ETV Bharat / state

ಸರಗಳ್ಳನ ಚೇಸ್​​ ಮಾಡುವಾಗ ಮಧುಗಿರಿ ಪೊಲೀಸರಿದ್ದ ಕಾರು ಅಪಘಾತ: ಮೂವರಿಗೆ ಗಾಯ - Police Car Accident

author img

By ETV Bharat Karnataka Team

Published : 2 hours ago

ಆಂಧ್ರ ಪ್ರದೇಶಕ್ಕೆ ಸರಗಳ್ಳನ ಹಿಡಿಯಲು ತೆರಳಿದ್ದ ತುಮಕೂರು ಪೊಲೀಸರಿದ್ದ ಕಾರು ಅಪಘಾತಕ್ಕೀಡಾಗಿದೆ.

ಪೊಲೀಸರ ಕಾರು ಅಪಘಾತ
ಅಪಘಾತಕ್ಕೀಡಾದ ಕಾರು (ETV Bharat)

ತುಮಕೂರು: ಸರಗಳ್ಳನ ಚೇಸ್​​ ಮಾಡುತ್ತಿದ್ದಾಗ ಕಾರು ಅಪಘಾತವಾಗಿ ಮಧುಗಿರಿ ಠಾಣೆಯ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಆಂಧ್ರ ಪ್ರದೇಶದ ಮಣೂರು ಬಳಿ ಶನಿವಾರ ಘಟನೆ ನಡೆಯಿತು. ಅಪರಾಧ ವಿಭಾಗದ ಸಿಬ್ಬಂದಿಯಾದ ಪ್ರಕಾಶ್​, ಮುದ್ದರಾಜು ಹಾಗೂ ರಮೇಶ್ ಅವರಿಗೆ ಗಾಯಗಳಾಗಿವೆ.

ಶನಿವಾರ ಮಧುಗಿರಿ ಪಟ್ಟಣದಲ್ಲಿ ಮಹಿಳೆಯಿಂದ 70 ಗ್ರಾಂ ಚಿನ್ನದ ಸರ ಕದ್ದು ಆರೋಪಿ ಎಸ್ಕೇಪ್ ಆಗಿದ್ದ. ಸಂತ್ರಸ್ತ ಮಹಿಳೆ ಕೂಡಲೇ ಮಧುಗಿರಿ ಪೊಲೀಸ್​ ಠಾಣೆಗೆ ದೂರು ನೀಡಿದ್ದ‌‌ರು. ಕಳ್ಳನ ಜಾಡು ಹಿಡಿದು ಹೊರಟ ಪೊಲೀಸರು ಆತನನ್ನು ಹಿಡಿಯುವ ಭರದಲ್ಲಿ ವೇಗವಾಗಿ ಕಾರು ಚಲಾಯಿಸಿದ್ದಾರೆ. ಈ ವೇಳೆ ಸ್ಟೇರಿಂಗ್ ಲಾಕ್​ ಆಗಿ ಕಾರು ಪಲ್ಟಿಯಾಗಿದೆ. ಪರಿಣಾಮ ಮೂವರು ಗಾಯಗೊಂಡಿದ್ದಾರೆ.

ಗಾಯಾಳು ಪೊಲೀಸ್ ಸಿಬ್ಬಂದಿಗೆ ಆಂಧ್ರದ ಧರ್ಮಾವರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಧರ್ಮಾವರಂ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರು: 85 ಸಾವಿರ ರೂಪಾಯಿಗೆ ಸ್ನೇಹಿತನ ಹತ್ಯೆ - Nelamangala Murder Case

ತುಮಕೂರು: ಸರಗಳ್ಳನ ಚೇಸ್​​ ಮಾಡುತ್ತಿದ್ದಾಗ ಕಾರು ಅಪಘಾತವಾಗಿ ಮಧುಗಿರಿ ಠಾಣೆಯ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಆಂಧ್ರ ಪ್ರದೇಶದ ಮಣೂರು ಬಳಿ ಶನಿವಾರ ಘಟನೆ ನಡೆಯಿತು. ಅಪರಾಧ ವಿಭಾಗದ ಸಿಬ್ಬಂದಿಯಾದ ಪ್ರಕಾಶ್​, ಮುದ್ದರಾಜು ಹಾಗೂ ರಮೇಶ್ ಅವರಿಗೆ ಗಾಯಗಳಾಗಿವೆ.

ಶನಿವಾರ ಮಧುಗಿರಿ ಪಟ್ಟಣದಲ್ಲಿ ಮಹಿಳೆಯಿಂದ 70 ಗ್ರಾಂ ಚಿನ್ನದ ಸರ ಕದ್ದು ಆರೋಪಿ ಎಸ್ಕೇಪ್ ಆಗಿದ್ದ. ಸಂತ್ರಸ್ತ ಮಹಿಳೆ ಕೂಡಲೇ ಮಧುಗಿರಿ ಪೊಲೀಸ್​ ಠಾಣೆಗೆ ದೂರು ನೀಡಿದ್ದ‌‌ರು. ಕಳ್ಳನ ಜಾಡು ಹಿಡಿದು ಹೊರಟ ಪೊಲೀಸರು ಆತನನ್ನು ಹಿಡಿಯುವ ಭರದಲ್ಲಿ ವೇಗವಾಗಿ ಕಾರು ಚಲಾಯಿಸಿದ್ದಾರೆ. ಈ ವೇಳೆ ಸ್ಟೇರಿಂಗ್ ಲಾಕ್​ ಆಗಿ ಕಾರು ಪಲ್ಟಿಯಾಗಿದೆ. ಪರಿಣಾಮ ಮೂವರು ಗಾಯಗೊಂಡಿದ್ದಾರೆ.

ಗಾಯಾಳು ಪೊಲೀಸ್ ಸಿಬ್ಬಂದಿಗೆ ಆಂಧ್ರದ ಧರ್ಮಾವರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಧರ್ಮಾವರಂ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರು: 85 ಸಾವಿರ ರೂಪಾಯಿಗೆ ಸ್ನೇಹಿತನ ಹತ್ಯೆ - Nelamangala Murder Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.