ETV Bharat / state

ಶಿವಮೊಗ್ಗ : ಪಂಚಭೂತದಲ್ಲಿ ಲೀನನಾದ ಯೋಧ ಮಂಜುನಾಥ್ - SOLDIER MANJUNATH CREMATION

ಶುಕ್ರವಾರ ಯುದ್ಧ ವಿಮಾನದಿಂದ ಜಂಪ್ ಮಾಡುವ ತರಬೇತಿ ನೀಡುವಾಗ ಮಂಜುನಾಥ್ ಅವರ ಪ್ಯಾರಚೂಟ್ ಸಮಯಕ್ಕೆ ತೆರೆಯದೆ ಸುಮಾರು 1500 ಅಡಿಯಿಂದ ಬಿದ್ದು ಸಾವನ್ನಪ್ಪಿದ್ದರು.

Soldier Manjunath cremation
ಯೋಧ ಮಂಜುನಾಥ್ ಅಂತ್ಯಕ್ರಿಯೆ (ETV Bharat)
author img

By ETV Bharat Karnataka Team

Published : Feb 9, 2025, 7:35 PM IST

Updated : Feb 9, 2025, 8:56 PM IST

ಶಿವಮೊಗ್ಗ: ತರಬೇತಿ ನೀಡುವ ವೇಳೆ ಪ್ಯಾರಚೂಟ್ ತೆರೆಯದೆ ಸಾವನ್ನಪ್ಪಿದ್ದ ಕರ್ತವ್ಯನಿರತ ವಾಯುಸೇನೆಯ ಅಧಿಕಾರಿ‌ ಮಂಜುನಾಥ್ (36) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಭಾನುವಾರ ಹುಟ್ಟೂರು‌ ಸಂಕೂರು ಗ್ರಾಮದಲ್ಲಿ ನಡೆಯಿತು.

ಹೊಸನಗರ ತಾಲೂಕು ಸಂಕೂರು ಗ್ರಾಮದ ಮಂಜುನಾಥ್ ಅವರು ಕಳೆದ 16 ವರ್ಷಗಳಿಂದ ಭಾರತೀಯ ವಾಯುಸೇನೆಯಲ್ಲಿ ಕರ್ತವ್ಯ‌ ನಿರ್ವಹಿಸುತ್ತಿದ್ದರು. ಶುಕ್ರವಾರ ಆಗ್ರಾದ ವಾಯುಸೇನಾ ನೆಲೆಯಲ್ಲಿ ಯುದ್ಧ ವಿಮಾನದಿಂದ ಜಂಪ್ ಮಾಡುವ ತರಬೇತಿ ನೀಡುವಾಗ ಮಂಜುನಾಥ್ ಅವರ ಪ್ಯಾರಚೂಟ್ ಸಮಯಕ್ಕೆ ತೆರೆಯದೆ ಸುಮಾರು 1500 ಅಡಿಯಿಂದ ಬಿದ್ದು ಸಾವನ್ನಪ್ಪಿದ್ದರು.

ಯೋಧ ಮಂಜುನಾಥ್ ಅಂತ್ಯಕ್ರಿಯೆ (ETV Bharat)

ಇಂದು ಬೆಳಗ್ಗೆ ಶಿವಮೊಗ್ಗಕ್ಕೆ ಮಂಜುನಾಥ್​ ಅವರ ಮೃತದೇಹ ಆಗಮಿಸಿದ್ದು, ಬೆಂಗಳೂರು ವಾಯುನೆಲೆಯ ಅಧಿಕಾರಿಗಳು ಅವರ ಶವವನ್ನು ತಂದರು. ಈ ವೇಳೆ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಎಸ್. ಎನ್. ಚನ್ನಬಸಪ್ಪ ಸೇರಿದಂತೆ ಬಿಜೆಪಿಯ ಮುಖಂಡರು ಗೌರವ ನಮನ ಸಲ್ಲಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಿಲ್ಲಾಧಿಕಾರಿ ಹಾಗೂ ಇತರೆ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು. ನಂತರ ಸೈನಿಕ ಅಧಿಕಾರಿಗಳು ಪಾರ್ಥಿವ ಶರೀರವನ್ನು ಸಂಕೂರಿಗೆ ತೆಗೆದುಕೊಂಡು ಹೋದರು. ಹೊಸನಗರದಲ್ಲಿ ಶಾಲಾ ಮಕ್ಕಳು ಸೇರಿದಂತೆ ನಾಗರಿಕರು ತಮ್ಮ ತಾಲೂಕಿನ ಯೋಧ ಮಂಜುನಾಥ್ ಅವರಿಗೆ ಅಶ್ರು ನಮನ ಸಲ್ಲಿಸಿದರು.

ನಂತರ ಮಂಜುನಾಥ್ ಅವರ ಹುಟ್ಟೂರು ಸಂಕೂರಿಗೆ ಮೃತದೇಹ ತೆಗೆದುಕೊಂಡು ಬರಲಾಯಿತು. ಇಲ್ಲಿ ಭಾರತೀಯ ವಾಯುಸೇನೆಯ ಅಧಿಕಾರಿಗಳು ಮಂಜುನಾಥ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಪೊಲೀಸ್ ಇಲಾಖೆಯ ಕುಶಾಲತೋಪು ಹಾರಿಸುವ ಮೂಲಕ ಸರ್ಕಾರಿ ಗೌರವ ವಂದನೆ ಸಲ್ಲಿಸಿದರು.

ನಂತರ ಅವರ ಪತ್ನಿಗೆ ರಾಷ್ಟ್ರಧ್ವಜ ಹಸ್ತಾಂತರಿಸಲಾಯಿತು. ಈ ವೇಳೆ ಪತ್ನಿ, ಕುಟುಂಬಸ್ಥರ ದುಃಖದ ಕಟ್ಟೆ ಒಡೆದಿತ್ತು. ನೆರೆದಿದ್ದವರ ಕಣ್ಣುಗಳು ತೇವವಾದವು. ಮಂಜುನಾಥ್ ಅವರ ಸಹೋದರ ಯುವರಾಜ್ ಅವರು ತನ್ನ ಸಹೋದರನ ಅಂತಿಮ ವಿಧಿ ವಿಧಾನ ನಡೆಸಿದರು. ಯೋಧ ಮಂಜುನಾಥ್ ಪಂಚಭೂತದಲ್ಲಿ ಲೀನನಾದರು. ಈ ವೇಳೆ ಸಾಗರದ ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಶಾಸಕ ಹಾಲಪ್ಪ‌ ಹರತಾಳು ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.

ಇದನ್ನೂ ಓದಿ: ತರಬೇತಿ ವೇಳೆ ತೆರೆದುಕೊಳ್ಳದ ಪ್ಯಾರಾಚ್ಯೂಟ್: ಶಿವಮೊಗ್ಗದ IAF ಯೋಧ ಸಾವು

ಶಿವಮೊಗ್ಗ: ತರಬೇತಿ ನೀಡುವ ವೇಳೆ ಪ್ಯಾರಚೂಟ್ ತೆರೆಯದೆ ಸಾವನ್ನಪ್ಪಿದ್ದ ಕರ್ತವ್ಯನಿರತ ವಾಯುಸೇನೆಯ ಅಧಿಕಾರಿ‌ ಮಂಜುನಾಥ್ (36) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಭಾನುವಾರ ಹುಟ್ಟೂರು‌ ಸಂಕೂರು ಗ್ರಾಮದಲ್ಲಿ ನಡೆಯಿತು.

ಹೊಸನಗರ ತಾಲೂಕು ಸಂಕೂರು ಗ್ರಾಮದ ಮಂಜುನಾಥ್ ಅವರು ಕಳೆದ 16 ವರ್ಷಗಳಿಂದ ಭಾರತೀಯ ವಾಯುಸೇನೆಯಲ್ಲಿ ಕರ್ತವ್ಯ‌ ನಿರ್ವಹಿಸುತ್ತಿದ್ದರು. ಶುಕ್ರವಾರ ಆಗ್ರಾದ ವಾಯುಸೇನಾ ನೆಲೆಯಲ್ಲಿ ಯುದ್ಧ ವಿಮಾನದಿಂದ ಜಂಪ್ ಮಾಡುವ ತರಬೇತಿ ನೀಡುವಾಗ ಮಂಜುನಾಥ್ ಅವರ ಪ್ಯಾರಚೂಟ್ ಸಮಯಕ್ಕೆ ತೆರೆಯದೆ ಸುಮಾರು 1500 ಅಡಿಯಿಂದ ಬಿದ್ದು ಸಾವನ್ನಪ್ಪಿದ್ದರು.

ಯೋಧ ಮಂಜುನಾಥ್ ಅಂತ್ಯಕ್ರಿಯೆ (ETV Bharat)

ಇಂದು ಬೆಳಗ್ಗೆ ಶಿವಮೊಗ್ಗಕ್ಕೆ ಮಂಜುನಾಥ್​ ಅವರ ಮೃತದೇಹ ಆಗಮಿಸಿದ್ದು, ಬೆಂಗಳೂರು ವಾಯುನೆಲೆಯ ಅಧಿಕಾರಿಗಳು ಅವರ ಶವವನ್ನು ತಂದರು. ಈ ವೇಳೆ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಎಸ್. ಎನ್. ಚನ್ನಬಸಪ್ಪ ಸೇರಿದಂತೆ ಬಿಜೆಪಿಯ ಮುಖಂಡರು ಗೌರವ ನಮನ ಸಲ್ಲಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಿಲ್ಲಾಧಿಕಾರಿ ಹಾಗೂ ಇತರೆ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು. ನಂತರ ಸೈನಿಕ ಅಧಿಕಾರಿಗಳು ಪಾರ್ಥಿವ ಶರೀರವನ್ನು ಸಂಕೂರಿಗೆ ತೆಗೆದುಕೊಂಡು ಹೋದರು. ಹೊಸನಗರದಲ್ಲಿ ಶಾಲಾ ಮಕ್ಕಳು ಸೇರಿದಂತೆ ನಾಗರಿಕರು ತಮ್ಮ ತಾಲೂಕಿನ ಯೋಧ ಮಂಜುನಾಥ್ ಅವರಿಗೆ ಅಶ್ರು ನಮನ ಸಲ್ಲಿಸಿದರು.

ನಂತರ ಮಂಜುನಾಥ್ ಅವರ ಹುಟ್ಟೂರು ಸಂಕೂರಿಗೆ ಮೃತದೇಹ ತೆಗೆದುಕೊಂಡು ಬರಲಾಯಿತು. ಇಲ್ಲಿ ಭಾರತೀಯ ವಾಯುಸೇನೆಯ ಅಧಿಕಾರಿಗಳು ಮಂಜುನಾಥ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಪೊಲೀಸ್ ಇಲಾಖೆಯ ಕುಶಾಲತೋಪು ಹಾರಿಸುವ ಮೂಲಕ ಸರ್ಕಾರಿ ಗೌರವ ವಂದನೆ ಸಲ್ಲಿಸಿದರು.

ನಂತರ ಅವರ ಪತ್ನಿಗೆ ರಾಷ್ಟ್ರಧ್ವಜ ಹಸ್ತಾಂತರಿಸಲಾಯಿತು. ಈ ವೇಳೆ ಪತ್ನಿ, ಕುಟುಂಬಸ್ಥರ ದುಃಖದ ಕಟ್ಟೆ ಒಡೆದಿತ್ತು. ನೆರೆದಿದ್ದವರ ಕಣ್ಣುಗಳು ತೇವವಾದವು. ಮಂಜುನಾಥ್ ಅವರ ಸಹೋದರ ಯುವರಾಜ್ ಅವರು ತನ್ನ ಸಹೋದರನ ಅಂತಿಮ ವಿಧಿ ವಿಧಾನ ನಡೆಸಿದರು. ಯೋಧ ಮಂಜುನಾಥ್ ಪಂಚಭೂತದಲ್ಲಿ ಲೀನನಾದರು. ಈ ವೇಳೆ ಸಾಗರದ ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಶಾಸಕ ಹಾಲಪ್ಪ‌ ಹರತಾಳು ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.

ಇದನ್ನೂ ಓದಿ: ತರಬೇತಿ ವೇಳೆ ತೆರೆದುಕೊಳ್ಳದ ಪ್ಯಾರಾಚ್ಯೂಟ್: ಶಿವಮೊಗ್ಗದ IAF ಯೋಧ ಸಾವು

Last Updated : Feb 9, 2025, 8:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.