ಕರ್ನಾಟಕ

karnataka

ETV Bharat / bharat

ಹೆಡ್​ ಕಾನ್ಸ್​ಟೇಬಲ್‌ ಪತ್ನಿ, ಮಗಳ ಭೀಕರ ಹತ್ಯೆ ಪ್ರಕರಣ: ಬುಲ್ಡೋಜರ್ ಹರಿಸಿ ಆರೋಪಿಯ ಮನೆ ಧ್ವಂಸ

ಜೋಡಿ ಕೊಲೆ ಪ್ರಕರಣದ ಆರೋಪಿಯ ಮನೆಯನ್ನು ಛತ್ತೀಸ್‌ಗಢದಲ್ಲಿ ಅಧಿಕಾರಿಗಳು ಬಲ್ಡೋಡರ್ ಹರಿಸಿ ಧ್ವಂಸಗೊಳಿಸಿದ್ದಾರೆ.

bulldozer-runs-on-kuldeep-sahu-house-accused-of-surajpur-double-murder
ಜೋಡಿ ಕೊಲೆ ಆರೋಪಿಯ ಮನೆ ಧ್ವಂಸಗೊಳಿಸುತ್ತಿರುವುದು. (ETV Bharat)

By ETV Bharat Karnataka Team

Published : 5 hours ago

ಸುರಾಜ್​ಪುರ್​(ಛತ್ತೀಸ್‌ಗಢ):ಪೊಲೀಸ್ಹೆಡ್​ ಕಾನ್ಸ್​ಟೇಬಲ್‌ವೊಬ್ಬರ ಪತ್ನಿ ಮತ್ತು ಮಗುವನ್ನು ಭೀಕರವಾಗಿ ಹತ್ಯೆಗೈದ ಪ್ರಕರಣದ ಪ್ರಮುಖ ಆರೋಪಿ ಅಕ್ರಮವಾಗಿ ಕಟ್ಟಿದ್ದ ಮನೆಯನ್ನು ಛತ್ತೀಸ್​ಗಢದ ಸೂರಜ್​ಪುರ್​ ಜಿಲ್ಲಾಡಳಿತ ಬುಲ್ಡೋಬರ್ ಹರಿಸಿ ನೆಲಸಮಗೊಳಿಸಿತು. ಆರೋಪಿ ಕುಲ್ದೀಪ್​ ಸಾಹು ಎಂಬಾತನಿಗೆ ಸೇರಿದ ಮನೆಯನ್ನು ಧ್ವಂಸಗೊಳಿಸಲಾಗಿದೆ.

ಸೋಮವಾರ ಬೆಳಗ್ಗೆ ಸುರಾಜ್​ಪುರ್‌ ಹಳೆಯ ಬಸ್​​ ನಿಲ್ದಾಣದ ಸಮೀಪದಲ್ಲಿದ್ದ ಮನೆಯನ್ನು ಸ್ಥಳೀಯ ನಗರಸಭೆ ಅಧಿಕಾರಿಗಳು ಪೊಲೀಸರ ಉಪಸ್ಥಿತಿಯಲ್ಲಿ ಉರುಳಿಸಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಮನೆ ಧ್ವಂಸಗೊಳಿಸುವ ಪ್ರಕ್ರಿಯೆಗೂ ಮುನ್ನ ಸೂರಜ್​ಪುರ್​​ ಮುನ್ಸಿಪಲ್​ ಆಡಳಿತ ಆರೋಪಿಯ ಮನೆ ಮುಂದೆ 'ಅಕ್ರಮ ಕಟ್ಟಡ' ಎಂಬ ನೋಟಿಸ್​ ಅಂಟಿಸಿತ್ತು.

ಈ ಕುರಿತು ಮಾತನಾಡಿರುವ ಸೂರಜ್​ಪುರ್​ ತಹಶೀಲ್ದಾರ್​ ಸಮೀರ್​ ಶರ್ಮಾ, "ಸಾಹು ಮನೆ ಸೇರಿದಂತೆ ಮೂರು ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಾಣ ಮಾಡಲಾಗಿದ್ದು, ಜಿಲ್ಲಾಡಳಿತ ಧ್ವಂಸಗೊಳಿಸಿದೆ" ಎಂದು ತಿಳಿಸಿದರು.

ಭೀಕರ ಕೊಲೆ ಪ್ರಕರಣ: ಅಕ್ಟೋಬರ್​ 13ರಂದು ಕುಲ್ದೀಪ್​ ಸಾಹು ತನ್ನ ಸಹಚರನೊಂದಿಗೆ ಸೇರಿಕೊಂಡು ಹೆಡ್​ ಕಾನ್ಸ್​​ಟೇಬಲ್​ ತಲಿಬ್​ ಶೇಖ್​ ಎಂಬವರ ಪತ್ನಿ ಮತ್ತು 9 ವರ್ಷದ ಮಗಳನ್ನು ಭೀಕರವಾಗಿ ಕೊಲೆ ಮಾಡಿದ್ದ.

ಪೊಲೀಸ್​ ಮೂಲಗಳ ಪ್ರಕಾರ, ಕ್ಷುಲ್ಲಕ ವಿಚಾರದಲ್ಲಿ ಹೆಡ್​ ಕಾನ್ಸ್​ಟೇಬಲ್​ ಜೊತೆ ವಾಗ್ವಾದ ನಡೆದ ಹಿನ್ನೆಲೆಯಲ್ಲಿ ಆತನನ್ನು ಕೊಲೆ ಮಾಡುವ ಜಿದ್ದನ್ನು ಸಾಹು ಹೊಂದಿದ್ದ. ಆದರೆ, ಆತನ ಯೋಜನೆ ಕೈಗೂಡಿರಲಿಲ್ಲ. ಹೀಗಾಗಿ, ಮನೆಯಲ್ಲಿದ್ದ ಆತನ ಪತ್ನಿ ಮಗುವನ್ನು ನಿರ್ದಯವಾಗಿ ಕೊಂದು ಹಾಕಿದ್ದ.

ಈ ಘಟನೆಯ ವಿರುದ್ಧ ಭಾರಿ ಪ್ರತಿಭಟನೆಗಳು ನಡೆದಿದ್ದವು. ಅಕ್ಟೋಬರ್​ 21ರಂದು ಸರ್ಕಾರ ಎಸ್​ಪಿಯನ್ನು ವರ್ಗಾವಣೆ ಮಾಡಿತ್ತು.

ಇದನ್ನೂ ಓದಿ: ಆ ಮೂರು ದೇಶಗಳಿಂದ 'ಡಿಜಿಟಲ್​​ ಅರೆಸ್ಟ್​' ವಂಚನೆ: ₹120 ಕೋಟಿ ಕಳೆದುಕೊಂಡ ಭಾರತೀಯರು

ABOUT THE AUTHOR

...view details