ETV Bharat / state

ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ಅಧಿಕಾರ ನಿಗದಿಯಂತೆ ಮುಂದುವರೆಯಲಿ: ಹೈಕೋರ್ಟ್ - High Court

ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ಅಧಿಕಾರ ನಿಗದಿಯಂತೆ ಮುಂದುವರೆಯುವಂತೆ ಹೈಕೋರ್ಟ್​ ಆದೇಶ ಮಾಡಿದೆ. ತಮ್ಮನ್ನು ಹುದ್ದೆಯಿಂದ ಅನರ್ಹಗೊಳಿರುವುದನ್ನು ಪ್ರಶ್ನಿಸಿ, ಕೆಎಸ್‌ಪಿಸಿಬಿ ಅಧ್ಯಕ್ಷರು ಹೈಕೋರ್ಟ್​ ಮೊರೆ ಹೋಗಿದ್ದರು.

author img

By ETV Bharat Karnataka Team

Published : 3 hours ago

high court
ಹೈಕೋರ್ಟ್ (ETV Bharat)

ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷ ಡಾ.ಶಾಂತ್ ಎ.ತಿಮ್ಮಯ್ಯಗೆ ನಿಗದಿಯಂತೆ 2024ರ ನವೆಂಬರ್ 14ರವರೆಗೆ ಅಧಿಕಾರದಲ್ಲಿ ಮುಂದುವರೆಯಲು ಹೈಕೋರ್ಟ್ ಅನುಮತಿ ನೀಡಿದೆ.

ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿಯು 2024ರ ಮೇ 31ರಂದು ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸುವುದು ಮತ್ತು ಕೆಎಸ್‌ಪಿಸಿಬಿ ಅಧ್ಯಕ್ಷ ಮತ್ತು ತಾಂತ್ರಿಕ ಸದಸ್ಯರಾಗಿ ಮುಂದುವರೆಯಲು ಅನುಮತಿಸಬೇಕು ಎಂದು ಕೋರಿ ಶಾಂತ್ ತಿಮ್ಮಯ್ಯ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಮೊದಲಿಗೆ ಕೆಎಸ್‌ಪಿಸಿಬಿ ಸದಸ್ಯತ್ವದಿಂದ ಶಾಂತ್ ತಿಮ್ಮಯ್ಯ ಅವರನ್ನು ಅನರ್ಹಗೊಳಿಸಲಾಗಿದ್ದು, ಆನಂತರ ಜಲ ಕಾಯಿದೆ ಸೆಕ್ಷನ್ 6(2)ರ ಅನ್ವಯ ಅಧ್ಯಕ್ಷ ಹುದ್ದೆಯಿಂದ ವಜಾ ಮಾಡಿರುವುದು ಸ್ವಾಭಾವಿಕ ನ್ಯಾಯ ತತ್ವಕ್ಕೆ ವಿರುದ್ಧವಾಗಿದೆ. ಆರೋಪ ನಿಗದಿ ಮಾಡದೇ ಮತ್ತು ಅವರ ವಾದ ಆಲಿಸದೇ, ಅವರನ್ನು ಹುದ್ದೆಯಿಂದ ವಜಾಗೊಳಿಸಿರುವುದು ನ್ಯಾಯ ಸಮ್ಮತವಲ್ಲ ಎಂದು ಪೀಠ ತಿಳಿಸಿದೆ.

ಅರ್ಜಿದಾರರ ಅವಧಿಯು ನವೆಂಬರ್ 11ರಂದು ಕೊನೆಗೊಳ್ಳಲಿದೆ. ಒಂದು ತಿಂಗಳು 10 ದಿನಗಳು ಮಾತ್ರ ಬಾಕಿ ಇರುವುದರಿಂದ ಹೆಚ್ಚಿನ ಅಭಿಪ್ರಾಯ ವ್ಯಕ್ತಪಡಿಸಲಾಗಿಲ್ಲ. 2021ರ ನವೆಂಬರ್ 11ರ ಅಧಿಸೂಚನೆ ಪ್ರಕಾರ ಅವರು ಕೆಎಸ್‌ಪಿಸಿಬಿ ಸದಸ್ಯ ಮತ್ತು ಅಧ್ಯಕ್ಷರಾಗಿರಲಿದ್ದಾರೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ: 2020ರ ಮೇ 21ರಂದು ಕೆಎಸ್‌ಪಿಸಿಬಿಯ ಶೋಧನಾ ಮತ್ತು ಆಯ್ಕೆ ಸಮಿತಿಯು ಅಧ್ಯಕ್ಷ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. 106 ಅರ್ಜಿದಾರರ ಪೈಕಿ ಶಾಂತ್ ತಿಮ್ಮಯ್ಯ ಅವರನ್ನು ಮುಖ್ಯಮಂತ್ರಿ, ಅರಣ್ಯ ಸಚಿವರು ಮತ್ತು ಮುಖ್ಯ ಕಾರ್ಯದರ್ಶಿ ಅವರನ್ನು ಒಳಗೊಂಡ ಶೋಧ ಮತ್ತು ಆಯ್ಕೆ ಸಮಿತಿಯು 2021ರ ಸೆಪ್ಟೆಂಬರ್ 11ರಂದು ನಾಮ ನಿರ್ದೇಶನ ಮಾಡಿತ್ತು. 2021ರ ನವೆಂಬರ್ 11ರಂದು ಕೆಎಸ್‌ಪಿಸಿಬಿ ಅಧ್ಯಕ್ಷರನ್ನಾಗಿ ಮೂರು ವರ್ಷಗಳಿಗೆ ಅಂದರೆ 2024ರ ನವೆಂಬರ್ 11ರವರೆಗೆ ನೇಮಕ ಮಾಡಿ ಅಧಿಸೂಚನೆ ಹೊರಡಿಸಲಾಗಿತ್ತು.

ಆದರೆ, 2023ರ ಜುಲೈ 15ರಂದು ಶೋಕಾಸ್ ನೋಟಿಸ್ ನೀಡಲಾಗಿತ್ತು. ಆನಂತರ 2023ರ ಆಗಸ್ಟ್ 31ರಂದು ಶಾಂತ್ ತಿಮ್ಮಯ್ಯ ಅಧಿಕಾರಾವಧಿ ಕಡಿತಗೊಳಿಸಿ ತಿದ್ದುಪಡಿ ಆದೇಶ ಪ್ರಕಟಿಸಿತ್ತು. ಇದನ್ನು ಪ್ರಶ್ನಿಸಿ ಶಾಂತ್ ತಿಮ್ಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿತ್ತು. ಆನಂತರ ಸುಪ್ರೀಂಕೋರ್ಟ್‌ನಲ್ಲಿಯೂ ಶಾಂತ್ ತಿಮ್ಮಯ್ಯ ಅಧಿಕಾರಾವಧಿ 2024ರ ನವೆಂಬರ್ 14ರವರೆಗೆ ಇರಲಿದೆ ಎಂದು ಹೇಳಲಾಗಿತ್ತು.

ಅದಾಗ್ಯೂ, ರಾಜ್ಯ ಸರ್ಕಾರವು ಶಾಂತ್ ತಿಮ್ಮಯ್ಯಗೆ ಮೂರು ಶೋಕಾಸ್ ನೋಟಿಸ್ ನೀಡಿತ್ತು. ಮೊದಲ ಎರಡು ಶೋಕಾಸ್ ನೋಟಿಸ್‌ಗಳನ್ನು ಜಲ ಕಾಯಿದೆ ಅಡಿ ನೀಡಲಾಗಿತ್ತು. ಇಲ್ಲಿ ಸಕಾರಣವಿಲ್ಲದೇ ಆರೋಪಗಳನ್ನು ಒಳಗೊಂಡ ನೋಟಿಸ್ ಕೊಡಲಾಗಿತ್ತು. ಆನಂತರ ಶಾಂತ್ ತಿಮ್ಮಯ್ಯರನ್ನು ಸದಸ್ಯತ್ವ ಮತ್ತು ಅಧ್ಯಕ್ಷ ಹುದ್ದೆಯಿಂದ ವಜಾ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: 85 ವರ್ಷದ ವೃದ್ದೆಗೆ ವರ್ಷಕ್ಕೆ ತಲಾ ₹7 ಲಕ್ಷ ಪಾವತಿಸಲು ಹೈಕೋರ್ಟ್ ಸೂಚನೆ - High Court

ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷ ಡಾ.ಶಾಂತ್ ಎ.ತಿಮ್ಮಯ್ಯಗೆ ನಿಗದಿಯಂತೆ 2024ರ ನವೆಂಬರ್ 14ರವರೆಗೆ ಅಧಿಕಾರದಲ್ಲಿ ಮುಂದುವರೆಯಲು ಹೈಕೋರ್ಟ್ ಅನುಮತಿ ನೀಡಿದೆ.

ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿಯು 2024ರ ಮೇ 31ರಂದು ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸುವುದು ಮತ್ತು ಕೆಎಸ್‌ಪಿಸಿಬಿ ಅಧ್ಯಕ್ಷ ಮತ್ತು ತಾಂತ್ರಿಕ ಸದಸ್ಯರಾಗಿ ಮುಂದುವರೆಯಲು ಅನುಮತಿಸಬೇಕು ಎಂದು ಕೋರಿ ಶಾಂತ್ ತಿಮ್ಮಯ್ಯ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಮೊದಲಿಗೆ ಕೆಎಸ್‌ಪಿಸಿಬಿ ಸದಸ್ಯತ್ವದಿಂದ ಶಾಂತ್ ತಿಮ್ಮಯ್ಯ ಅವರನ್ನು ಅನರ್ಹಗೊಳಿಸಲಾಗಿದ್ದು, ಆನಂತರ ಜಲ ಕಾಯಿದೆ ಸೆಕ್ಷನ್ 6(2)ರ ಅನ್ವಯ ಅಧ್ಯಕ್ಷ ಹುದ್ದೆಯಿಂದ ವಜಾ ಮಾಡಿರುವುದು ಸ್ವಾಭಾವಿಕ ನ್ಯಾಯ ತತ್ವಕ್ಕೆ ವಿರುದ್ಧವಾಗಿದೆ. ಆರೋಪ ನಿಗದಿ ಮಾಡದೇ ಮತ್ತು ಅವರ ವಾದ ಆಲಿಸದೇ, ಅವರನ್ನು ಹುದ್ದೆಯಿಂದ ವಜಾಗೊಳಿಸಿರುವುದು ನ್ಯಾಯ ಸಮ್ಮತವಲ್ಲ ಎಂದು ಪೀಠ ತಿಳಿಸಿದೆ.

ಅರ್ಜಿದಾರರ ಅವಧಿಯು ನವೆಂಬರ್ 11ರಂದು ಕೊನೆಗೊಳ್ಳಲಿದೆ. ಒಂದು ತಿಂಗಳು 10 ದಿನಗಳು ಮಾತ್ರ ಬಾಕಿ ಇರುವುದರಿಂದ ಹೆಚ್ಚಿನ ಅಭಿಪ್ರಾಯ ವ್ಯಕ್ತಪಡಿಸಲಾಗಿಲ್ಲ. 2021ರ ನವೆಂಬರ್ 11ರ ಅಧಿಸೂಚನೆ ಪ್ರಕಾರ ಅವರು ಕೆಎಸ್‌ಪಿಸಿಬಿ ಸದಸ್ಯ ಮತ್ತು ಅಧ್ಯಕ್ಷರಾಗಿರಲಿದ್ದಾರೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ: 2020ರ ಮೇ 21ರಂದು ಕೆಎಸ್‌ಪಿಸಿಬಿಯ ಶೋಧನಾ ಮತ್ತು ಆಯ್ಕೆ ಸಮಿತಿಯು ಅಧ್ಯಕ್ಷ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. 106 ಅರ್ಜಿದಾರರ ಪೈಕಿ ಶಾಂತ್ ತಿಮ್ಮಯ್ಯ ಅವರನ್ನು ಮುಖ್ಯಮಂತ್ರಿ, ಅರಣ್ಯ ಸಚಿವರು ಮತ್ತು ಮುಖ್ಯ ಕಾರ್ಯದರ್ಶಿ ಅವರನ್ನು ಒಳಗೊಂಡ ಶೋಧ ಮತ್ತು ಆಯ್ಕೆ ಸಮಿತಿಯು 2021ರ ಸೆಪ್ಟೆಂಬರ್ 11ರಂದು ನಾಮ ನಿರ್ದೇಶನ ಮಾಡಿತ್ತು. 2021ರ ನವೆಂಬರ್ 11ರಂದು ಕೆಎಸ್‌ಪಿಸಿಬಿ ಅಧ್ಯಕ್ಷರನ್ನಾಗಿ ಮೂರು ವರ್ಷಗಳಿಗೆ ಅಂದರೆ 2024ರ ನವೆಂಬರ್ 11ರವರೆಗೆ ನೇಮಕ ಮಾಡಿ ಅಧಿಸೂಚನೆ ಹೊರಡಿಸಲಾಗಿತ್ತು.

ಆದರೆ, 2023ರ ಜುಲೈ 15ರಂದು ಶೋಕಾಸ್ ನೋಟಿಸ್ ನೀಡಲಾಗಿತ್ತು. ಆನಂತರ 2023ರ ಆಗಸ್ಟ್ 31ರಂದು ಶಾಂತ್ ತಿಮ್ಮಯ್ಯ ಅಧಿಕಾರಾವಧಿ ಕಡಿತಗೊಳಿಸಿ ತಿದ್ದುಪಡಿ ಆದೇಶ ಪ್ರಕಟಿಸಿತ್ತು. ಇದನ್ನು ಪ್ರಶ್ನಿಸಿ ಶಾಂತ್ ತಿಮ್ಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿತ್ತು. ಆನಂತರ ಸುಪ್ರೀಂಕೋರ್ಟ್‌ನಲ್ಲಿಯೂ ಶಾಂತ್ ತಿಮ್ಮಯ್ಯ ಅಧಿಕಾರಾವಧಿ 2024ರ ನವೆಂಬರ್ 14ರವರೆಗೆ ಇರಲಿದೆ ಎಂದು ಹೇಳಲಾಗಿತ್ತು.

ಅದಾಗ್ಯೂ, ರಾಜ್ಯ ಸರ್ಕಾರವು ಶಾಂತ್ ತಿಮ್ಮಯ್ಯಗೆ ಮೂರು ಶೋಕಾಸ್ ನೋಟಿಸ್ ನೀಡಿತ್ತು. ಮೊದಲ ಎರಡು ಶೋಕಾಸ್ ನೋಟಿಸ್‌ಗಳನ್ನು ಜಲ ಕಾಯಿದೆ ಅಡಿ ನೀಡಲಾಗಿತ್ತು. ಇಲ್ಲಿ ಸಕಾರಣವಿಲ್ಲದೇ ಆರೋಪಗಳನ್ನು ಒಳಗೊಂಡ ನೋಟಿಸ್ ಕೊಡಲಾಗಿತ್ತು. ಆನಂತರ ಶಾಂತ್ ತಿಮ್ಮಯ್ಯರನ್ನು ಸದಸ್ಯತ್ವ ಮತ್ತು ಅಧ್ಯಕ್ಷ ಹುದ್ದೆಯಿಂದ ವಜಾ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: 85 ವರ್ಷದ ವೃದ್ದೆಗೆ ವರ್ಷಕ್ಕೆ ತಲಾ ₹7 ಲಕ್ಷ ಪಾವತಿಸಲು ಹೈಕೋರ್ಟ್ ಸೂಚನೆ - High Court

ETV Bharat Logo

Copyright © 2024 Ushodaya Enterprises Pvt. Ltd., All Rights Reserved.