ETV Bharat / state

ರಾಯಚೂರು ರೈತ ದಸರಾ ಉದ್ಘಾಟನೆಗೆ ಆಗಮಿಸಿದ ಡಿ.ಕೆ.ಶಿವಕುಮಾರ್​ಗೆ​ ಘೇರಾವ್​ ಹಾಕಲು ಯತ್ನ

ಒಳ ಮೀಸಲಾತಿ ಜಾರಿಗೊಳಿಸುವಂತೆ ಘೋಷಣೆ ಕೂಗಿದ ಐಕ್ಯ ಹೋರಾಟ ಸಮಿತಿ ಕಾರ್ಯಕರ್ತರು ಡಿಸಿಎಂ ಡಿ ಕೆ.ಶಿವಕುಮಾರ್​ ಅವರಿಗೆ ಮನವಿ ನೀಡಿದರು.

author img

By ETV Bharat Karnataka Team

Published : 3 hours ago

Updated : 3 hours ago

DK Sivakumar arrived at Raichur Raita Dasara inauguration: Attempt to Gherao
ರಾಯಚೂರು ರೈತ ದಸರಾ ಉದ್ಘಾಟನೆಗೆ ಆಗಮಿಸಿದ ಡಿ.ಕೆ.ಶಿವಕುಮಾರ್​: ಘೇರಾವ್​ ಹಾಕಲು ಯತ್ನ (ETV Bharat)

ರಾಯಚೂರು: ಜಿಲ್ಲೆಯ ಸಿಂಧನೂರು ನಗರದಲ್ಲಿ ಆಯೋಜಿಸಿದ್ದ ರೈತ ದಸರಾ ಉದ್ಘಾಟನೆಗೆ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್​ ಆಗಮಿಸಿದ ವೇಳೆ, ನಗರದ ಸರ್ಕ್ಯೂಟ್​ ಹೌಸ್​ ಹೆಲಿಪ್ಯಾಡ್​ ಬಳಿ, ಘೇರಾವ್ ಹಾಕಲು ಯತ್ನಿಸಿದ ಘಟನೆ ಇಂದು ನಡೆಯಿತು.

ಒಳ ಮೀಸಲಾತಿ ಜಾರಿಗಾಗಿ ಐಕ್ಯ ಹೋರಾಟ ಸಮಿತಿ ಕಾರ್ಯಕರ್ತರು ಘೇರಾವ್ ಹಾಕಲು ಯತ್ನಿಸಿದರು. ಘೋಷಣೆ ಕೂಗಿದ ಕಾರ್ಯಕರ್ತರು ಒಳಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ಡಿಸಿಎಂಗೆ ಮನವಿ ನೀಡಿದರು. ಈ ವೇಳೆ ನೂಕು ನುಗ್ಗಲು ಸಹ ಉಂಟಾಯಿತು.

ರಾಯಚೂರು ರೈತ ದಸರಾ ಉದ್ಘಾಟನೆಗೆ ಆಗಮಿಸಿದ ಡಿ.ಕೆ.ಶಿವಕುಮಾರ್​ಗೆ​ ಘೇರಾವ್​ ಹಾಕಲು ಯತ್ನ (ETV Bharat)

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, "ಹರಿಯಾಣ ಹಾಗೂ ಜಮ್ಮು-ಕಾಶ್ಮಿರ ಎರಡು ರಾಜ್ಯಗಳ ಚುನಾವಣಾ ಫಲಿತಾಂಶ ಇನ್ನೂ ಬಂದಿಲ್ಲ. ಅಲ್ಲಿನ ಫಲಿತಾಂಶ ಬಹಳ ಏರುಪೇರು ಆಗುತ್ತಿದೆ. ಬೆಳಗ್ಗೆ ಹರಿಯಾಣದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಈಗ ಹಿಂದಿದೆ ಎಂದು‌ ಕೇಳಲ್ಪಟ್ಟೆ. ನಾನು ಈಗತಾನೆ ಹೆಲಿಕಾಪ್ಟರ್​ನಿಂದ ಇಳಿದಿದ್ದೇನೆ. ಪೂರ್ಣ ತಿಳಿದುಕೊಂಡು ಮಾತನಾಡುತ್ತೇನೆ. ಜಾತಿಗಣತಿ ವರದಿ ವಿಚಾರದಲ್ಲಿ ನಮ್ಮ ಪಕ್ಷ ಏನು ಹೇಳುತ್ತದೆಯೋ, ಅದನ್ನೇ ನಾವೆಲ್ಲ ಮಾಡುತ್ತೇವೆ" ಎಂದು ತಿಳಿಸಿದರು.

ಇದನ್ನೂ ಓದಿ: ರಾಜ್ಯದಲ್ಲಿ ಏನೇನಾಗುತ್ತಿದೆ ಎಂಬ ಬಗ್ಗೆ ಹೈಕಮಾಂಡ್ ವರದಿ ತರಿಸಿಕೊಳ್ಳುತ್ತದೆ : ಡಿ ಕೆ ಶಿವಕುಮಾರ್ - DCM D K Shivakumar

ರಾಯಚೂರು: ಜಿಲ್ಲೆಯ ಸಿಂಧನೂರು ನಗರದಲ್ಲಿ ಆಯೋಜಿಸಿದ್ದ ರೈತ ದಸರಾ ಉದ್ಘಾಟನೆಗೆ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್​ ಆಗಮಿಸಿದ ವೇಳೆ, ನಗರದ ಸರ್ಕ್ಯೂಟ್​ ಹೌಸ್​ ಹೆಲಿಪ್ಯಾಡ್​ ಬಳಿ, ಘೇರಾವ್ ಹಾಕಲು ಯತ್ನಿಸಿದ ಘಟನೆ ಇಂದು ನಡೆಯಿತು.

ಒಳ ಮೀಸಲಾತಿ ಜಾರಿಗಾಗಿ ಐಕ್ಯ ಹೋರಾಟ ಸಮಿತಿ ಕಾರ್ಯಕರ್ತರು ಘೇರಾವ್ ಹಾಕಲು ಯತ್ನಿಸಿದರು. ಘೋಷಣೆ ಕೂಗಿದ ಕಾರ್ಯಕರ್ತರು ಒಳಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ಡಿಸಿಎಂಗೆ ಮನವಿ ನೀಡಿದರು. ಈ ವೇಳೆ ನೂಕು ನುಗ್ಗಲು ಸಹ ಉಂಟಾಯಿತು.

ರಾಯಚೂರು ರೈತ ದಸರಾ ಉದ್ಘಾಟನೆಗೆ ಆಗಮಿಸಿದ ಡಿ.ಕೆ.ಶಿವಕುಮಾರ್​ಗೆ​ ಘೇರಾವ್​ ಹಾಕಲು ಯತ್ನ (ETV Bharat)

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, "ಹರಿಯಾಣ ಹಾಗೂ ಜಮ್ಮು-ಕಾಶ್ಮಿರ ಎರಡು ರಾಜ್ಯಗಳ ಚುನಾವಣಾ ಫಲಿತಾಂಶ ಇನ್ನೂ ಬಂದಿಲ್ಲ. ಅಲ್ಲಿನ ಫಲಿತಾಂಶ ಬಹಳ ಏರುಪೇರು ಆಗುತ್ತಿದೆ. ಬೆಳಗ್ಗೆ ಹರಿಯಾಣದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಈಗ ಹಿಂದಿದೆ ಎಂದು‌ ಕೇಳಲ್ಪಟ್ಟೆ. ನಾನು ಈಗತಾನೆ ಹೆಲಿಕಾಪ್ಟರ್​ನಿಂದ ಇಳಿದಿದ್ದೇನೆ. ಪೂರ್ಣ ತಿಳಿದುಕೊಂಡು ಮಾತನಾಡುತ್ತೇನೆ. ಜಾತಿಗಣತಿ ವರದಿ ವಿಚಾರದಲ್ಲಿ ನಮ್ಮ ಪಕ್ಷ ಏನು ಹೇಳುತ್ತದೆಯೋ, ಅದನ್ನೇ ನಾವೆಲ್ಲ ಮಾಡುತ್ತೇವೆ" ಎಂದು ತಿಳಿಸಿದರು.

ಇದನ್ನೂ ಓದಿ: ರಾಜ್ಯದಲ್ಲಿ ಏನೇನಾಗುತ್ತಿದೆ ಎಂಬ ಬಗ್ಗೆ ಹೈಕಮಾಂಡ್ ವರದಿ ತರಿಸಿಕೊಳ್ಳುತ್ತದೆ : ಡಿ ಕೆ ಶಿವಕುಮಾರ್ - DCM D K Shivakumar

Last Updated : 3 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.