ಕರ್ನಾಟಕ

karnataka

ಜ್ಞಾನವಾಪಿ ಮಸೀದಿ ವಿವಾದ: ಎಎಸ್​ಐ ಸರ್ವೇ ವರದಿ ಬಹಿರಂಗಕ್ಕೆ ವಾರಣಾಸಿ ಕೋರ್ಟ್​ ಸೂಚನೆ

By ETV Bharat Karnataka Team

Published : Jan 24, 2024, 6:34 PM IST

ಜ್ಞಾನವಾಪಿ ಮಸೀದಿ ವಿವಾದ ಕುರಿತು ಎಎಸ್​ಐ ನಡೆಸಿದ ಸರ್ವೇ ವರದಿಯನ್ನು ಬಹಿರಂಗ ಮಾಡಲು ವಾರಣಾಸಿ ಕೋರ್ಟ್​ ಸೂಚಿಸಿದೆ.

ಜ್ಞಾನವಾಪಿ ಮಸೀದಿ ವಿವಾದ
ಜ್ಞಾನವಾಪಿ ಮಸೀದಿ ವಿವಾದ

ವಾರಣಾಸಿ (ಉತ್ತರ ಪ್ರದೇಶ) :ಮಸೀದಿ ಅಥವಾ ಮಂದಿರವೇ ಎಂಬ ಜಿಜ್ಞಾಸೆ ಸೃಷ್ಟಿಸಿರುವ ಜ್ಞಾನವಾಪಿ ಸ್ಥಳದ ಸರ್ವೇ ವರದಿಯನ್ನು ಇಂದು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು. ಜೊತೆಗೆ ಅದರ ಪ್ರತಿಯನ್ನು ಹಿಂದು ಮತ್ತು ಮುಸ್ಲಿಂ ಪಕ್ಷಗಾರರಿಗೆ ನೀಡಿ ಎಂದು ವಾರಣಾಸಿ ಜಿಲ್ಲಾ ನ್ಯಾಯಾಲಯ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಬುಧವಾರ ಸೂಚಿಸಿದೆ.

ಪ್ರಕರಣದ ಕುರಿತು ಇಂದು ನಡೆದ ವಿಚಾರಣೆಯಲ್ಲಿ ಎರಡೂ ಕಡೆಯ ವಾದ ಆಲಿಸಿದ ಕೋರ್ಟ್​, ಎಎಸ್​ಐ ನಡೆಸಿದ ಸರ್ವೇ ಬಗ್ಗೆ ಮಾಹಿತಿ ಬಹಿರಂಗವಾಗಬೇಕಿದೆ. ಹಾಗಾಗಿ ಅದನ್ನು ಜನರ ತಿಳಿವಳಿಕೆಗೆ ಮುಕ್ತಗೊಳಿಸಬೇಕು. ಇದರೊಂದಿಗೆ ವ್ಯಾಜ್ಯವನ್ನು ನಡೆಸುತ್ತಿರುವ ಹಿಂದು ಮತ್ತು ಮುಸ್ಲಿಂ ಪಕ್ಷಗಾರರಿಗೆ ಅದರ ಹಾರ್ಡ್​ ಕಾಪಿಯನ್ನು ನೀಡಬೇಕು ಎಂದು ಹೇಳಿತು.

ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್, ನ್ಯಾಯಾಲಯವು ಎರಡೂ ಕಡೆಯ ವಾದವನ್ನು ಆಲಿಸಿದ್ದು, ಎಎಸ್‌ಐ ನಡೆಸಿದ ಸರ್ವೇ ವರದಿಯ ಹಾರ್ಡ್ ಕಾಪಿಯನ್ನು ಎರಡೂ ಕಡೆಯವರಿಗೆ ನೀಡಲು ಸೂಚಿಸಿದೆ. ಇದಕ್ಕೆ ಎಎಸ್‌ಐ ಕೂಡ ಒಪ್ಪಿದೆ. ಆದರೆ, ಅದನ್ನು ಇಮೇಲ್​ ಮೂಲಕ ನೀಡಲು ನಿರಾಕರಿಸಿದೆ. ಬಳಿಕ ವರದಿಯ ಹಾರ್ಡ್ ಕಾಪಿಯನ್ನು ಪಡೆಯಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ ಎಂದರು.

ಎಎಸ್‌ಐ ವರದಿಯ ದೃಢೀಕೃತ ಪ್ರತಿಯನ್ನು ಹಿಂದು ಮತ್ತು ಮುಸ್ಲಿಂ ಪಕ್ಷಗಾರರು ಪಡೆಯುವಂತೆ ಒಪ್ಪಂದಕ್ಕೆ ಬರಲಾಗಿದೆ. ನ್ಯಾಯಾಲಯವು ಆದೇಶವನ್ನು ಜಾರಿಗೊಳಿಸಿದ ತಕ್ಷಣ, ನಮ್ಮ ಕಾನೂನು ತಂಡವು ಪ್ರಮಾಣೀಕೃತ ಪ್ರತಿಗಾಗಿ ಅರ್ಜಿ ಸಲ್ಲಿಸುತ್ತದೆ ಎಂದು ತಿಳಿಸಿದರು.

ನೀರಿನ ಕೊಳ ಸ್ವಚ್ಛತೆಗೆ ಒಪ್ಪಿದ್ದ ಸುಪ್ರೀಂ:ಇದಕ್ಕೂ ಮೊದಲು ನಿರ್ಬಂಧಿತ ಪ್ರದೇಶದಲ್ಲಿರುವ ಶಿವಲಿಂಗವಿರುವ ನೀರಿನ ತೊಟ್ಟಿಯನ್ನು ಸ್ವಚ್ಛಗೊಳಿಸಲು ಸುಪ್ರೀಂಕೋರ್ಟ್​ ಅವಕಾಶ ನೀಡಿತ್ತು. ಹಿಂದು ಮಹಿಳೆಯರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ಅಂಗೀರಿಸಿತ್ತು.

ಜ್ಞಾನವಾಪಿ ಮಸೀದಿಯೊಳಗಿನ ಆವರಣವನ್ನು ಸದ್ಯಕ್ಕೆ ನಿರ್ಬಂಧಿಸಲಾಗಿದೆ. ಇದರಿಂದ ಕಸ, ಕಡ್ಡಿ ಬಿದ್ದು ಪ್ರದೇಶ ಹಾಳು ಬಿದ್ದಿದೆ. ಹಲವು ತಿಂಗಳಿನಿಂದ ಈ ಪ್ರದೇಶದಲ್ಲಿ ಜನಸಂಚಾರವನ್ನು ನಿಷೇಧಿಸಿದ್ದರಿಂದ ನೀರಿನ ತೊಟ್ಟಿ ಕಸ ತುಂಬಿಕೊಂಡಿದೆ. ಇದರಲ್ಲಿರುವ ಶಿವಲಿಂಗಕ್ಕೆ ಅಪಮಾನವಾಗಿದೆ. ಹೀಗಾಗಿ ಸೀಲ್​ ಮಾಡಲಾದ ಪ್ರದೇಶವನ್ನು ಸ್ವಚ್ಛ ಮಾಡಲು ಅವಕಾಶ ನೀಡಬೇಕು ಎಂದು ಕೋರಿ ಹಿಂದು ಮಹಿಳೆಯರು 2023 ರ ಡಿಸೆಂಬರ್​ನಲ್ಲಿ ಅರ್ಜಿ ಸಲ್ಲಿಸಿದ್ದರು.

ಇದರ ವಿಚಾರಣೆ ನಡೆಸಿದ್ದ ಕೋರ್ಟ್​, ವಾರಣಾಸಿ ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸ್ವಚ್ಛತಾ ಪ್ರಕ್ರಿಯೆ ನಡೆಸಬಹುದು ಎಂದು ಹೇಳಿತ್ತು. ಇದಕ್ಕೆ ಮುಸ್ಲಿಂ ಪಕ್ಷಗಾರರು ಕೂಡ ಒಪ್ಪಿಗೆ ಸೂಚಿಸಿದ್ದರು. ಮಸೀದಿಯಲ್ಲಿ ಶಿವಲಿಂಗವಿದೆ. ಇದು ಕಾಶಿ ವಿಶ್ವನಾಥನಿಗೆ ಸೇರಿದ ಜಾಗ ಎಂಬ ವಾದದ ಬಳಿಕ 2022ರ ಮೇ 16 ರಂದು ವಾರಣಾಸಿಯ ಜಿಲ್ಲಾ ಕೋರ್ಟ್​, ಜ್ಞಾನವಾಪಿಯಲ್ಲಿನ ನೀರಿನ ತೊಟ್ಟಿ, ಅದರ ಸುತ್ತಮುತ್ತಲಿನ ಪ್ರದೇಶದ ಪ್ರವೇಶವನ್ನು ನಿರ್ಬಂಧಿಸಿದೆ.

ಇದನ್ನೂ ಓದಿ:ಮುಸ್ಲಿಮರು ಶಾಹಿ ಈದ್ಗಾ, ಜ್ಞಾನವಾಪಿಯನ್ನು ಹಿಂದುಗಳಿಗೆ ಹಸ್ತಾಂತರಿಸಲಿ: ಪುರಾತತ್ವಶಾಸ್ತ್ರಜ್ಞ ಮೊಹಮದ್​

ABOUT THE AUTHOR

...view details