ಶಿವಮೊಗ್ಗ: ಅಕ್ಟೋಬರ್ 8ರಂದು ತುಂಬಿ ಹರಿಯುತ್ತಿದ್ದ ಕೊಂಡಜ್ಜಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಚಿನ್ನಿಕಟ್ಟೆ ನಿವಾಸಿ ಇಕ್ಬಾಲ್ ಮೃತಪಟ್ಟವರು.
ಶಿವಮೊಗ್ಗ ತಾಲೂಕಿನ ಎಡವಾಲದಿಂದ ಹಿಟ್ಟೂರು ಕ್ರಾಸ್ ನಡುವೆ ಇರುವ ಕೊಂಡಜ್ಜಿ ಹಳ್ಳದ ಸೇತುವೆ ಮೇಲೆ ಬೈಕ್ನಲ್ಲಿ ದಾಟುವಾಗ ನೀರಿನ ರಭಸಕ್ಕೆ ತೇಲಿಕೊಂಡು ಹೋಗಿದ್ದರು. ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿದ್ದರೂ ಇಕ್ಬಾಲ್ ದಾಟಲು ಯತ್ನಿಸಿ, ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾರೆ.
ಅಂದಿನಿಂದ ಮೂರು ದಿನ ಸತತವಾಗಿ ಅಗ್ನಿಶಾಮಕ ದಳದವರು ಹುಡುಕಾಟ ನಡೆಸಿದ್ದರು. ಶುಕ್ರವಾರ ಸಂಜೆ ಇಕ್ಬಾಲ್ ಶವ ಕೊಂಡಜ್ಜಿ ಹಳ್ಳದ ಸೇತುವೆಯಿಂದ ಸುಮಾರು 1 ಕಿ.ಮೀ. ದೂರದಲ್ಲಿ ಪತ್ತೆಯಾಗಿದೆ. ಈ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಸರಿಯಾಗಿ ಬಟ್ಟೆ ಧರಿಸದಿದ್ದರೆ ಆ್ಯಸಿಡ್ ಎರಚುವ ಸಂದೇಶ ಕಳುಹಿಸಿದ ವ್ಯಕ್ತಿ ಕೆಲಸದಿಂದ ವಜಾ