿಕಿತ್ಸೆ ನೀಡುವುದು ಕೂಡ ಕಷ್ಟಕರವಾಗಿತ್ತು ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ.

ಇದರ ಮಧ್ಯೆ, ಘಟನೆಯ ಕುರಿತು ಆರ್​ಎಂಒ ಅವರು ತನಿಖೆ ನಡೆಸಿ, ವರದಿ ಬಿಡುಗಡೆ ಮಾಡಿದ್ದಾರೆ. ಹೊಸ ವಿದ್ಯುತ್​ ಕಂಬ ಅಳವಡಿಸುವಾಗ ಜನರೇಟರ್​ಗೆ ಸಂಪರ್ಕಗೊಂಡಿದ್ದ ಸ್ವಿಚ್​ ಓವರ್​ ಬಟನ್​ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದೆ ಎಂದು ಹೇಳಿದ್ದಾರೆ. ಆರ್​ಎಂಒ ವರದಿಯನ್ನು ಡಿಎಂಒಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಸಂಧ್ಯಾ ಥಿಯೇಟರ್ ಕಾಲ್ತುಳಿತ : 56 ದಿನಗಳ ಚಿಕಿತ್ಸೆ ಬಳಿಕವೂ ಗುಣಮುಖವಾಗದ ಬಾಲಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.