ETV Bharat / state

ರಾಯಚೂರು: ಜಮೀನಿಗಾಗಿ ಹೊಡೆದಾಡಿಕೊಂಡ ದಾಯಾದಿಗಳು, ಕೊಡಲಿ ಏಟಿಗೆ ಸಹೋದರ ಬಲಿ - PROPERTY FIGHT - PROPERTY FIGHT

ಜಮೀನು ವಿಚಾರಕ್ಕೆ ನಡೆದ ಅಣ್ಣ-ತಮ್ಮಂದಿರ ಹೊಡೆದಾಟದಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ. ಈ ಘಟನೆ ಸಂಬಂಧ ದೂರು ಪ್ರತಿ ದೂರು ದಾಖಲಾಗಿವೆ.

FIGHTING BETWEEN BROTHERS FOR LAND  LAND ISSUE  MURDER ALLEGATION  RAICHUR
ಕೊಡಲಿ ಏಟಿಗೆ ಸಹೋದರ ಬಲಿ
author img

By ETV Bharat Karnataka Team

Published : Apr 2, 2024, 1:20 PM IST

ರಾಯಚೂರು: ಜಿಲ್ಲೆಯಲ್ಲಿ ದುರಂತ ಘಟನೆಯೊಂದು ನಡೆದಿದೆ. ಕೇವಲ ಎರಡು ಎಕರೆ ಜಮೀನಿಗಾಗಿ ದಾಯಾದಿಗಳ ಮಧ್ಯೆ ಹೊಡೆದಾಟ ನಡೆದಿದ್ದು, ವ್ಯಕ್ತಿಯೊಬ್ಬರ ಪ್ರಾಣವೇ ಹಾರಿ ಹೋಗಿದೆ. ಈ ಘಟನೆ ಜಿಲ್ಲೆಯ ಜೀನೂರು ಗ್ರಾಮದಲ್ಲಿ ನಡೆದಿದೆ. ಅಷ್ಟೇ ಅಲ್ಲ ದೂರು ಪ್ರತಿ ದೂರು ಸಹ ದಾಖಲಾಗಿವೆ.

ಏನಿದು ಘಟನೆ: ಜಿಲ್ಲೆಯ ಮಾನವಿ ತಾಲೂಕಿನ ಜೀನೂರು ಗ್ರಾಮದಲ್ಲಿ 2 ಎಕರೆ 10 ಗುಂಟೆ ಜಮೀನು ವಿಚಾರಕ್ಕೆ ಬಹಗಳ ದಿನಗಳಿಂದ ಅಣ್ಣ-ತಮ್ಮಂದಿರ‌ ಮಧ್ಯೆ ಜಗಳ ನಡೆಯುತ್ತಿತ್ತು. ಇವರ ಜಗಳ ವಿಕೋಪಕ್ಕೆ ತಿರುಗಿದ್ದು, ಕಟ್ಟಿಗೆ ಮತ್ತು ಕೊಡಲಿಯಿಂದ ಹೊಲದಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯಲ್ಲಿ ಕೊಡಲಿ ಏಟಿನಿಂದ ತೀವ್ರವಾಗಿ ಗಾಯಗೊಂಡಿದ್ದ 36 ವರ್ಷದ ರಾಮಣ್ಣ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾನೆ.

ರಾಮಣ್ಣನನ್ನು ಕೊಲೆ ಮಾಡಿದ್ದಾರೆಂದು ಆರೋಪಿಸಿ ಮೂಕಯ್ಯ ಅಲಿಯಾಸ್ ಮುದುಕಯ್ಯ, ನಿಂಗಪ್ಪ, ಮಹೇಶ್, ಸೋಮು, ಶಿವು ಅಲಿಯಾಸ್ ಮೂಕಯ್ಯ, ಲಕ್ಷ್ಮಿ, ನಿಲ್ಲಮ್ಮ, ಸರಸ್ವತಿ ಎಂಬುವರ ಮೇಲೆ ಮಾನವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇದಕ್ಕೆ ಪ್ರತಿ ದೂರು ಸಹ ಮಾನವಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ‌.

ಓದಿ: ತೀರ್ಥಹಳ್ಳಿ: ತುಂಗಾ ನದಿಗೆ ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲು - boys drown in Tunga

ರಾಯಚೂರು: ಜಿಲ್ಲೆಯಲ್ಲಿ ದುರಂತ ಘಟನೆಯೊಂದು ನಡೆದಿದೆ. ಕೇವಲ ಎರಡು ಎಕರೆ ಜಮೀನಿಗಾಗಿ ದಾಯಾದಿಗಳ ಮಧ್ಯೆ ಹೊಡೆದಾಟ ನಡೆದಿದ್ದು, ವ್ಯಕ್ತಿಯೊಬ್ಬರ ಪ್ರಾಣವೇ ಹಾರಿ ಹೋಗಿದೆ. ಈ ಘಟನೆ ಜಿಲ್ಲೆಯ ಜೀನೂರು ಗ್ರಾಮದಲ್ಲಿ ನಡೆದಿದೆ. ಅಷ್ಟೇ ಅಲ್ಲ ದೂರು ಪ್ರತಿ ದೂರು ಸಹ ದಾಖಲಾಗಿವೆ.

ಏನಿದು ಘಟನೆ: ಜಿಲ್ಲೆಯ ಮಾನವಿ ತಾಲೂಕಿನ ಜೀನೂರು ಗ್ರಾಮದಲ್ಲಿ 2 ಎಕರೆ 10 ಗುಂಟೆ ಜಮೀನು ವಿಚಾರಕ್ಕೆ ಬಹಗಳ ದಿನಗಳಿಂದ ಅಣ್ಣ-ತಮ್ಮಂದಿರ‌ ಮಧ್ಯೆ ಜಗಳ ನಡೆಯುತ್ತಿತ್ತು. ಇವರ ಜಗಳ ವಿಕೋಪಕ್ಕೆ ತಿರುಗಿದ್ದು, ಕಟ್ಟಿಗೆ ಮತ್ತು ಕೊಡಲಿಯಿಂದ ಹೊಲದಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯಲ್ಲಿ ಕೊಡಲಿ ಏಟಿನಿಂದ ತೀವ್ರವಾಗಿ ಗಾಯಗೊಂಡಿದ್ದ 36 ವರ್ಷದ ರಾಮಣ್ಣ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾನೆ.

ರಾಮಣ್ಣನನ್ನು ಕೊಲೆ ಮಾಡಿದ್ದಾರೆಂದು ಆರೋಪಿಸಿ ಮೂಕಯ್ಯ ಅಲಿಯಾಸ್ ಮುದುಕಯ್ಯ, ನಿಂಗಪ್ಪ, ಮಹೇಶ್, ಸೋಮು, ಶಿವು ಅಲಿಯಾಸ್ ಮೂಕಯ್ಯ, ಲಕ್ಷ್ಮಿ, ನಿಲ್ಲಮ್ಮ, ಸರಸ್ವತಿ ಎಂಬುವರ ಮೇಲೆ ಮಾನವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇದಕ್ಕೆ ಪ್ರತಿ ದೂರು ಸಹ ಮಾನವಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ‌.

ಓದಿ: ತೀರ್ಥಹಳ್ಳಿ: ತುಂಗಾ ನದಿಗೆ ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲು - boys drown in Tunga

ETV Bharat Logo

Copyright © 2025 Ushodaya Enterprises Pvt. Ltd., All Rights Reserved.