thumbnail

By ETV Bharat Karnataka Team

Published : Jan 24, 2024, 5:33 PM IST

Updated : Jan 24, 2024, 5:59 PM IST

ETV Bharat / Videos

ಬೆಂಗಳೂರು: ಮದುವೆ ಮಂಟಪಗಳಿಗೆ ಪರಿಚಿತನಂತೆ ನುಗ್ಗಿ ಚಿನ್ನಾಭರಣ ಎಗರಿಸುತ್ತಿದ್ದವನ ಬಂಧನ

ಬೆಂಗಳೂರು: ರಾಜಧಾನಿಯ ಕಲ್ಯಾಣ ಮಂಟಪಗಳಿಗೆ ತೆರಳಿ ವಧು-ವರರಿಗೆ ಶುಭ ಕೋರುವ ನೆಪದಲ್ಲಿ ಚಿನ್ನಾಭರಣ ಕದಿಯುತ್ತಿದ್ದ ಖತರ್​ನಾಕ್ ಖದೀಮನನ್ನು ಮಾಗಡಿ ರೋಡ್ ಠಾಣಾ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಬಂಧಿತ ನಿಖಿಲ್ ನಗರದ ಮದುವೆ ಮಂಟಪಗಳಿಗೆ ಒಳ್ಳೆ ಉಡುಗೆಗಳನ್ನು ಧರಿಸಿ ಹೋಗುತ್ತಿದ್ದ. ಈತನನ್ನ ನೋಡಿದವರು ವಧು-ವರನ ಕಡೆಯವರೇ ಅಂದುಕೊಳ್ಳುವಷ್ಟು ಈತ ಮುಗ್ಧನಂತೆ ನಟಿಸುತ್ತಿದ್ದ. 

ಎಲ್ಲರನ್ನು ನಗುಮುಖದಿಂದ ಮಾತನಾಡಿಸಿ ಸಮಯ ನೋಡಿಕೊಂಡು ವಧು-ವರರ ಕೊಠಡಿಗೆ ನುಗ್ಗುತ್ತಿದ್ದ. ಇದೇ ರೀತಿ ಕಳೆದ ನವೆಂಬರ್ 28 ರಂದು ವೆಸ್ಟ್ ಆಫ್ ಕಾರ್ಡ್ ರೋಡ್​ನಲ್ಲಿರುವ ಜಲರಾಂ ಕಲ್ಯಾಣ ಮಂಟಪಕ್ಕೆ ಹೋಗಿ‌ ಮದುಮಗಳ ರೂಮ್​ಗೆ ನುಗ್ಗಿ 1.81 ಲಕ್ಷ ಮೌಲ್ಯದ 31 ಗ್ರಾಂ ತೂಕದ ಚಿನ್ನಾಭರಣ ಕಳ್ಳತನ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಚಾಲಾಕಿಯನ್ನು ಬಂಧಿಸಿದ್ದಾರೆ.

ಆರೋಪಿಯನ್ನ ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಈ ಹಿಂದೆ ಹಾಸನದ ರೈಲ್ವೇ ನಿಲ್ದಾಣದಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ ಆರೋಪದಡಿ ಜೈಲು ಸೇರಿದ್ದು. ಬಳಿಕ ಜಾಮೀನಿನ ಮೇರೆಗೆ ಬಿಡುಗಡೆಯಾದರೂ ಹಳೆ ಚಾಳಿ ಪ್ರವೃತ್ತಿಯನ್ನು ಮುಂದುವರೆಸಿರುವುದು ಗೊತ್ತಾಗಿದೆ. ಬಂಧಿತನಿಂದ 1.81 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ತಂಗಿಯನ್ನು ಚುಡಾಯಿಸಿದ್ದಕ್ಕೆ ಯುವಕನ ಹತ್ಯೆ: ಸ್ನೇಹಿತರಿಬ್ಬರ ಬಂಧನ

Last Updated : Jan 24, 2024, 5:59 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.