ಕರ್ನಾಟಕ

karnataka

ಪೊಲೀಸರೆದುರೇ ಬಿಜೆಪಿ ಯುವ ನಾಯಕನ ಮೇಲೆ ಗುಂಡು ಹಾರಿಸಿದ ನಿವೃತ್ತ ಯೋಧ - BJP Youth Leader Shot

By ETV Bharat Karnataka Team

Published : Jul 19, 2024, 11:13 AM IST

ಗುಂಡಿನ ದಾಳಿಯಿಂದ ಗಾಯಗೊಂಡ ಬಿಜೆಪಿ ಯುವ ನಾಯಕ ಪ್ರಾಣಾಪಾಯದಿಂದ ಪಾರಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

Madhya Pradesh BJP Youth Leader Shot By Retired Army Man
ಸಾಂದರ್ಭಿಕ ಚಿತ್ರ (Getty Images)

ಉಜ್ಜೈನಿ: ನಿವೃತ್ತ ಯೋಧನೊಬ್ಬ ಪೊಲೀಸರ ಕಣ್ಣೆದುರಲ್ಲೇ ಮಧ್ಯಪ್ರದೇಶದ ಬಿಜೆಪಿ ಯುವ ನಾಯಕನ ಮೇಲೆ ಗುಂಡು ಹಾರಿಸಿದ ಘಟನೆ ನಡೆದಿದೆ. ಪ್ರಕಾಶ್​ ಯಾದವ್​ ಎಂಬವರು ಗಾಯಗೊಂಡಿದ್ದು, ಎಸ್.​ಪಿ.ಭಡೋರಿಯಾ ದಾಳಿ ನಡೆಸಿದ ಆರೋಪಿ. ಶುಕ್ರವಾರ ಮಧ್ಯರಾತ್ರಿ ಹಮುಖೇಡಿ ಎಂಬಲ್ಲಿ ಘಟನೆ ನಡೆದಿದೆ.

ಪ್ರಕಾಶ್ ಯಾದವ್ ಮತ್ತು ಭಡೋರಿಯಾ ನಡುವಿನ ಹಣಕಾಸಿನ ಮನಸ್ತಾಪದ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ಪೊಲೀಸರು ಯಾದವ್​ ಮನೆಗೆ ಬಂದಿದ್ದರು. ಇದಾದ ಕೆಲವೇ ಹೊತ್ತಲ್ಲಿ ಭಡೋರಿಯಾ ತಮ್ಮ ಲೈಸೆನ್ಸ್​ ಪಿಸ್ತೂಲ್​ನಿಂದ ಪೊಲೀಸರೆದುರೇ ದಾಳಿ ನಡೆಸಿದ್ದಾನೆ.

ಗುಂಡು ಯಾದವ್​ ಅವರ ಬಲಭಾಗದ ಎದೆಗೆ ತಗುಲಿದ್ದು ತಕ್ಷಣ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಪ್ರಾಣಾಪಾಯದಿಂದ ಪಾರಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಶರ್ಮಾ ಮಾಹಿತಿ ನೀಡಿದ್ದಾರೆ.

ಭಡೋರಿಯಾ ಸಹೋದರನೂ ಪ್ರಕರಣದಲ್ಲಿ ಸಹ ಆರೋಪಿಯಾಗಿದ್ದು, ಆತನನ್ನೂ ಬಂಧಿಸಲಾಗಿದೆ. ನಾಪತ್ತೆಯಾಗಿರುವ ಭಡೋರಿಯಾ ಬಂಧನಕ್ಕೆ ಪೊಲೀಸರು ವಿಶೇಷ ತಂಡ ರಚಿಸಲಾಗಿದೆ ಎಂದು ವರದಿ ತಿಳಿಸಿದೆ. (ಎಎನ್​ಐ)

ಇದನ್ನೂ ಓದಿ: ಪಿಸ್ತೂಲ್​ನಿಂದ ಹಾರಿದ ಗುಂಡು; ಸಬ್​ಇನ್ಸ್​ಪೆಕ್ಟರ್​ಗೆ ಗಾಯ, ಹೆಡ್​ಕಾನ್ಸ್​​​ಟೇಬಲ್​​ ಮೃತ

ABOUT THE AUTHOR

...view details