ಕರ್ನಾಟಕ

karnataka

ETV Bharat / bharat

ದೆಹಲಿ ಚುನಾವಣಾ ಫಲಿತಾಂಶ: ಆರಂಭಿಕ ಹಂತದಲ್ಲಿ ಶಹದಾರ ಮತ್ತು ವಿಶ್ವಾಸ್​ ನಗರದಲ್ಲಿ ಬಿಜೆಪಿ ಮುನ್ನಡೆ - DELH ELECTION 2025

ದೆಹಲಿ ಚುನಾವಣೆಯ ಆರಂಭಿಕ ಟ್ರೆಂಡ್​ನಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಮತ ಏಣಿಕೆಯತ್ತ ಎಲ್ಲರ ದೃಷ್ಟಿ ನೆಟ್ಟಿದೆ.

Delhi election results: Early trends show BJP leading on Shahdara and Vishwas
ದೆಹಲಿ ಚುನಾವಣಾ ಫಲಿತಾಂಶ: ಆರಂಭಿಕ ಹಂತದಲ್ಲಿ ಶಹದಾರ ಮತ್ತು ವಿಶ್ವಾಸ್​ ನಗರದಲ್ಲಿ ಬಿಜೆಪಿ ಮುನ್ನಡೆ (ಸಂಗ್ರಹ ಚಿತ್ರ - ANI)

By ETV Bharat Karnataka Team

Published : Feb 8, 2025, 10:13 AM IST

ನವದೆಹಲಿ:ದೆಹಲಿ ವಿಧಾನಸಭ ಚುನಾವಣಾ ಮತ ಎಣಿಕೆ ಇಂದು ನಡೆಯುತ್ತಿದ್ದು, ಆರಂಭಿಕ ಟ್ರೆಂಡ್​ನಲ್ಲಿ ಬಿಜೆಪಿ ಎರಡು ಸ್ಥಾನದಲ್ಲಿ ಮುನ್ನೆಡೆ ಕಾಯ್ದುಕೊಂಡಿದೆ. ವಿಶ್ವಾಸ್​ ನಗರ್​ನ ಬಿಜೆಪಿ ಅಭ್ಯರ್ಥಿ ಓಂ ಪ್ರಕಾಶ್​ ಶರ್ಮಾ 1741 ಮತಗಳಿಂದ ಮುನ್ನಡೆ ಸಾಧಿಸಿದ್ದು, ಶಹದಾರ​ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಂಜಯ್​ ಗೋಯಲ್ ಕೂಡ ಸಣ್ಣ ಅಂತರದಲ್ಲಿ ಅಂದರೆ ಕೇವಲ 506 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಮತ ಏಣಿಕೆ ಹಿನ್ನಲೆ ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ನಡೆಸಲಾಗಿದ್ದು, ಬುಧವಾರ ಫೆಬ್ರವರಿ 5ರಂದು ನಡೆದ ದೆಹಲಿ ವಿಧಾನಸಭಾ ಚುನಾವಣಾ ಮತದಾನದಲ್ಲಿ ಒಟ್ಟು ಶೇ 60.54ರಷ್ಟು ಮತದಾನ ನಡೆದಿತ್ತು.

ಈಗಾಗಲೇ ಸತತ ಎರಡು ಅವಧಿಯಿಂದ ದೆಹಲಿಯಲ್ಲಿ ಸರ್ಕಾರ ನಡೆಸಿರುವ ಎಎಪಿ ಮೂರನೇ ಅವಧಿಗೂ ಸರ್ಕಾರ ರಚಿಸುವ ಭರವಸೆಯಲ್ಲಿದ್ದರೆ, ಇತ್ತ ಬಿಜೆಪಿ ಕೂಡ ಎರಡು ದಶಕದ ಬಳಿಕ ಮತ್ತೆ ಗದ್ದುಗೆ ಏರಲು ಎಲ್ಲಾ ಪ್ರಯತ್ನ ನಡೆಸಿದೆ.

ಸಂದೀಪ್​ ದೀಕ್ಷಿತ್​​ ಹೇಳಿದ್ದಿಷ್ಟು:ಮತದಾನ ಆರಂಭಕ್ಕೆ ಮುನ್ನ ಮಾತನಾಡಿರುವ ದೆಹಲಿ ಕಾಂಗ್ರೆಸ್​ ಅಭ್ಯರ್ಥಿ ಸಂದೀಪ್​ ದೀಕ್ಷಿತ್​​, ಮತದಾನೋತ್ತರದ ಬಳಿಕ ಟ್ರೆಂಡ್​ ಗಮನಿಸಿ ಆಮ್​ ಆದ್ಮಿ ಪಕ್ಷದ ಜೊತೆಗೆ ಮೈತ್ರಿ ನಡೆಸುವ ಕುರಿತು ಯಾವುದೇ ಸುಳಿವಿಲ್ಲ. ಇದು ಹೈ ಕಮಾಂಡ್​ಗೆ ಬಿಟ್ಟ ನಿರ್ಧಾರ. ಮೊದಲಿಗೆ ಮತ ಏಣಿಕೆ ಮುಗಿದು ಫಲಿತಾಂಶ ಬರಲಿ ಎಂದರು.

ಬುಧವಾರ ಮತದಾನ ಅಂತ್ಯಗೊಂಡ ಬಳಿಕ ಹೊರಬಿತ್ತ ಚುನಾವಣೋತ್ತರ ಸಮೀಕ್ಷೆಯಲ್ಲಿ ಎಎಪಿಗೆ ಬಿಜೆಪಿ ಸವಾಲು ಒಡ್ಡಲಿದೆ ಎಂದು ತಿಳಿಸಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಎಎಪಿ ನಾಯಕರು ಚುನಾವಣೋತ್ತರ ಸಮೀಕ್ಷೆಗಳು ನಮ್ಮ ಪ್ರದರ್ಶನವನ್ನು ಕಡಿಮೆ ಅಂದಾಜಿಸಿದೆ. ನಾವು ಮತ್ತೆ ಅಧಿಕಾರಕ್ಕೆ ಮರಳುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಪ್ರಚಾರದ ವೇಳೆ ಏನೆಲ್ಲ ನಡೆದಿತ್ತು ಮಾತಿನ ಸಮರ:ಬಿಜೆಪಿ ಪರ ಪ್ರಚಾರ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಕೇಜ್ರಿವಾಲ್​ ಯಮುನಾ ನದಿ ವಿಷಕಾರಿ ಹೇಳಿಕೆ ಹಿಡಿದು ವಾಗ್ದಾಳಿ ನಡೆಸಿದ್ದರು. ಅಲ್ಲದೇ ಎಎಪಿ ವಿಪತ್ತಿನ ಪಕ್ಷ ಎಂದು ಉಲ್ಲೇಖಿಸಿದ ಅವರು ಕೇಜ್ರಿವಾಲ್ ಅವರನ್ನು ಶೀಶ್​ ಮಹಲ್​ ಕುರಿತು ಟೀಕಿಸಿದ್ದರು.

ಈ ನಡುವೆ ಎಎಪಿ ತಮ್ಮ ಅಧಿಕಾರ ಅವಧಿಯಲ್ಲಿ ನಡೆಸಿದ ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಕುರಿತು ಉಲ್ಲೇಖಿಸಿದ್ದು, ಬಿಜೆಪಿ ಒಂದು ವೇಳೆ ಅಧಿಕಾರಕ್ಕೆ ಬಂದರೆ, ಉಚಿತ ಶಿಕ್ಷಣ ಬಂದ್​ ಮಾಡಲಾಗುವುದು ಎಂದಿದ್ದರು.

ಕಾಂಗ್ರೆಸ್​ ಸಂಸದ, ಲೋಕಸಭಾ ವಿಪಕ್ಷ ನಾಯಕ ರಾಹುಲ್​ ಗಾಂಧಿ ಕೂಡ ತಮ್ಮ ಚುನಾವಣಾ ಸಮಾವೇಶದಲ್ಲಿ, ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್​ ಮತ್ತು ಹಿರಿಯ ಎಎಪಿ ನಾಯಕ ಮನೀಶ್​​ ಸಿಸೋಡಿಯಾ ಅವರ ವಿರುದ್ಧ ಹರಿಹಾಯ್ದುದ್ದರು.

ದೆಹಲಿ ಸಿಎಂ ಅತಿಶಿ ಬಿಜೆಪಿ ಅಭ್ಯರ್ಥಿ ರಮೇಶ್​ ಬಿಧುರಿ ಮತ್ತು ಕಾಂಗ್ರೆಸ್​ ನಾಯಕಿ ಅಲ್ಕಾ ಲಾಂಬಾ ವಿರುದ್ಧ ಸೆಣಸುತ್ತಿದ್ದು, ಮೂರು ಪಕ್ಷಗಳು ಹರಿತ ವಾಗ್ದಾಳಿ ನಡೆಸುವ ಮೂಲಕ ಮತದಾರರ ಗಮನ ಸೆಳೆದಿದ್ದರು.

ಇದನ್ನೂ ಓದಿ: ಬಿಜೆಪಿಗೆ ಬಹುಮತ ಬಂದರೆ ಸಿಎಂ ಯಾರು?: ರೇಸ್‌ನಲ್ಲಿ ಪರ್ವೇಶ್ ವರ್ಮಾ, ವಿಜೇಂದರ್ ಗುಪ್ತಾ, ದುಷ್ಯಂತ್ ಗೌತಮ್

ಇದನ್ನೂ ಓದಿ: ದೆಹಲಿ ಚುನಾವಣೆ ಫಲಿತಾಂಶ: ಆಪ್​ ನಾಯಕರಿಗೆ ಸೋಲಿನ ಭೀತಿ:​ ನಿಜವಾಗುತ್ತಾ ಎಕ್ಸಿಟ್​ ಪೋಲ್​ ಸಮೀಕ್ಷಾ ರಿಸಲ್ಟ್

ABOUT THE AUTHOR

...view details