ಕ್ರಿಕೆಟ್ ಅಭಿಮಾನಿಗಳಿಂದ ಟೀಂ ಇಂಡಿಯಾಗೆ ಚಿಯರ್ಸ್; ಮೈಸೂರಿನ 101 ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ - Cheers to Team India

By ETV Bharat Karnataka Team

Published : Jun 29, 2024, 6:06 PM IST

Updated : Jun 29, 2024, 7:40 PM IST

thumbnail
ಮೈಸೂರಿನ 101 ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ: ಕ್ರಿಕೆಟ್ ಅಭಿಮಾನಿಗಳಿಂದ ಟೀಂ ಇಂಡಿಯಾಗೆ ಚಿಯರ್ಸ್ (ETV Bharat)

T20 world cup 2024: ಟಿ-20 ವಿಶ್ವಕಪ್​ನಲ್ಲಿ ಅಜೇಯವಾಗಿ ಫೈನಲ್ ಹಂತಕ್ಕೆ ತಲುಪಿರುವ ಭಾರತ ತಂಡಕ್ಕೆ ವಿವಿಧ ಜಿಲ್ಲೆಗಳಿಂದ ಕ್ರಿಕೆಟ್​ ಅಭಿಮಾನಿಗಳು ಗೆದ್ದು ಬಾ ಭಾರತ ಎಂದು ಶುಭಾಶಯ ಮಹಾಪೂರವನ್ನೇ ತಿಳಿಸಿದ್ದಾರೆ.

ಮೈಸೂರು 101 ಗಣಪತಿ ದೇವಾಲಯದಲ್ಲಿ ಪೂಜೆ: ಟಿ20 ವಿಶ್ವಕಪ್​ನ ಫೈನಲ್​ ಪಂದ್ಯದಲ್ಲಿ ಭಾರತ ಗೆಲ್ಲಲಿ ಎಂದು ಮೈಸೂರಿನಲ್ಲಿ ಶಾಸಕ ಶ್ರೀವತ್ಸ ನೇತೃತ್ವದಲ್ಲಿ ಕ್ರಿಕೆಟ್ ಅಭಿಮಾನಿಗಳು ಆಗ್ರಹಾರದಲ್ಲಿರುವ 101 ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಗೆದ್ದು ಬಾ ಇಂಡಿಯಾ ಎಂದು ಘೋಷಣೆ ಕೂಗಿದರು.

ಚಾಮರಾಜನಗರದಲ್ಲಿ ಶುಭಾಶಯ ತಿಳಿಸಿದ ಮಕ್ಕಳು: ಶಾಲಾ-ಕಾಲೇಜುಗಳಲ್ಲಿ ಭಾರತ ಧ್ವಜ ಹಿಡಿದು ಟೀಂ ಇಂಡಿಯಾಗೆ ವಿಶ್ ಮಾಡಲಾಗಿದೆ‌. ಜೊತೆಗೆ, ಹರಳುಕೋಟೆ ಆಂಜನೇಯ ದೇವಾಸ್ಥಾನದಲ್ಲಿ ಕ್ರಿಕೆಟ್ ಪ್ರೇಮಿಗಳು ವಿಶೇಷ ಪೂಜೆ ಸಲ್ಲಿಸಿ ರೋಹಿತ್ ಬಳಗ ಟ್ರೋಫಿ ತರಲಿ ಎಂದು ಹಾರೈಸಿದ್ದಾರೆ. 

ಟೀಂ ಇಂಡಿಯಾಕ್ಕೆ ಶುಭ ಹಾರಿಸಿದ ಬೆಳಗಾವಿ ಜನ: ಭಾರತ-ದಕ್ಷಿಣ ಆಫ್ರಿಕಾ ನಡುವೆ ಟಿ-20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದ್ದು, ಕುಂದಾನಗರಿ ಬೆಳಗಾವಿ ಕ್ರಿಕೆಟ್ ಅಭಿಮಾನಿಗಳು ಗೆದ್ದು ಬಾ ಇಂಡಿಯಾ ಎಂದು ಹಿಟ್ ಮ್ಯಾನ್ ರೋಹಿತ್ ಶರ್ಮಾ ತಂಡಕ್ಕೆ ಶುಭ ಹಾರೈಸಿದ್ದಾರೆ.

ದಾವಣಗೆರೆಯಿಂದ ಭಾರತ ತಂಡಕ್ಕೆ ಶುಭಾಶಯ: ಕೆರಿಬಿಯನ್​ರ ನಾಡು ವೆಸ್ಟ್ ಇಂಡೀಸ್​ನ ಬಾರ್ಬಡಸ್​ನಲ್ಲಿ ಹೈವೋಲ್ಟೇಜ್​ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಬರಲಿ ಎಂದು ದಾವಣಗೆರೆ ಮಂದಿ ಶುಭಾಶಯ ತಿಳಿಸಿದ್ದಾರೆ. ದಾವಣಗೆರೆಯ ಕ್ರಿಕೆಟ್ ಪ್ರೇಮಿಗಳು ಟೀಂ ಇಂಡಿಯಾಕ್ಕೆ ಬೆನ್ನೆಲುಬಾಗಿ ನಿಂತು ಗೆದ್ದು ಬರಲೆಂದು ಪ್ರೀತಿಯಿಂದ ಹರಸಿದ್ದಾರೆ.

ಓದಿ: ಈ ಸಲವೂ ಭಾರತ ವಿಶ್ವಕಪ್​​ ಗೆಲ್ಲದಿದ್ರೆ ರೋಹಿತ್​ ಶರ್ಮಾ ಸಮುದ್ರಕ್ಕೆ ಹಾರ್ತಾರೆ: ಸೌರವ್​ ಗಂಗೂಲಿ - IND VS SOUTH AFRICA FINAL

Last Updated : Jun 29, 2024, 7:40 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.