ETV Bharat / entertainment

'ಹೋಸ್ಟ್​ ಆಗಿ ಕೊನೆಯ ಎಪಿಸೋಡ್​​​': ಬಿಗ್​ ಬಾಸ್​ಗೆ ಮರೆಯಲಾಗದ ಪಯಣವೆಂದ ಸುದೀಪ್​ - SUDEEP

ಅಕ್ಟೋಬರ್​ 15ರಂದು ಕಿಚ್ಚ ಸುದೀಪ್​ ಅವರು ಬಿಗ್​ ಬಾಸ್​ ನಿರೂಪಣೆಗೆ ತಮ್ಮ ವಿದಾಯ ಹೇಳಿದ್ದರು. ಇದೀಗ ಮತ್ತೊಮ್ಮೆ ಟ್ವೀಟ್​ ಮಾಡಿ, ಮುಂಬರುವ ಫಿನಾಲೆ ಕಾರ್ಯಕ್ರಮ ಹೋಸ್ಟ್ ಆಗಿ ನನ್ನ ಕೊನೆಯ ಎಪಿಸೋಡ್​​ ಎಂದು ತಿಳಿಸಿದ್ದಾರೆ.

Sudeep
ಅಭಿನಯ ಚಕ್ರವರ್ತಿ ಸುದೀಪ್​ (Photo: ETV Bharat)
author img

By ETV Bharat Entertainment Team

Published : Jan 20, 2025, 1:55 PM IST

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್​ ಬಾಸ್​ ಸೀಸನ್​ 11 ಗ್ರ್ಯಾಂಡ್​ ಫಿನಾಲೆ ಹೊಸ್ತಿಲಿನಲ್ಲಿದೆ. ಇದೇ ಶನಿವಾರ ಮತ್ತು ಭಾನುವಾರ ಅದ್ಧೂರಿ ಫಿನಾಲೆ ಜರುಗಲಿದೆ. ಬಿಗ್​ ಬಾಸ್​ ಟ್ರೋಫಿಯನ್ನು ಯಾರು ಹಿಡಿಯಲಿದ್ದಾರೆ ಅನ್ನೋ ಕುತೂಹಲ ಕನ್ನಡಿಗರಲ್ಲಿದೆ. ಕಳೆದೆರಡು ಸಂಚಿಕೆಗಳಾದ ವಾರದ ಕಥೆ ಕಿಚ್ಚನ ಜೊತೆ ಮತ್ತು ಸೂಪರ್ ಸಂಡೇ ವಿತ್​ ಸುದೀಪ, ಕಿಚ್ಚ ಸುದೀಪ್​ ನಿರೂಪಣೆಯಲ್ಲಿ ಬಂದ ಕೊನೆ ವೀಕೆಂಡ್​​ ಎಪಿಸೋಡ್​ಗಳು. ಈ ವಾರಾಂತ್ಯದ ಪ್ರಸಾರ ಕಾಣಲಿರುವ ಗ್ರ್ಯಾಂಡ್​ ಫಿನಾಲೆ ಕೂಡಾ ಅಭಿನಯ ಚಕ್ರವರ್ತಿ ಸುದೀಪ್​ ನಿರೂಪಣೆಯ ಕೊನೆಯ ಬಿಗ್​ ಬಾಸ್​ ಎಪಿಸೋಡ್​ಗಳಾಗಿರಲಿವೆ. ಈ ಬಗ್ಗೆ ಸ್ವತಃ ಸುದೀಪ್​ ಅವರೇ ಟ್ವೀಟ್ ಮಾಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬಿಗ್ ಬಾಸ್​ ಮರೆಯಲಾಗದ ಒಂದು ಪಯಣ: ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ ನಿರೂಪಕ ಸುದೀಪ್​, ಬಿಗ್​ ಬಾಸ್​​​ ಕಳೆದ 11 ಸೀಸನ್‌ಗಳಿಂದ ನಾನು ಎಂಜಾಯ್​ ಮಾಡಿದ ಕಾರ್ಯಕ್ರಮ. ನೀವು ತೋರಿದ ಪ್ರೀತಿಗೆ ಧನ್ಯವಾದಗಳು. ಮುಂಬರುವ ಫಿನಾಲೆ ಕಾರ್ಯಕ್ರಮ ಹೋಸ್ಟ್ ಆಗಿ ನನ್ನ ಕೊನೆಯ ಎಪಿಸೋಡ್​​. ನಿಮ್ಮೆಲ್ಲರನ್ನೂ ಮನರಂಜಿಸುವ ಭರವಸೆ ಹೊಂದಿದ್ದೇನೆ. ಬಿಗ್ ಬಾಸ್​ ಮರೆಯಲಾಗದ ಒಂದು ಪಯಣ. ಅದನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ಈ ಅವಕಾಶಕ್ಕಾಗಿ ಧನ್ಯವಾದಗಳು. ಲವ್​ ಯೂ ಎಂದು ಬರೆದುಕೊಂಡಿದ್ದಾರೆ.

ಅಕ್ಟೋಬರ್​ 15ರಂದೇ ಅಧಿಕೃತ ವಿದಾಯ ಘೋಷಿಸಿದ್ದ ಸುದೀಪ್​​: ಬಿಗ್​ ಬಾಸ್​​ ಕನ್ನಡ ಸೀಸನ್​ 11 ಆರಂಭವಾದ ಕೆಲವೇ ದಿನಗಳಲ್ಲಿ, ಅಕ್ಟೋಬರ್​ 15ರಂದು ಸೋಷಿಯಲ್​ ಮೀಡಿಯಾ ಪೋಸ್ಟ್​ ಮೂಲಕ 'ಬಿಗ್​ ಬಾಸ್​​' ನಿರೂಪಣೆಗೆ ನಟ ಸುದೀಪ್​​ ವಿದಾಯ ಘೋಷಿಸಿದ್ದರು. ಮುಂದಿನ ಸೀಸನ್​ಗಳನ್ನು ನಾನು ನಡೆಸಿಕೊಡುವುದಿಲ್ಲ ಎಂದು ಮಾಹಿತಿ ನೀಡಿದ್ದರು. ಇದೀಗ, ಮತ್ತೊಮ್ಮೆ ಟ್ವೀಟ್​ ಮಾಡಿ ಮುಂಬರುವ ಫಿನಾಲೆ ಕಾರ್ಯಕ್ರಮ ಹೋಸ್ಟ್ ಆಗಿ ಬಿಗ್​ ಬಾಸ್​ನಲ್ಲಿ ನನ್ನ ಕೊನೆಯ ಎಪಿಸೋಡ್​​ ಎಂದು ತಿಳಿಸಿದ್ದಾರೆ. ಅಭಿಮಾನಿಗಳು ಈ ಬಗ್ಗೆ ತಮ್ಮ ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ: 'ಬಿಗ್ ಬಾಸ್ ಹಿಂದಿ 18'ರ ಟ್ರೋಫಿ ಗೆದ್ದುಕೊಂಡ ಕರಣ್ ವೀರ್ ಮೆಹ್ರಾ: ವಿವಿಯನ್ ಡಿಸೆನಾ ರನ್ನರ್​ ಅಪ್​​

ಕಮೆಂಟ್​ಗಳ ಪೈಕಿ ಒಂದರಲ್ಲಿ, ''ಕೆಲವೊಮ್ಮೆ ಸಿನಿಮಾ ವಿಚಾರವಾಗಿ ಗಮನಿಸಿದರೆ ಇದೊಂದು ಒಳ್ಳೆ ನಿರ್ಧಾರ ಅನಿಸುತ್ತದೆ. ಅದೇ ಸಮಯದಲ್ಲಿ, ಪ್ರತೀ ವಾರಾಂತ್ಯದಲ್ಲಿ ನಿಮ್ಮನ್ನು ಟಿವಿಯುಲ್ಲಿ ನೋಡಲು ಸಾಧ್ಯವಾಗುವುದಿಲ್ಲ ಅನ್ನೋದು ಬಹಳ ಬೇಸರ ತರಿಸುತ್ತಿದೆ. ಸುದೀಪ್​ ಅಣ್ಣಾ, ಕಳೆದ 11 ವರ್ಷಗಳಿಂದ ನೀವು ಇತಿಹಾಸ ಸೃಷ್ಟಿಸಿದ್ದಕ್ಕೆ ಧನ್ಯವಾದಗಳು'' ಎಂದು ಬರೆಯಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಶಾಲಾ ದಿನಗಳ ಬಗ್ಗೆ ಅಚ್ಚಕನ್ನಡದಲ್ಲಿ ಮೆಲುಕು ಹಾಕಿದ ರಜನಿಕಾಂತ್​: ತಲೈವಾ ಕನ್ನಡ ಬಲು ಸೂಪರ್​​ - ವಿಡಿಯೋ

ಮತ್ತೋರ್ವರ ಪ್ರತಿಕ್ರಿಯೆಯಲ್ಲಿ, 'ರಿಯಾಲಿಟಿಟ್ ಶೋಗಳಿಗೆ, ಇವರೇ ಸೂಕ್ತ: ಕನ್ನಡದ ಕೋಟ್ಯಧಿಪತಿ = ಅಪ್ಪು, ವೀಕೆಂಡ್ ವಿತ್​ ರಮೇಶ್​ = ರಮೇಶ್ ಸರ್, ಕಾಮಿಡಿ ಖಿಲಾಡಿಗಳು = ಜಗ್ಗೇಶ್ ಸರ್, ಬಿಗ್ ಬಾಸ್ = ಸುದೀಪ್ ಸರ್. 11 ವರ್ಷಗಳ ನಿರೂಪಣೆ ಅದ್ಭುತವಾಗಿತ್ತು, ದಯವಿಟ್ಟು ಮತ್ತೆ ಬನ್ನಿ ಎಂದು ಆಶಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್​ ಬಾಸ್​ ಸೀಸನ್​ 11 ಗ್ರ್ಯಾಂಡ್​ ಫಿನಾಲೆ ಹೊಸ್ತಿಲಿನಲ್ಲಿದೆ. ಇದೇ ಶನಿವಾರ ಮತ್ತು ಭಾನುವಾರ ಅದ್ಧೂರಿ ಫಿನಾಲೆ ಜರುಗಲಿದೆ. ಬಿಗ್​ ಬಾಸ್​ ಟ್ರೋಫಿಯನ್ನು ಯಾರು ಹಿಡಿಯಲಿದ್ದಾರೆ ಅನ್ನೋ ಕುತೂಹಲ ಕನ್ನಡಿಗರಲ್ಲಿದೆ. ಕಳೆದೆರಡು ಸಂಚಿಕೆಗಳಾದ ವಾರದ ಕಥೆ ಕಿಚ್ಚನ ಜೊತೆ ಮತ್ತು ಸೂಪರ್ ಸಂಡೇ ವಿತ್​ ಸುದೀಪ, ಕಿಚ್ಚ ಸುದೀಪ್​ ನಿರೂಪಣೆಯಲ್ಲಿ ಬಂದ ಕೊನೆ ವೀಕೆಂಡ್​​ ಎಪಿಸೋಡ್​ಗಳು. ಈ ವಾರಾಂತ್ಯದ ಪ್ರಸಾರ ಕಾಣಲಿರುವ ಗ್ರ್ಯಾಂಡ್​ ಫಿನಾಲೆ ಕೂಡಾ ಅಭಿನಯ ಚಕ್ರವರ್ತಿ ಸುದೀಪ್​ ನಿರೂಪಣೆಯ ಕೊನೆಯ ಬಿಗ್​ ಬಾಸ್​ ಎಪಿಸೋಡ್​ಗಳಾಗಿರಲಿವೆ. ಈ ಬಗ್ಗೆ ಸ್ವತಃ ಸುದೀಪ್​ ಅವರೇ ಟ್ವೀಟ್ ಮಾಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬಿಗ್ ಬಾಸ್​ ಮರೆಯಲಾಗದ ಒಂದು ಪಯಣ: ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ ನಿರೂಪಕ ಸುದೀಪ್​, ಬಿಗ್​ ಬಾಸ್​​​ ಕಳೆದ 11 ಸೀಸನ್‌ಗಳಿಂದ ನಾನು ಎಂಜಾಯ್​ ಮಾಡಿದ ಕಾರ್ಯಕ್ರಮ. ನೀವು ತೋರಿದ ಪ್ರೀತಿಗೆ ಧನ್ಯವಾದಗಳು. ಮುಂಬರುವ ಫಿನಾಲೆ ಕಾರ್ಯಕ್ರಮ ಹೋಸ್ಟ್ ಆಗಿ ನನ್ನ ಕೊನೆಯ ಎಪಿಸೋಡ್​​. ನಿಮ್ಮೆಲ್ಲರನ್ನೂ ಮನರಂಜಿಸುವ ಭರವಸೆ ಹೊಂದಿದ್ದೇನೆ. ಬಿಗ್ ಬಾಸ್​ ಮರೆಯಲಾಗದ ಒಂದು ಪಯಣ. ಅದನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ಈ ಅವಕಾಶಕ್ಕಾಗಿ ಧನ್ಯವಾದಗಳು. ಲವ್​ ಯೂ ಎಂದು ಬರೆದುಕೊಂಡಿದ್ದಾರೆ.

ಅಕ್ಟೋಬರ್​ 15ರಂದೇ ಅಧಿಕೃತ ವಿದಾಯ ಘೋಷಿಸಿದ್ದ ಸುದೀಪ್​​: ಬಿಗ್​ ಬಾಸ್​​ ಕನ್ನಡ ಸೀಸನ್​ 11 ಆರಂಭವಾದ ಕೆಲವೇ ದಿನಗಳಲ್ಲಿ, ಅಕ್ಟೋಬರ್​ 15ರಂದು ಸೋಷಿಯಲ್​ ಮೀಡಿಯಾ ಪೋಸ್ಟ್​ ಮೂಲಕ 'ಬಿಗ್​ ಬಾಸ್​​' ನಿರೂಪಣೆಗೆ ನಟ ಸುದೀಪ್​​ ವಿದಾಯ ಘೋಷಿಸಿದ್ದರು. ಮುಂದಿನ ಸೀಸನ್​ಗಳನ್ನು ನಾನು ನಡೆಸಿಕೊಡುವುದಿಲ್ಲ ಎಂದು ಮಾಹಿತಿ ನೀಡಿದ್ದರು. ಇದೀಗ, ಮತ್ತೊಮ್ಮೆ ಟ್ವೀಟ್​ ಮಾಡಿ ಮುಂಬರುವ ಫಿನಾಲೆ ಕಾರ್ಯಕ್ರಮ ಹೋಸ್ಟ್ ಆಗಿ ಬಿಗ್​ ಬಾಸ್​ನಲ್ಲಿ ನನ್ನ ಕೊನೆಯ ಎಪಿಸೋಡ್​​ ಎಂದು ತಿಳಿಸಿದ್ದಾರೆ. ಅಭಿಮಾನಿಗಳು ಈ ಬಗ್ಗೆ ತಮ್ಮ ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ: 'ಬಿಗ್ ಬಾಸ್ ಹಿಂದಿ 18'ರ ಟ್ರೋಫಿ ಗೆದ್ದುಕೊಂಡ ಕರಣ್ ವೀರ್ ಮೆಹ್ರಾ: ವಿವಿಯನ್ ಡಿಸೆನಾ ರನ್ನರ್​ ಅಪ್​​

ಕಮೆಂಟ್​ಗಳ ಪೈಕಿ ಒಂದರಲ್ಲಿ, ''ಕೆಲವೊಮ್ಮೆ ಸಿನಿಮಾ ವಿಚಾರವಾಗಿ ಗಮನಿಸಿದರೆ ಇದೊಂದು ಒಳ್ಳೆ ನಿರ್ಧಾರ ಅನಿಸುತ್ತದೆ. ಅದೇ ಸಮಯದಲ್ಲಿ, ಪ್ರತೀ ವಾರಾಂತ್ಯದಲ್ಲಿ ನಿಮ್ಮನ್ನು ಟಿವಿಯುಲ್ಲಿ ನೋಡಲು ಸಾಧ್ಯವಾಗುವುದಿಲ್ಲ ಅನ್ನೋದು ಬಹಳ ಬೇಸರ ತರಿಸುತ್ತಿದೆ. ಸುದೀಪ್​ ಅಣ್ಣಾ, ಕಳೆದ 11 ವರ್ಷಗಳಿಂದ ನೀವು ಇತಿಹಾಸ ಸೃಷ್ಟಿಸಿದ್ದಕ್ಕೆ ಧನ್ಯವಾದಗಳು'' ಎಂದು ಬರೆಯಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಶಾಲಾ ದಿನಗಳ ಬಗ್ಗೆ ಅಚ್ಚಕನ್ನಡದಲ್ಲಿ ಮೆಲುಕು ಹಾಕಿದ ರಜನಿಕಾಂತ್​: ತಲೈವಾ ಕನ್ನಡ ಬಲು ಸೂಪರ್​​ - ವಿಡಿಯೋ

ಮತ್ತೋರ್ವರ ಪ್ರತಿಕ್ರಿಯೆಯಲ್ಲಿ, 'ರಿಯಾಲಿಟಿಟ್ ಶೋಗಳಿಗೆ, ಇವರೇ ಸೂಕ್ತ: ಕನ್ನಡದ ಕೋಟ್ಯಧಿಪತಿ = ಅಪ್ಪು, ವೀಕೆಂಡ್ ವಿತ್​ ರಮೇಶ್​ = ರಮೇಶ್ ಸರ್, ಕಾಮಿಡಿ ಖಿಲಾಡಿಗಳು = ಜಗ್ಗೇಶ್ ಸರ್, ಬಿಗ್ ಬಾಸ್ = ಸುದೀಪ್ ಸರ್. 11 ವರ್ಷಗಳ ನಿರೂಪಣೆ ಅದ್ಭುತವಾಗಿತ್ತು, ದಯವಿಟ್ಟು ಮತ್ತೆ ಬನ್ನಿ ಎಂದು ಆಶಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.