ETV Bharat / state

ಹಾವೇರಿ ರಸ್ತೆ ಅಪಘಾತ: ಮೃತರ ಕುಟುಂಬಸ್ಥರಿಗೆ ಧನ ಸಹಾಯ ಮಾಡಿದ ಶಿವರಾಜ್​ಕುಮಾರ್ ದಂಪತಿ - financial support by shivarajkumar

ಶಿವರಾಜ್​ಕುಮಾರ್​ ದಂಪತಿ ಹಾವೇರಿ ಬಳಿ ನಡೆದಿದ್ದ ಭೀಕರ ಅಪಘಾತದಲ್ಲಿ ಮೃತಪಟ್ಟ ಭದ್ರಾವತಿಯ ಎಮ್ಮೆಹಟ್ಟಿ ಗ್ರಾಮದ 13 ಜನರ ಕುಟುಂಬಸ್ಥರೆಲ್ಲರಿಗೂ ಸೇರಿ 10 ಲಕ್ಷ ರೂ. ಪರಿಹಾರ ಮತ್ತು ಗಾಯಾಳುಗಳಿಬ್ಬರಿಗೆ ತಲಾ 1.50 ಲಕ್ಷ ಪರಿಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ.

author img

By ETV Bharat Karnataka Team

Published : Jul 8, 2024, 9:10 PM IST

Updated : Jul 8, 2024, 9:36 PM IST

ಧನ ಸಹಾಯ ಮಾಡಿದ ಶಿವರಾಜ್​ಕುಮಾರ್ ದಂಪತಿ
ಧನ ಸಹಾಯ ಮಾಡಿದ ಶಿವರಾಜ್​ಕುಮಾರ್ ದಂಪತಿ (ETV Bharat)
ಧನ ಸಹಾಯ ಮಾಡಿದ ಶಿವರಾಜ್​ಕುಮಾರ್ ದಂಪತಿ (ETV Bharat)

ಶಿವಮೊಗ್ಗ: ಹಾವೇರಿ ಬಳಿ ನಡೆದಿದ್ದ ಭೀಕರ ಅಪಘಾತದಲ್ಲಿ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದ 13 ಜನ ಮೃತಪಟ್ಟಿದ್ದರು. ಮೃತರ ಕುಟುಂಬಸ್ಥರಿಗೆ ವೈಯಕ್ತಿಕವಾಗಿ ತಲಾ ಒಂದು ಲಕ್ಷ ಪರಿಹಾರ ನೀಡುವುದಾಗಿ ನಟ ಶಿವರಾಜ್​ಕುಮಾರ್​ ದಂಪತಿ ಘೋಷಿಸಿದ್ದರು. ಅದರಂತೆ ಇಂದು ನಟ ಶಿವರಾಜ್​ಕುಮಾರ್​ ಹಾಗೂ ಗೀತಾ ಶಿವರಾಜ್​ಕುಮಾರ್ ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮೃತರ ಕುಟುಂಬಸ್ಥರೆಲ್ಲರಿಗೂ ಸೇರಿ 10 ಲಕ್ಷ ಹಾಗೂ ಗಾಯಾಳುಗಳಿಬ್ಬರಿಗೆ ತಲಾ 1.50 ಲಕ್ಷ ಪರಿಹಾರ ನೀಡಿದರು.

ಗೀತಾ ಶಿವರಾಜ್​ಕುಮಾರ್ ಮಾತನಾಡಿ, ಈ ರೀತಿಯ ದುರ್ಘಟನೆ ಕಂಡು ಬೇಸರವಾಯಿತು. ಆ ಕುಟುಂಬದವರಿಗೆ ಆಗಿರುವ ನಷ್ಟವನ್ನು ತುಂಬಲು ನಮಗೆ ಆಗುವುದಿಲ್ಲ. ಆ ಕುಟುಂಬಕ್ಕೆ ನಾವು ಧೈರ್ಯ ಹೇಳಲು ಬಂದಿದ್ದೇವೆ. ನಾನು, ಶಿವರಾಜ್​ಕುಮಾರ್ ಹಾಗೂ ಸಹೋದರ ಮಧು ಹಾಗೂ ನಮ್ಮ ಪಕ್ಷದವರು ಮುಂದೆಯೂ ಸಹ ಮೃತರ ಕುಟುಂಬಸ್ಥರಿಗೆ ಸಹಾಯ ಮಾಡುತ್ತೇವೆ. ಅವರೊಂದಿಗೆ ಮುಂದೆಯೂ ನಾವು ಇರುತ್ತೇವೆ. ಅಪಘಾತದಲ್ಲಿ ಗಾಯಗೊಂಡಿರುವ ಅರ್ಪಿತಾ ಅವರ ಜವಾಬ್ದಾರಿಯನ್ನು ಆಕೆಯ ದೊಡ್ಡಮ್ಮ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಅರ್ಪಿತಾಗೂ ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿದರು.

ನಟ ಶಿವರಾಜ್​ಕುಮಾರ್ ಮಾತನಾಡಿ, ನಾವು ಆ ಕುಟುಂಬಕ್ಕೆ ಸಹಾಯ ಮಾಡಬಹುದು. ಆದರೆ, ತಮ್ಮವರನ್ನು ಕಳೆದುಕೊಂಡ ಕುಟುಂಬಕ್ಕೆ ನಾವು ಏನೂ ಹೇಳುವುದಕ್ಕೆ ಆಗಲ್ಲ. ಯಾಕೆಂದರೆ ಅವರಿಗೆ ಆಗಿರುವ ನಷ್ಟವನ್ನು ಯಾರು ಭರಿಸುವುದಕ್ಕೆ ಆಗಲ್ಲ. ನಮ್ಮ ಕೈಯಲ್ಲಿ ಆದ ಸಹಾಯ ಮಾಡಿದ್ಧೇವೆ. ಗಾಯಾಳುಗಳು ಸಹ ಬೇಗ ಗುಣಮುಖರಾಗಬೇಕು ಎಂದು ಹಾರೈಸಿದರು.

ಈ ವೇಳೆ ಭದ್ರಾವತಿ ಶಾಸಕ ಸಂಗಮೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್, ಕಲಗೂಡು ರತ್ನಾಕರ್, ಮಂಜುನಾಥ್ ಸೇರಿದಂತೆ ಇತರರು ಇದ್ದರು.

ಇದನ್ನೂ ಓದಿ: ಶಿವಮೊಗ್ಗ: ಭದ್ರಾ ಡ್ಯಾಂ ಸ್ಲೀವ್ಸ್ ಗೇಟ್‌ ಸಂಪೂರ್ಣ ಬಂದ್​, ರೈತರ ಆತಂಕ ದೂರ - Bhadra Dam

ಧನ ಸಹಾಯ ಮಾಡಿದ ಶಿವರಾಜ್​ಕುಮಾರ್ ದಂಪತಿ (ETV Bharat)

ಶಿವಮೊಗ್ಗ: ಹಾವೇರಿ ಬಳಿ ನಡೆದಿದ್ದ ಭೀಕರ ಅಪಘಾತದಲ್ಲಿ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದ 13 ಜನ ಮೃತಪಟ್ಟಿದ್ದರು. ಮೃತರ ಕುಟುಂಬಸ್ಥರಿಗೆ ವೈಯಕ್ತಿಕವಾಗಿ ತಲಾ ಒಂದು ಲಕ್ಷ ಪರಿಹಾರ ನೀಡುವುದಾಗಿ ನಟ ಶಿವರಾಜ್​ಕುಮಾರ್​ ದಂಪತಿ ಘೋಷಿಸಿದ್ದರು. ಅದರಂತೆ ಇಂದು ನಟ ಶಿವರಾಜ್​ಕುಮಾರ್​ ಹಾಗೂ ಗೀತಾ ಶಿವರಾಜ್​ಕುಮಾರ್ ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮೃತರ ಕುಟುಂಬಸ್ಥರೆಲ್ಲರಿಗೂ ಸೇರಿ 10 ಲಕ್ಷ ಹಾಗೂ ಗಾಯಾಳುಗಳಿಬ್ಬರಿಗೆ ತಲಾ 1.50 ಲಕ್ಷ ಪರಿಹಾರ ನೀಡಿದರು.

ಗೀತಾ ಶಿವರಾಜ್​ಕುಮಾರ್ ಮಾತನಾಡಿ, ಈ ರೀತಿಯ ದುರ್ಘಟನೆ ಕಂಡು ಬೇಸರವಾಯಿತು. ಆ ಕುಟುಂಬದವರಿಗೆ ಆಗಿರುವ ನಷ್ಟವನ್ನು ತುಂಬಲು ನಮಗೆ ಆಗುವುದಿಲ್ಲ. ಆ ಕುಟುಂಬಕ್ಕೆ ನಾವು ಧೈರ್ಯ ಹೇಳಲು ಬಂದಿದ್ದೇವೆ. ನಾನು, ಶಿವರಾಜ್​ಕುಮಾರ್ ಹಾಗೂ ಸಹೋದರ ಮಧು ಹಾಗೂ ನಮ್ಮ ಪಕ್ಷದವರು ಮುಂದೆಯೂ ಸಹ ಮೃತರ ಕುಟುಂಬಸ್ಥರಿಗೆ ಸಹಾಯ ಮಾಡುತ್ತೇವೆ. ಅವರೊಂದಿಗೆ ಮುಂದೆಯೂ ನಾವು ಇರುತ್ತೇವೆ. ಅಪಘಾತದಲ್ಲಿ ಗಾಯಗೊಂಡಿರುವ ಅರ್ಪಿತಾ ಅವರ ಜವಾಬ್ದಾರಿಯನ್ನು ಆಕೆಯ ದೊಡ್ಡಮ್ಮ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಅರ್ಪಿತಾಗೂ ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿದರು.

ನಟ ಶಿವರಾಜ್​ಕುಮಾರ್ ಮಾತನಾಡಿ, ನಾವು ಆ ಕುಟುಂಬಕ್ಕೆ ಸಹಾಯ ಮಾಡಬಹುದು. ಆದರೆ, ತಮ್ಮವರನ್ನು ಕಳೆದುಕೊಂಡ ಕುಟುಂಬಕ್ಕೆ ನಾವು ಏನೂ ಹೇಳುವುದಕ್ಕೆ ಆಗಲ್ಲ. ಯಾಕೆಂದರೆ ಅವರಿಗೆ ಆಗಿರುವ ನಷ್ಟವನ್ನು ಯಾರು ಭರಿಸುವುದಕ್ಕೆ ಆಗಲ್ಲ. ನಮ್ಮ ಕೈಯಲ್ಲಿ ಆದ ಸಹಾಯ ಮಾಡಿದ್ಧೇವೆ. ಗಾಯಾಳುಗಳು ಸಹ ಬೇಗ ಗುಣಮುಖರಾಗಬೇಕು ಎಂದು ಹಾರೈಸಿದರು.

ಈ ವೇಳೆ ಭದ್ರಾವತಿ ಶಾಸಕ ಸಂಗಮೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್, ಕಲಗೂಡು ರತ್ನಾಕರ್, ಮಂಜುನಾಥ್ ಸೇರಿದಂತೆ ಇತರರು ಇದ್ದರು.

ಇದನ್ನೂ ಓದಿ: ಶಿವಮೊಗ್ಗ: ಭದ್ರಾ ಡ್ಯಾಂ ಸ್ಲೀವ್ಸ್ ಗೇಟ್‌ ಸಂಪೂರ್ಣ ಬಂದ್​, ರೈತರ ಆತಂಕ ದೂರ - Bhadra Dam

Last Updated : Jul 8, 2024, 9:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.