ETV Bharat / state

ಟ್ರಾಫಿಕ್ ದಂಡ: ರಶೀದಿ ಬದಲು ಇ - ಚಲನ್, ಈ ವ್ಯವಸ್ಥೆ ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕ

author img

By ETV Bharat Karnataka Team

Published : Feb 9, 2024, 12:28 PM IST

ಬೆಂಗಳೂರಲ್ಲಿ ಜಾರಿಯಲ್ಲಿದ್ದ ಟ್ರಾಫಿಕ್ ದಂಡದ ಇ -ಚಲನ್ ವ್ಯವಸ್ಥೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದೆ.

ಟ್ರಾಫಿಕ್ ದಂಡ
ಟ್ರಾಫಿಕ್ ದಂಡ

ಬೆಂಗಳೂರು: ರಾಜ್ಯದಲ್ಲಿ ಸಂಚಾರಿ ನಿಯಮ ಉಲ್ಲಂಘನೆಗೆ ರಶೀದಿ ಬರೆದು ಕೊಡುವ ವ್ಯವಸ್ಥೆಗೆ ಪೊಲೀಸ್ ಇಲಾಖೆ ಗುಡ್ ಬೈ ಹೇಳಿದೆ. ಇ-ಚಲನ್ ವ್ಯವಸ್ಥೆಗೆ ಬುಧವಾರ ಚಾಲನೆ ನೀಡಿದ್ದು, ರಾಜ್ಯಾದ್ಯಂತ ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಯನ್ನ ಸಂಪೂರ್ಣವಾಗಿ ಜಾರಿಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾದಂತಾಗಿದೆ.

ಏನಿದು ಇ ಚಲನ್ ವ್ಯವಸ್ಥೆ?: ಇ-ಚಲನ್ ಎಂಬುದು ಸಂಚಾರಿ ನಿಯಮಗಳ ಉಲ್ಲಂಘನೆ ಹಾಗೂ ದಂಡದ ವಿವರಗಳನ್ನೊಳಗೊಂಡ ಡಿಜಿಟಲ್ ದಾಖಲೆಯಾಗಿದ್ದು, ಇದನ್ನು ಪಡೆಯಲು ಸಂಚಾರಿ ಪೊಲೀಸ್ ಸಿಬ್ಬಂದಿ ನಿರ್ದಿಷ್ಟವಾದ ಸ್ವೈಪಿಂಗ್ ಸಾಧನ ಹೊಂದಿರಲಿದ್ದಾರೆ. ಸಂಚಾರ ನಿಯಮ ಉಲ್ಲಂಘನೆಗೆ ಇ-ಚಲನ್ ಮೂಲಕ ಚಲನ್ ಪಡೆದಾಗ ಪೊಲೀಸ್ ಇಲಾಖೆಯ ಸರ್ವರ್​​ನಲ್ಲಿಯೂ ಸಹ ಇದು ದಾಖಲಿಸಲ್ಪಡುತ್ತದೆ. ಇದರಿಂದಾಗಿ ಲಂಚ ಪಡೆದು ರಶೀದಿ ಕ್ಯಾನ್ಸಲ್ ಮಾಡಲು (ಹರಿದು ಹಾಕಲು) ಸಾಧ್ಯವಾಗುವುದಿಲ್ಲ. ಸಂಚಾರ ನಿರ್ವಹಣೆಯನ್ನು ಡಿಜಿಟಲೀಕರಣಗೊಳಿಸುವ ಹಾಗೂ ಪಾರದರ್ಶಕತೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಇದು ಕಾಗದ ರಹಿತ ಹಾಗೂ ಕೆಲಸವನ್ನ ತಗ್ಗಿಸಲಿದೆ.

ಸದ್ಯ ಈ ವ್ಯವಸ್ಥೆಗಾಗಿ ಎಸ್‌ಬಿಐ ಬ್ಯಾಂಕ್​ನೊಂದಿಗೆ ರಾಜ್ಯ ಪೊಲೀಸ್ ಇಲಾಖೆಯು ಒಪ್ಪಂದ ಮಾಡಿಕೊಂಡಿದ್ದು, ವಾಹನ ಸವಾರರು ಪಾವತಿಸುವ ಹಣ ನೇರವಾಗಿ ಇಲಾಖೆಯ ಅಧಿಕೃತ ಖಾತೆಗೆ ಜಮೆಯಾಗಲಿದೆ. ಈ ವ್ಯವಸ್ಥೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯಾದ್ಯಂತ 722 ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳು ಮತ್ತು 64 ಸಂಚಾರ ಠಾಣೆಗಳ ಪೊಲೀಸ್ ಸಿಬ್ಬಂದಿಗೆ 1,766 ಇ-ಚಲನ್​ ಯಂತ್ರಗಳನ್ನು ನೀಡಲಾಗಿದೆ. ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರು ಯುಪಿಐ, ಡೆಬಿಟ್ ಕಾರ್ಡ್ ಮತ್ತು ನಗದು ಪಾವತಿ ಸೇರಿದಂತೆ ವಿವಿಧ ವಿಧಾನಗಳ ಮೂಲಕ ದಂಡ ಪಾವತಿಸಬಹುದು.

ಇ ಚಲನ್ ವ್ಯವಸ್ಥೆಯು ಈಗಾಗಲೇ ಬೆಂಗಳೂರಿನಲ್ಲಿ ಯಶಸ್ವಿಯಾಗಿದ್ದು, ಈಗ ಇದೇ ವ್ಯವಸ್ಥೆಯನ್ನ ರಾಜ್ಯಾದ್ಯಂತ ವಿಸ್ತರಿಸಲಾಗಿದೆ. ಹೆಲ್ಮೆಟ್ ರಹಿತ ಚಾಲನೆ, ಪಾನಮತ್ತ ವಾಹನ ಚಾಲನೆ ಸೇರಿದಂತೆ ವಿವಿಧ ಅಪರಾಧಗಳ ವಿರುದ್ಧ ಸಂಚಾರಿ ಸಿಬ್ಬಂದಿ ವಿಶೇಷ ಕಾರ್ಯಾಚರಣೆ ಕೈಗೊಂಡಾಗ ಇ-ಚಲನ್ ಮೂಲಕ ವಾಹನ ಸವಾರರಿಗೆ ದಂಡ ವಿಧಿಸಲಾಗುತ್ತದೆ. ವಾಹನ ಸವಾರರು ಏಳು ದಿನಗಳಲ್ಲಿ ವರ್ಚುಯಲ್ ​​ಆಗಿ ದಂಡವನ್ನು ಪಾವತಿಸುವ ಅವಕಾಶವಿರಲಿದೆ.

ಇ - ಚಲನ್ ವ್ಯವಸ್ಥೆಯನ್ನು ಅಳವಡಿಸುವುದರಿಂದ ಪಾರದರ್ಶಕತೆ ಮತ್ತು ನಿರ್ವಹಣೆಯೂ ಸಹ‌ ಡಿಜಟಲೀಕರಣವಾಗುತ್ತದೆ. ಇದರಿಂದ ಸಿಬ್ಬಂದಿ ಕೆಲಸವೂ ಸಹ ಕಡಿಮೆಯಾಗುತ್ತದೆ. ಬೆಂಗಳೂರಿನಲ್ಲಿ ವಾಹನ ಸವಾರರಿಗೆ ಈ ಬಗ್ಗೆ ಮಾಹಿತಿಯಿದೆ. ಈಗ ಅದೇ ವ್ಯವಸ್ಥೆಯನ್ನ ರಾಜ್ಯಾದ್ಯಂತ ಜಾರಿಗೊಳಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮತ್ತು ಸಂಚಾರ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಅಲೋಕ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಂಚಾರ ನಿಮಯ ಉಲ್ಲಂಘಿಸಿದವರಿಗೆ ಶಾಕ್: 50 ಸಾವಿರಕ್ಕೂ ಹೆಚ್ಚು ದಂಡದ ಮೊತ್ತ ದಾಟಿದವರ ಮನೆ ಬಾಗಿಲಿಗೆ ಪೊಲೀಸರು!

ಬೆಂಗಳೂರು: ರಾಜ್ಯದಲ್ಲಿ ಸಂಚಾರಿ ನಿಯಮ ಉಲ್ಲಂಘನೆಗೆ ರಶೀದಿ ಬರೆದು ಕೊಡುವ ವ್ಯವಸ್ಥೆಗೆ ಪೊಲೀಸ್ ಇಲಾಖೆ ಗುಡ್ ಬೈ ಹೇಳಿದೆ. ಇ-ಚಲನ್ ವ್ಯವಸ್ಥೆಗೆ ಬುಧವಾರ ಚಾಲನೆ ನೀಡಿದ್ದು, ರಾಜ್ಯಾದ್ಯಂತ ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಯನ್ನ ಸಂಪೂರ್ಣವಾಗಿ ಜಾರಿಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾದಂತಾಗಿದೆ.

ಏನಿದು ಇ ಚಲನ್ ವ್ಯವಸ್ಥೆ?: ಇ-ಚಲನ್ ಎಂಬುದು ಸಂಚಾರಿ ನಿಯಮಗಳ ಉಲ್ಲಂಘನೆ ಹಾಗೂ ದಂಡದ ವಿವರಗಳನ್ನೊಳಗೊಂಡ ಡಿಜಿಟಲ್ ದಾಖಲೆಯಾಗಿದ್ದು, ಇದನ್ನು ಪಡೆಯಲು ಸಂಚಾರಿ ಪೊಲೀಸ್ ಸಿಬ್ಬಂದಿ ನಿರ್ದಿಷ್ಟವಾದ ಸ್ವೈಪಿಂಗ್ ಸಾಧನ ಹೊಂದಿರಲಿದ್ದಾರೆ. ಸಂಚಾರ ನಿಯಮ ಉಲ್ಲಂಘನೆಗೆ ಇ-ಚಲನ್ ಮೂಲಕ ಚಲನ್ ಪಡೆದಾಗ ಪೊಲೀಸ್ ಇಲಾಖೆಯ ಸರ್ವರ್​​ನಲ್ಲಿಯೂ ಸಹ ಇದು ದಾಖಲಿಸಲ್ಪಡುತ್ತದೆ. ಇದರಿಂದಾಗಿ ಲಂಚ ಪಡೆದು ರಶೀದಿ ಕ್ಯಾನ್ಸಲ್ ಮಾಡಲು (ಹರಿದು ಹಾಕಲು) ಸಾಧ್ಯವಾಗುವುದಿಲ್ಲ. ಸಂಚಾರ ನಿರ್ವಹಣೆಯನ್ನು ಡಿಜಿಟಲೀಕರಣಗೊಳಿಸುವ ಹಾಗೂ ಪಾರದರ್ಶಕತೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಇದು ಕಾಗದ ರಹಿತ ಹಾಗೂ ಕೆಲಸವನ್ನ ತಗ್ಗಿಸಲಿದೆ.

ಸದ್ಯ ಈ ವ್ಯವಸ್ಥೆಗಾಗಿ ಎಸ್‌ಬಿಐ ಬ್ಯಾಂಕ್​ನೊಂದಿಗೆ ರಾಜ್ಯ ಪೊಲೀಸ್ ಇಲಾಖೆಯು ಒಪ್ಪಂದ ಮಾಡಿಕೊಂಡಿದ್ದು, ವಾಹನ ಸವಾರರು ಪಾವತಿಸುವ ಹಣ ನೇರವಾಗಿ ಇಲಾಖೆಯ ಅಧಿಕೃತ ಖಾತೆಗೆ ಜಮೆಯಾಗಲಿದೆ. ಈ ವ್ಯವಸ್ಥೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯಾದ್ಯಂತ 722 ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳು ಮತ್ತು 64 ಸಂಚಾರ ಠಾಣೆಗಳ ಪೊಲೀಸ್ ಸಿಬ್ಬಂದಿಗೆ 1,766 ಇ-ಚಲನ್​ ಯಂತ್ರಗಳನ್ನು ನೀಡಲಾಗಿದೆ. ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರು ಯುಪಿಐ, ಡೆಬಿಟ್ ಕಾರ್ಡ್ ಮತ್ತು ನಗದು ಪಾವತಿ ಸೇರಿದಂತೆ ವಿವಿಧ ವಿಧಾನಗಳ ಮೂಲಕ ದಂಡ ಪಾವತಿಸಬಹುದು.

ಇ ಚಲನ್ ವ್ಯವಸ್ಥೆಯು ಈಗಾಗಲೇ ಬೆಂಗಳೂರಿನಲ್ಲಿ ಯಶಸ್ವಿಯಾಗಿದ್ದು, ಈಗ ಇದೇ ವ್ಯವಸ್ಥೆಯನ್ನ ರಾಜ್ಯಾದ್ಯಂತ ವಿಸ್ತರಿಸಲಾಗಿದೆ. ಹೆಲ್ಮೆಟ್ ರಹಿತ ಚಾಲನೆ, ಪಾನಮತ್ತ ವಾಹನ ಚಾಲನೆ ಸೇರಿದಂತೆ ವಿವಿಧ ಅಪರಾಧಗಳ ವಿರುದ್ಧ ಸಂಚಾರಿ ಸಿಬ್ಬಂದಿ ವಿಶೇಷ ಕಾರ್ಯಾಚರಣೆ ಕೈಗೊಂಡಾಗ ಇ-ಚಲನ್ ಮೂಲಕ ವಾಹನ ಸವಾರರಿಗೆ ದಂಡ ವಿಧಿಸಲಾಗುತ್ತದೆ. ವಾಹನ ಸವಾರರು ಏಳು ದಿನಗಳಲ್ಲಿ ವರ್ಚುಯಲ್ ​​ಆಗಿ ದಂಡವನ್ನು ಪಾವತಿಸುವ ಅವಕಾಶವಿರಲಿದೆ.

ಇ - ಚಲನ್ ವ್ಯವಸ್ಥೆಯನ್ನು ಅಳವಡಿಸುವುದರಿಂದ ಪಾರದರ್ಶಕತೆ ಮತ್ತು ನಿರ್ವಹಣೆಯೂ ಸಹ‌ ಡಿಜಟಲೀಕರಣವಾಗುತ್ತದೆ. ಇದರಿಂದ ಸಿಬ್ಬಂದಿ ಕೆಲಸವೂ ಸಹ ಕಡಿಮೆಯಾಗುತ್ತದೆ. ಬೆಂಗಳೂರಿನಲ್ಲಿ ವಾಹನ ಸವಾರರಿಗೆ ಈ ಬಗ್ಗೆ ಮಾಹಿತಿಯಿದೆ. ಈಗ ಅದೇ ವ್ಯವಸ್ಥೆಯನ್ನ ರಾಜ್ಯಾದ್ಯಂತ ಜಾರಿಗೊಳಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮತ್ತು ಸಂಚಾರ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಅಲೋಕ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಂಚಾರ ನಿಮಯ ಉಲ್ಲಂಘಿಸಿದವರಿಗೆ ಶಾಕ್: 50 ಸಾವಿರಕ್ಕೂ ಹೆಚ್ಚು ದಂಡದ ಮೊತ್ತ ದಾಟಿದವರ ಮನೆ ಬಾಗಿಲಿಗೆ ಪೊಲೀಸರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.