ಕರ್ನಾಟಕ

karnataka

ಭಾರತ ಸರ್ಕಾರ, ಅಜಿತ್ ದೋವಲ್ ವಿರುದ್ಧ USನಲ್ಲಿ ಮೊಕದ್ದಮೆ: ಆಧಾರರಹಿತ ಆರೋಪ ಎಂದು ತಳ್ಳಿ ಹಾಕಿದ ಇಂಡಿಯಾ - Lawsuit against INDIA Ajit Doval

By ETV Bharat Karnataka Team

Published : 10 hours ago

ಖಲಿಸ್ತಾನಿ ಪರ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್, ಅಮೆರಿಕದ ನ್ಯಾಯಾಲಯದಲ್ಲಿ ಭಾರತ ಸರ್ಕಾರದ ವಿರುದ್ಧ ಸಲ್ಲಿಸಿರುವ ಸಿವಿಲ್ ಮೊಕದ್ದಮೆ ಬಗ್ಗೆ ಭಾರತ ಪ್ರತಿಕ್ರಿಯೆ ನೀಡಿದೆ. ಹತ್ಯೆ ಪ್ರಯತ್ನದ ಬಗ್ಗೆ ಭಾರತದ ದೃಷ್ಟಿಕೋನವನ್ನು ಬದಲಾಯಿಸುವುದಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ, ಪನ್ನುನ್​ ಮಾಡಿರುವ ಆರೋಪ 'ಸಂಪೂರ್ಣವಾಗಿ ಅನಧಿಕೃತ ಮತ್ತು ಆಧಾರರಹಿತ ಆರೋಪವಾಗಿದೆ ಎಂದು ತಳ್ಳಿ ಹಾಕಿದ್ದಾರೆ.

Completely Unwarranted And Unsubstantiated Imputations
ಭಾರತ ಸರ್ಕಾರ, ಅಜಿತ್ ದೋವಲ್ ವಿರುದ್ಧ USನಲ್ಲಿ ಮೊಕದ್ದಮೆ: ಆಧಾರರಹಿತ ಆರೋಪ ಎಂದು ತಳ್ಳಿ ಹಾಕಿದ ಇಂಡಿಯಾ (ETV Bharat)

ನವದೆಹಲಿ:ಅಮೆರಿಕದ ಕೋರ್ಟ್​ನಲ್ಲಿ ಸಲ್ಲಿಸಲಾಗಿರುವ ಸಿವಿಲ್​ ಮೊಕದ್ದಮೆ ಬಗ್ಗೆ ಭಾರತ ಸರ್ಕಾರ ಪ್ರತಿಕ್ರಿಯೆ ನೀಡಿದೆ. "ಸಂಪೂರ್ಣವಾಗಿ ಅನಗತ್ಯ ಮತ್ತು ಆಧಾರರಹಿತ ಆರೋಪ" ಎಂದು ತಳ್ಳಿ ಹಾಕಿದೆ. ಆರೋಪಿಸಿ ಹತ್ಯೆ ಯತ್ನದ ಕುರಿತು ಅಮೆರಿಕದಲ್ಲಿ ಭಾರತ ಸರ್ಕಾರದ ವಿರುದ್ಧ ಸಲ್ಲಿಸಲಾದ ಸಿವಿಲ್ ಮೊಕದ್ದಮೆ ಬಗ್ಗೆ ಇದೊಂದು ನಿರಾಧಾರ ಆರೋಪ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಳ್ಳಿ ಹಾಕಿದೆ.

ಎಲ್ಲ ಆರೋಪಗಳು ನಿರಾದಾರ ಎಂದ ವಿದೇಶಾಂಗ ಇಲಾಖೆ: ಈ ವಾರಾಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿ ನೀಡಲಿದ್ದಾರೆ. ಈ ಬಗ್ಗೆ ವಿಶೇಷ ಬ್ರೀಫಿಂಗ್ ಮಾಡಿದ ವೇಳೆ, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮಾತನಾಡಿ, ಪನ್ನುನ್​ ಆರೋಪಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.

ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಬೈಡನ್​ ನಡುವಿನ ದ್ವಿಪಕ್ಷೀಯ ಮಾತುಕತೆಯ ಸಮಯದಲ್ಲಿ ಖಲಿಸ್ತಾನ್ ಸಮಸ್ಯೆಯನ್ನು ಚರ್ಚಿಸಲಾಗುತ್ತದೆಯೇ ಎಂದು ಕೇಳಿದಾಗ "ನಾವು ಮೊದಲೇ ಹೇಳಿದಂತೆ, ಭಾರತ ಮತ್ತು ಅಮೆರಿಕದ ನಡುವಿನ ಪರಸ್ಪರ ಕಾಳಜಿಯ ವಿಷಯಗಳೇನೇನು ಇವೆಯೋ ಅವೆಲ್ಲವುಗಳನ್ನು ನಾವು ಭೇಟಿ ಸಂದರ್ಭದಲ್ಲಿ ಚರ್ಚೆ ಮಾಡುತ್ತೇವೆ. ಯಾವುದೇ ನಿರ್ದಿಷ್ಟ ವಿಷಯವಾಗಲಿ ಅವುಗಳ ಬಗ್ಗೆ ಸಮಾಲೋಚನೆ ಮಾಡಲಾಗುವುದು, ಆದರೆ ಏನನ್ನು ಮಾತನಾಡಲಾಗುವುದು ಎಂಬ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ನಾವು ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತೇವೆ ಎಂಬುದನ್ನು ಮಾತ್ರ ಖಂಡಿತವಾಗಿ ಹೇಳಬಲ್ಲೆ‘‘ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್​ ಮಿಸ್ರಿ ಹೇಳಿದ್ದಾರೆ.

ಭಾರತದ ನಿಲುವು ಸ್ಪಷ್ಟ :ನಿಯೋಜಿತ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ 'ಹತ್ಯೆ' ಯತ್ನದ ಕುರಿತು ಅಮೆರಿಕದಲ್ಲಿ ಭಾರತ ಸರ್ಕಾರದ ವಿರುದ್ಧ ಮೊಕದ್ದಮೆ ಹೂಡಿದ್ದಾರೆ ಎಂಬ ಪ್ರಶ್ನೆಗೆ ಮಿಸ್ರಿ, ನಾವು ಮೊದಲೇ ಹೇಳಿದಂತೆ, ಇವು ಸಂಪೂರ್ಣವಾಗಿ ಅನಗತ್ಯ ಮತ್ತು ಆಧಾರರಹಿತ ಆರೋಪಗಳಾಗಿವೆ. ಈಗ ಈ ನಿರ್ದಿಷ್ಟ ಪ್ರಕರಣವನ್ನು ದಾಖಲಿಸಲಾಗಿದೆ, ಈ ಬಗ್ಗೆ ನಮ್ಮ ಅಭಿಪ್ರಾಯಗಳನ್ನು ಬದಲಾಯಿಸುವುದಿಲ್ಲ ಎಂದರು.

ಈ ವ್ಯಕ್ತಿಯು ಪ್ರತಿನಿಧಿಸುವ ಸಂಸ್ಥೆಯು ಕಾನೂನುಬಾಹಿರ ಸಂಸ್ಥೆಯಾಗಿದೆ, 1967ರ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿ ಈ ಸಂಸ್ಥೆಯನ್ನು ನಿಷೇಧಿಸಲಾಗಿದೆ. ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಕಾರಣದಿಂದ ಹೀಗೆ ಮಾಡಲಾಗಿದೆ ಎಂಬ ಅಂಶವನ್ನು ನಾನು ಒತ್ತಿಹೇಳುತ್ತೇನೆ. ಮತ್ತು ವಿಧ್ವಂಸಕ ಚಟುವಟಿಕೆಗಳು ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಅಡ್ಡಿಪಡಿಸುವ ಗುರಿಯನ್ನು ಹೊಂದಿವೆ" ಎಂಬ ಅಂಶಗಳ ಬಗ್ಗೆ ಮಿಸ್ರಿ ಇದೇ ವೇಳೆ ಬೆಳಕು ಚಲ್ಲಿದರು.

SFJ ನ ಸಿವಿಲ್ ಸೂಟ್;ನ್ಯಾಯಕ್ಕಾಗಿ ಖಲಿಸ್ತಾನ್ ಪರ ಸಿಖ್ಖರ ಸಾಮಾನ್ಯ ಸಲಹೆಗಾರ ಗುರುಪತ್ವಂತ್ ಸಿಂಗ್ ಪನ್ನುನ್ ತಮ್ಮ ವಕೀಲರ ಮೂಲಕ ಅಮೆರಿಕದ ಫೆಡರಲ್ ಜಿಲ್ಲಾ ನ್ಯಾಯಾಲಯದಲ್ಲಿ ಭಾರತ ಸರ್ಕಾರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಇತರರ ವಿರುದ್ಧ ಸಿವಿಲ್ ಮೊಕದ್ದಮೆ ಹೂಡಿದ್ದಾರೆ. ಕಳೆದ ವರ್ಷ ಅಮೆರಿಕದಲ್ಲಿ ಹತ್ಯೆ ಮಾಡಲು ಪ್ರಯತ್ನಿಸಲಾಗಿತ್ತು.

ಇವರೆಲ್ಲರ ವಿರುದ್ಧ ಮೊಕದ್ದಮೆ:GOI, ದೋವಲ್, ಮಾಜಿ R&AW ಮುಖ್ಯಸ್ಥ ಸಮಂತ್ ಗೋಯೆಲ್, ಹಿರಿಯ R&AW ಅಧಿಕಾರಿ ವಿಕ್ರಮ್ ಯಾದವ್ ಮತ್ತು ಭಾರತೀಯ ಪ್ರಜೆ ನಿಖಿಲ್ ಗುಪ್ತಾ ವಿರುದ್ಧ ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ಮಂಗಳವಾರ ಮೊಕದ್ದಮೆ ಹೂಡಲಾಗಿದೆ ಎಂದು ಅಮೆರಿಕದ ಮಾಧ್ಯಮವೊಂದು ವರದಿ ಮಾಡಿದೆ.

ಹದಗೆಟ್ಟ ಭಾರತ-ಕೆನಡಾ ಸಂಬಂಧ:ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಇತ್ತೀಚೆಗೆ ಹದಗೆಟ್ಟಿವೆ, ವಿಶೇಷವಾಗಿ ಕೆನಡಾದ ಪ್ರಜೆ ಮತ್ತು ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಈ ಪರಿಸ್ಥಿತಿ ತಲೆದೋರಿದೆ. ನಿಜ್ಜರ್​ ಹತ್ಯೆಯಲ್ಲಿ ಭಾರತ ಭಾಗಿಯಾಗಿದೆ ಎಂದು ಆರೋಪಿಸಲಾಗಿದೆ, ಇದನ್ನು ನವದೆಹಲಿ ಬಲವಾಗಿ ನಿರಾಕರಿಸಿದೆ, ಆರೋಪಗಳನ್ನು "ಅಸಂಬದ್ಧ" ಎಂದು ತಳ್ಳಿ ಹಾಕಿದೆ.

ಇದೇ ವಿಚಾರ ಎರಡೂ ರಾಷ್ಟ್ರಗಳ ನಡುವಣ ಸಂಬಂಧ ಹದಗೆಡಲು ಕಾರಣವಾಗಿದೆ. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ನಿಜ್ಜರ್​ ಹತ್ಯೆ ಪ್ರಕರಣದ ಸಂಪೂರ್ಣ ತನಿಖೆಗೆ ಕರೆ ನೀಡಿದ್ದಾರೆ. ಆದರೆ ಕೆನಡಾ ಮಾಡಿರುವ ಎಲ್ಲ ಆರೋಪಗಳನ್ನು ಭಾರತ ತಳ್ಳಿಹಾಕಿದೆ ಮತ್ತು ಕೆನಡಾದಲ್ಲಿ ಖಲಿಸ್ತಾನಿ ಪರ ಗುಂಪುಗಳ ಚಟುವಟಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಇದನ್ನು ಓದಿ:ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೇಜ್ರಿವಾಲ್​​​,​ ವಾಸಕ್ಕೆ ಯಾವ ನಿವಾಸ ಆಯ್ಕೆ ಮಾಡ್ತಾರೆ?: ಹೀಗೊಂದು ಕುತೂಹಲ! - Kejriwal also choose his bungalow

ABOUT THE AUTHOR

...view details