ಕರ್ನಾಟಕ

karnataka

ಇಡಿ ಅರ್ಜಿ ತಿರಸ್ಕರಿಸಿ ಸಿಎಂ ಹೇಮಂತ್ ಸೊರೆನ್​ಗೆ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್: ಸಿಎಂ ಹೇಳಿದ್ದು ಹೀಗೆ - BIg Relief for CM Hemant Soren

By ETV Bharat Karnataka Team

Published : Jul 29, 2024, 11:04 PM IST

ಸುಪ್ರೀಂ ಕೋರ್ಟ್ ಇಡಿ ಅರ್ಜಿಯನ್ನು ತಿರಸ್ಕರಿಸಿ ಸಿಎಂ ಹೇಮಂತ್ ಸೊರೆನ್‌ಗೆ ಬಿಗ್ ರಿಲೀಫ್‌ ನೀಡಿದೆ. ಹೈಕೋರ್ಟ್‌ನ ಆದೇಶದ ಮೇಲೆ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಸುಪ್ರೀಂ ಕೋರ್ಟ್‌ನಿಂದ ರಿಲೀಫ್​ ಸಿಕ್ಕಿರುವುದಕ್ಕೆ ಸಿಎಂ ಹೇಮಂತ್ ಸೊರೆನ್ ಸಂತಸ ವ್ಯಕ್ತಪಡಿಸಿದರು.

RANCHI  EXPRESSED HAPPINESS OVER DECISION  DECISION OF SUPREME COURT
ಇಡಿ ಅರ್ಜಿಯನ್ನು ತಿರಸ್ಕರಿಸಿ ಸಿಎಂ ಹೇಮಂತ್ ಸೊರೇನ್​ಗೆ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್ (ETV Bharat)

ರಾಂಚಿ (ಜಾರ್ಖಂಡ್‌): ಸುಪ್ರೀಂ ಕೋರ್ಟ್ ತೀರ್ಪನ್ನು ಮುಖ್ಯಮಂತ್ರಿ ಹೇಮಂತ್ ಸೊರೆನ್ ಸ್ವಾಗತಿಸಿದ್ದಾರೆ. ನ್ಯಾಯಾಲಯವೇ ಸರ್ವೋಚ್ಚ, ಎಲ್ಲರಿಗೂ ನ್ಯಾಯ ಸಿಗುವ ಸ್ಥಳವೇ ನ್ಯಾಯಾಲಯ ಎಂದು ಸಿಎಂ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಎದುರಾಳಿಗಳ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದರು.

''ನನ್ನ ಮಾನಹಾನಿ ಮಾಡುವ ಯತ್ನ ನಡೆದಿದೆ. ಮತ್ತು ರಾಜ್ಯದ ಅಪಾರ ಆಸ್ತಿಯೊಂದಿಗೆ ಪರಾರಿಯಾಗಿದ್ದೇನೆ ಎಂದು ಕೂಡ ಹೇಳಲಾಗಿತ್ತು. ಅಷ್ಟೇ ಅಲ್ಲ, ನನ್ನನ್ನು ಕಂಬಿ ಹಿಂದೆ ಹಾಕಲಾಯಿತು. ಇದೇ ವೇಳೆ, ಸೊರೆನ್ ಕುಟುಂಬದ ವಿರುದ್ಧ ವಿರೋಧಿಗಳಿಂದ ನಾನಾ ರೀತಿಯ ಆರೋಪಗಳು ಕೇಳಿ ಬಂದಿದ್ದವು. ಜೈಲಿಗೆ ಹೋಗಿ ಬಂದ ನಂತರ ಈ ಜನರು ನನ್ನ ಐದು ತಿಂಗಳ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ್ದಾರೆ. ಬಹುಶಃ ಆ ಅಮೂಲ್ಯ ಸಮಯವನ್ನು ವ್ಯರ್ಥ ಮಾಡದಿದ್ದರೆ, ನಾವು ರಾಜ್ಯದ ಅಸಂಖ್ಯಾತ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತಿತ್ತು'' ಎಂದು ಮುಖ್ಯಮಂತ್ರಿ ಹೇಮಂತ್ ಸೊರೆನ್ ಹೇಳಿದರು.

''ತಮ್ಮ ಸಮಾಜದ ಬಡವರು, ಆದಿವಾಸಿಗಳು ಮತ್ತು ದಲಿತರ ಧ್ವನಿಯಾಗಲು ಶ್ರಮಿಸುತ್ತಿರುವವರನ್ನು ತಮ್ಮ ವಿರೋಧಿಗಳನ್ನು ಗುರಿಯಾಗಿಸಲಾಗಿದೆ. ಕೆಲವು ಜನರು ತಮ್ಮ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸಿದರು. ಸಾಧ್ಯವಿರುವ ಎಲ್ಲ ರೀತಿಯ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ'' ಎಂದರು. ಸುಪ್ರೀಂ ಕೋರ್ಟ್‌ನ ತೀರ್ಪನ್ನು ಉಲ್ಲೇಖಿಸಿದ ಸಿಎಂ ಮಾತನಾಡಿದ ಅವರು, ''ಇಂದು ಮತ್ತೆ ಅದೇ ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ ಸತ್ಯ ಏನು ಎಂಬುದು ಸಾಬೀತಾಗಿದೆ'' ಎಂದು ಹೇಳಿದರು.

ಐದು ತಿಂಗಳಲ್ಲಿ ಹೇಮಂತ್‌ಗೆ ಏನಾಗುತ್ತದೆ- ಕಲ್ಪನಾ ಸೊರೆನ್:ಮುಖ್ಯಮಂತ್ರಿ ಹೇಮಂತ್ ಸೊರೆನ್ ಜೊತೆಗೆ ಅವರ ಪತ್ನಿ ಶಾಸಕಿ ಕಲ್ಪನಾ ಸೊರೆನ್ ಕೂಡ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ. ವಿಧಾನಸಭೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕಿ ಕಲ್ಪನಾ ಸೊರೆನ್ ಅವರು, ಸತ್ಯಕ್ಕೆ ಜಯ ಸಿಕ್ಕಿದೆ. ಆದರೆ, ಐದು ತಿಂಗಳಲ್ಲಿ ಹೇಮಂತ್‌ಗೆ ಏನಾಗಲಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ'' ಎಂದು ಹೇಳಿದರು.

ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ರಚನೆಯ ಬೇಡಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು, ಸಮಾಜವನ್ನು ಒಡೆಯುವವರು, ಕುಟುಂಬವನ್ನು ಒಡೆಯುವವರು ಮತ್ತು ದೇಶ ಮತ್ತು ರಾಜ್ಯದಲ್ಲಿ ಅನಿಶ್ಚಿತತೆಯನ್ನು ಹರಡುವಲ್ಲಿ ನಿರತರಾಗಿದ್ದಾರೆ ಎಂದು ಕಿಡಿಕಾರಿದರು.

ಸೋಮವಾರ, ಮುಖ್ಯಮಂತ್ರಿ ಹೇಮಂತ್ ಸೊರೆನ್‌ಗೆ ಸಂಬಂಧಿಸಿದ ಜಾಮೀನು ಕುರಿತು ಜಾರ್ಖಂಡ್ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸುವ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ಇಡಿ ಅರ್ಜಿಯನ್ನು ತಿರಸ್ಕರಿಸಿದೆ. ಈ ಅರ್ಜಿಯಲ್ಲಿ ಹೇಮಂತ್ ಸೊರೆನ್‌ಗೆ ಜಾಮೀನು ನೀಡಿದ ಜಾರ್ಖಂಡ್ ಹೈಕೋರ್ಟ್ ತೀರ್ಪನ್ನು ಇಡಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಇದನ್ನೂ ಓದಿ:ಪಾಟ್ನಾದಲ್ಲಿ ಜನ ಸೂರಜ್ ಸಭೆ; ಪ್ರಶಾಂತ್ ಕಿಶೋರ್ ಜತೆ ಕೈಜೋಡಿಸಿದ ಆನಂದ್ ಮಿಶ್ರಾ - jan suraj meeting in patna

ABOUT THE AUTHOR

...view details